ಜೀವನದಲ್ಲಿ ನೆನಪು ಉಳಿಯಲು ಸಾಧನೆ ಮುಖ್ಯ ಜಯಶ್ರೀ ಜೋಷಿ

KannadaprabhaNewsNetwork |  
Published : Dec 19, 2023, 01:45 AM IST
ಖ್ಯಾತ ನಟಿ ಡಾ.ಲೀಲಾವತಿ ಅವರ ನೆನಪಿಗಾಗಿ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಗಾನ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮಲೆನಾಡು ವಿದ್ಯಾಸಂಸ್ಥೆಯ ನಿರ್ದೇಶಕಿ ಜಯಶ್ರೀ ಜೋಷಿ ಉದ್ಘಾಟಿಸಿದರು. ಎಂ.ಆರ್.ಕೇಶವಮೂರ್ತಿ, ದೀಪಕ್‌ ದೊಡ್ಡಯ್ಯ, ಎಂ.ಎಸ್. ಸುಧೀರ್, ಸುಮಾ ಪ್ರಸಾದ್‌ ಇದ್ದರು. | Kannada Prabha

ಸಾರಾಂಶ

ನಮ್ಮ ಜೀವನದಲ್ಲಿ ನಾವು ಮಾಡಿದ ಸಾಧನೆ ಆಧರಿಸಿ ನೆನಪುಗಳು ಮಾತ್ರ ಉಳಿಯುತ್ತವೆ ಎಂದು ಮಲೆನಾಡು ವಿದ್ಯಾಸಂಸ್ಥೆ ನಿರ್ದೇಶಕಿ ಜಯಶ್ರೀ ಜೋಷಿ ಹೇಳಿದರು. ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಪೂರ್ವಿ ಗಾನಯಾನ-95 ಸರಣಿಯಲ್ಲಿ ಹಿರಿಯ ಖ್ಯಾತ ನಟಿ ಡಾ.ಲೀಲಾವತಿ ಅಭಿನಯದ ಚಲನಚಿತ್ರ ಗೀತೆಗಳ ವಿಶೇಷ ಮೆಲ್ಲುಸಿರೇ ಸವಿಗಾನ ಗಾನ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ನಮ್ಮ ಜೀವನದಲ್ಲಿ ನಾವು ಮಾಡಿದ ಸಾಧನೆ ಆಧರಿಸಿ ನೆನಪುಗಳು ಮಾತ್ರ ಉಳಿಯುತ್ತವೆ ಎಂದು ಮಲೆನಾಡು ವಿದ್ಯಾಸಂಸ್ಥೆ ನಿರ್ದೇಶಕಿ ಜಯಶ್ರೀ ಜೋಷಿ ಹೇಳಿದರು. ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಪೂರ್ವಿ ಗಾನಯಾನ-95 ಸರಣಿಯಲ್ಲಿ ಹಿರಿಯ ಖ್ಯಾತ ನಟಿ ಡಾ.ಲೀಲಾವತಿ ಅಭಿನಯದ ಚಲನಚಿತ್ರ ಗೀತೆಗಳ ವಿಶೇಷ ಮೆಲ್ಲುಸಿರೇ ಸವಿಗಾನ ಗಾನ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಮ್ಮ ಮಾತಿಗೆ ಪೂರಕವಾಗಿ ಸೂಕ್ತಿಯೊಂದನ್ನು ಉಲ್ಲೇಖಿಸಿ, ‘ರೂಪ, ಯೌವನ, ವಿದ್ಯೆ, ಧನಮದದ ಬಲವೆಲ್ಲಾ ಮೆಲ್ಲ ಮೆಲ್ಲನೆ ಕರಗಿ ಮುಪ್ಪಡರಿ ನಶಿಸುವುದು ಕಾಲನ ಮೂಸೆಯಲ್ಲಿ ಜಗದಾಟ ಮುಗಿದಾಗ ನೆನಪೊಂದೇ ಉಳಿಯುವುದು ಸಚ್ಚಿದಾನಂದ’ ಅಂದರೆ ರೂಪ, ಯೌವನ, ವಿದ್ಯೆ ಯಾವುದೂ ಕೂಡ ನಮ್ಮ ಜೀವನದಲ್ಲಿ ಅಷ್ಟು ಮಹತ್ವ ಪಡೆದುಕೊಳ್ಳುವುದಿಲ್ಲ. ನಾವಿದ್ದಾಗ ಮಾತ್ರ ಅವಕ್ಕೆ ಬೆಲೆ ಇರುತ್ತದೆ. ನಮ್ಮ ಜಗದಾಟ ಮುಗಿದಾಗ ಆ ನೆನಪು ಮಾತ್ರ ಉಳಿಯುತ್ತದೆ ಎಂದು ಹೇಳಿದರು.

ಲಯನ್ಸ್ ಸಂಸ್ಥೆ ರಾಯಭಾರಿ ಎಂ.ಆರ್.ಕೇಶವಮೂರ್ತಿ ಮಾತನಾಡಿ, ಆರು ದಶಕಗಳ ಕಾಲ ಸುಮಾರು 600 ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ನಮ್ಮನ್ನು ರಂಜಿಸಿದ್ದರು ಎಂದರಲ್ಲದೆ, ಕಾರ್ಯಕ್ರಮಕ್ಕೆ ಶುಭಕೋರಿದರು.

ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ ಮಾತನಾಡಿ, ಡಾ.ಲೀಲಾವತಿ ಅಭಿನಯಿಸಿದ ಚಲನಚಿತ್ರ ಗೀತೆಗಳ ಕಾರ್ಯಕ್ರಮವನ್ನು ಪೂರ್ವಿ ತಂಡದವರು ಪ್ರಸ್ತುತಪಡಿಸಿ, ಎಂ.ಎಸ್.ಸುಧೀರ್ ನೇತೃತ್ವದ ಪೂರ್ವಿ ತಂಡ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡುತ್ತಲೇ ಬರುತ್ತಿದ್ದಾರೆ ಎಂದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ಸುಮಾ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು. ಗಾಯಕ ರಾಯನಾಯಕ್ ವಂದಿಸಿದರು.

------

ಪೋಟೋ ಪೈಲ್‌ ನೇಮ್ 18 ಕೆಸಿಕೆಎಂ 6

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ