ಅರಸೀಕೆರೆ: ತಾಲೂಕಿನ ಕಣ್ಣಕಟ್ಟೆ ಹೋಬಳಿಯ ಕಲ್ಲುಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊಸದಾಗಿ ವಾಲೇಹಳ್ಳಿ ಫೀಡರ್ ಸಿದ್ಧವಾಗಿದ್ದು ಇದಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಚಾಲನೆ ನೀಡಿದರು. ಈ ಹೊಸ ಫೀಡರ್ನಿಂದಾಗಿ ವಾಲೇಹಳ್ಳಿ, ಬೈರಾಪುರ, ರಂಗನಾಯಕನಕೊಪ್ಪಲು, ಕಲ್ಲುಗುಂಡಿ, ಕಲ್ಲುಸಾಧಾರಹಳ್ಳಿ ಹಾಗೂ ಸುತ್ತಮುತ್ತಲಿನ ರೈತರಿಗೆ ಅನುಕೂಲ ವಾಗಲಿದೆ ಎಂದರು.ಈ ಸಂದರ್ಭದಲ್ಲಿ ಕಣಕಟ್ಟೆ ಶಾಖಾಧಿಕಾರಿಗಳದ ಮಲ್ಲಿಕಾರ್ಜುನಯ್ಯ, ದೊಡ್ಡಮೇಟಿಕುರ್ಕೆ ಶಾಖಾಧಿಕಾರಿಗಳದ ರಘು ಮತ್ತು ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ ಇನ್ನು ಮುಂತಾದ ಅಧಿಕಾರಿಗಳು ಮತ್ತು ವಿದ್ಯುತ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.