ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜೆಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮಲೆಯೂರು ಗುರುಸ್ವಾಮಿ ಪ್ರತಿಷ್ಠಾನ ಮತ್ತು ಪ್ರಕಾಶನ ವತಿಯಿಂದ ಭಾನವಾರ ನಡೆದ ''''''''ಮಲೆಯೂರು ಮಂದಾರ'''''''' ಕೃತಿ ಲೋಕಾರ್ಪಣೆ ಹಾಗೂ ಮಲೆಯೂರು ಗುರುಸ್ವಾಮಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜಗತ್ತು ಬದಲಾಗುತ್ತಿದ್ದು, ಮೌಲ್ಯಗಳು ವಿನಾಶವಾಗುತ್ತಿದೆ. ಬಂಡವಾಳ ಹೆಚ್ಚಾದ ಹಾಗೇ ಮನುಷ್ಯನು ಕಾಣುವ ಜಗತ್ತನ್ನು ಬಿಟ್ಟು, ಕಾಣದ ಜಗತ್ತನ್ನು ತೋರಿಸಲಾಗುತ್ತಿದೆ. ಇಂದಿನ ಸಾಹಿತಿಗಳು ಇದನ್ನೆ ಮಾಡುತ್ತಿದ್ದಾರೆ. ಎಂದರು.ಚಿಕ್ಕಲ್ಲೂರು ಜಾತ್ರೆಗೆ ಹೋಗಿದ್ದೆ. ಅಲ್ಲಿ ಲಕ್ಷಾಂತರ ಜನ ಬಂದು ಸೇರಿದ್ದರು. ಇದೇನು ತಿರುಪತಿ ತಿಮ್ಮಪ್ಪ ದೇವಸ್ಥಾನವಲ್ಲ. ಟಿವಿಯಲ್ಲಿ ಬರುವುದಿಲ್ಲ. ಆದರೆ, ಇದೊಂದು ಸಾಂಸ್ಕೃತಿಕ ಚರಿತ್ರೆಯನ್ನು ಜೀವಂತವಾಗಿಸಿದೆ. ಆ ಮೂಲ ಸಾಂಸ್ಕೃತಿಕ ಮೌಲ್ಯಗಳು ಉಳಿದುಕೊಂಡಿವೆ. ಆದರೆ ಇದು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲ. ಸ್ವಾಮೀಜಿಗಳು, ಸಾಹಿತಿಗಳಿಗೂ ಅರ್ಥವಾಗುತ್ತಿಲ್ಲ. ಇಂತಹ ಸಾಂಸ್ಕೃತಿಕ ಮೌಲ್ಯ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇಂದು ಶಿಕ್ಷಣ ಕೂಡ ಉದ್ಯಮೀಕರಣವಾಗಿ ಎಲ್ಲವನ್ನು ನಾಶ ಮಾಡುತ್ತಿದೆ. ಇದರ ನಡುವೆ ಅಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಹಿಂದೆ ಮನುಷ್ಯರಲ್ಲಿ ಬಹಳಷ್ಟು ಮಂದಿ ಯೋಗ್ಯರಿದ್ದರು. ಇವತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ. ಆದರೆ ಪ್ರಯೋಜನಕಾರಿ ಆಗಿಲ್ಲ. ಏಕೆಂದರೆ ಕಳೆದ ಆರೇಳು ತಿಂಗಳಿಂದ ನನಗಿರುವ ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡಲು ಯಾರಿಂದ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಛಾಪು ಮೂಡಿಸಿದ್ದಾರೆ. ಕಾಲೇಜಿನ ಪ್ರಾಧ್ಯಾಪಕರಾಗಿರುವ ವ್ಯಕ್ತಿ ಯಾವುದೇ ಪ್ರಚಾರವನ್ನೂ ಬಯಸದೇ ಇಷ್ಟೊಂದು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಬಂಗಾರದೊಡ್ಡಿ ಕಾದಂಬರಿಯಲ್ಲಿ ಗುರುಸ್ವಾಮಿ ಅವರ ಸಾಹಿತ್ಯ ಪ್ರತಿಭೆಯನ್ನು ಮತ್ತೆ ಮತ್ತೆ ಕಾಣಬಹುದು. ಮಲೆಯೂರು ಗುರುಸ್ವಾಮಿ ಅವರ ನಿರ್ಗಮನದಿಂದ ವಿಶಾಲವಾದ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ. ಗುರುಸ್ವಾಮಿ ಅವರು ಮಲೆಯೂರಿನ ಬಗ್ಗೆ ಸಂಪರ್ಕ ಬೆಳೆಸಿಕೊಂಡಿದ್ದರು. ಬರೀ ಅವರೊಬ್ಬ ವ್ಯಕ್ತಿಯಾಗಿರದೆ, ಶಕ್ತಿಯಾಗಿದ್ದರು. ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಕೊಂಡಾಡಿದರು.
ಮಲೆಯೂರು ಗುರುಸ್ವಾಮಿ ಸಾಹಿತ್ಯದಲ್ಲಿನ ಪಾತ್ರಗಳನ್ನು ಗಮನಿಸಿದರೆ ಅವರ ಹೃದಯ ಯಾರೊಂದಿಗೆ ಮಿಡಿಯುತ್ತಿತ್ತು ಎಂಬುದನ್ನು ಮನವರಿಕೆ ಮಾಡಲಿದೆ. ಮಲೆಯೂರು ಮಂದರದಲ್ಲಿ ಮಲೆಯೂರರ ಕೃತಿಗಳ ವಿಮರ್ಶೆಯನ್ನು ನೀಗಿಸಿದ್ದಾರೆ. ಸಂಶಾ ಕಾದಂಬರಿಯ ಮೂಲಕ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡಿದ್ದಾರೆ.
ಕುಂದೂರು ಮಠದ ಡಾ.ಶ್ರೀ. ಶರತ್ ಚಂದ್ರ ಸ್ವಾಮೀಜಿ ಸಮ್ಮುಖವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಲೆಯೂರು ಮಂದಾರ ಕೃತಿ ಲೋಕಾರ್ಪಣೆಗೊಳಿಸಿದರು.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ನಿವೃತ್ತ ಉಪನ್ಯಾಸಕಿ ಜಯಂತಿ ಮಲೆಯೂರು ಗುರುಸ್ವಾಮಿ ಮುಖ್ಯ ಅತಿಥಿಗಳಾಗಿದ್ದರು. ಪ್ರಕಾಶಕ ಡಿ.ಎನ್. ಲೋಕಪ್ಪ, ಕಾನ್ಯ ಶಿವಮೂರ್ತಿ ಮೊದಲಾದವರು ಇದ್ದರು. ಪ್ರೊ. ಮೊರಬದ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಎಂ. ಸುಗುಣ ಪ್ರಾರ್ಥಿಸಿದರು. ಕೆಬ್ಬೆಪುರ ರಾಜು ಸ್ವಾಗತಿಸಿದರು. ಪ್ರೊ.ಡಿ.ಎಸ್. ಸದಾಶಿವಮೂರ್ತಿ ನಿರೂಪಿಸಿದರು.