ಕನ್ನಡಪ್ರಭ ವಾರ್ತೆ ಕೋಲಾರಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಜನರು ಗುರುತಿಸಿ ಶ್ಲಾಘಿಸುವಂತೆ ಆದಾಗ ಮಾತ್ರ ಪತ್ರಕರ್ತರಾಗಿರುವುದು ಸಾರ್ಥಕವಾಗುತ್ತದೆ. ಸುದ್ದಿಗಳು ಕಾಪಿ ರೈಟ್ ಇಲ್ಲದೆ ವಿಭಿನ್ನ, ವಿಶಿಷ್ಟತೆ ಹೊಂದಿದ ಸುದ್ದಿಗಳನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆಯುವಂತೆ ಆದಾಗ ಮಾತ್ರ ಪತ್ರಕರ್ತರು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಲು ಸಾಧ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ೨೦೨೪ನೇ ಸಾಲಿನಲ್ಲಿ ಸುಣ್ಣವಂಡ ಶ್ರೀನಿವಾಸ್ ಚಂಗಪ್ಪ ಪ್ರಶಸ್ತಿಗೆ ಭಜನರಾದ ಮುಳಬಾಗಿಲಿನ ಹಿರಿಯ ಪತ್ರಕರ್ತರಾದ ಎ.ಅಪ್ಪಾಜಿಗೌಡ ಮತ್ತು ಮಂಡ್ಯದ ಕೆ.ಪ್ರಹ್ಲಾದ ರಾವ್ ಪ್ರಶಸ್ತಿಗೆ ಭಜನರಾದ ಬಂಗಾರಪೇಟೆ ವರದಿಗಾರ ಕೆ.ರಮೇಶ್ರಿಗೆ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಸ್ವಲ್ಪ ತಡವಾಗಿಯಾದರೂ ಪ್ರಶಸ್ತಿ ಸಿಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಂಘದ ರಾಜ್ಯ ಖಜಾಂಜಿ ವಾಸುದೇವ ಹೊಳ್ಳ ಮಾತನಾಡಿ, ಪ್ರಶಸ್ತಿಗೆ ಭಜನರಾದವರನ್ನು ಅಭಿನಂಧಿಸಿ ಗೌರವಿಸಬೇಕಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿ, ಅಭಿನಂದಿಸಿ ಗೌರವಿಸುವುದು ಇತರೆ ಪತ್ರಕರ್ತರಿಗೆ ಪೇರಣೆಯಾಗಲಿದೆ ಎಂದರು. ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ವಿ.ಮುನಿರಾಜು ಮಾತನಾಡಿ, ಪತ್ರಕರ್ತರಾದ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ರನ್ನು ರಾಜ್ಯ ಪತ್ರಕರ್ತರ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ, ಪ್ರಶಸ್ತಿಗೆ ಇಬ್ಬರು ಅರ್ಹರಾಗಿರುವ ಪತ್ರಕರ್ತರಾಗಿದ್ದಾರೆ ಎಂದರು.