ಹುಬ್ಬಳ್ಳಿ:
ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ, ಕಳೆದ ವರ್ಷದ ಬರದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರು ಅದರಿಂದ ಹೊರಬಂದಿಲ್ಲ. ಇದೀಗ ಸರ್ಕಾರ ವಿವಿಧ ವಸ್ತುಗಳು ಬೆಲೆ ಏರಿಕೆ ಮಾಡಿರುವ ಜತೆಗೆ ತೈಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ತಕ್ಷಣ ಸರ್ಕಾರ ಇಂಧನ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.
ಮುಖಂಡ ನವೀನಕುಮಾರ ಮಾತನಾಡಿ, ಕೂಡಲೇ ಇಂಧನದ ಮೇಲಿನ ತೆರಿಗೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಮತ್ತಷ್ಟು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಪಕ್ಷದ ಮುಖಂಡ ತುಳಸಿಕಾಂತ ಖೋಡೆ, ಶ್ರೀಶೈಲ ಗಡದಿನ್ನಿ, ನವೀನಕುಮಾರ, ಶಂಕರ ಪವಾರ, ವಿನಾಯಕ ಗಾಡಿವಡ್ಡರ, ನಾಗರಾಜ್ ಗುಡದರಿ, ಅಹ್ಮದ್ ಅರಸಿಕೇರಿ, ಪುನಿತ್ ಅಡಗಲ್ಲ, ಬಾಷಾ ಮುದಗಲ್, ಶಂಕರಗೌಡ ದೊಡ್ಡಮನಿ, ಶ್ರೀಕಾಂತ ತೆಲಗರ, ಭೀಮರಾಯ ಗುಡೆನಕಟ್ಟಿ, ಅಲಿ ಸಂದಿನಲ್ಲಿ, ಬಸವರಾಜ ಹರವಿ, ದೊಡ್ಡಪ್ಪ ಧರಣಿ ಸೇರಿದಂತೆ ಹಲವರಿದ್ದರು.