ಕೊಳ್ಳೇಗಾಲ: ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರ ಚಲನಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಈ ವ್ಯಕ್ತಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ನೀಡಬಾರದು. ಅತಿಕ್ರಮವಾಗಿ ಅವರ ಚಲನಚಿತ್ರಗಳನ್ನು ಬಿಡುಗಡೆ ಮಾಡುವಂತೆ ಚಿತ್ರಮಂದಿರಗಳು ಮುಂದಾದರೆ, ಕರ್ನಾಟಕ ರಕ್ಷಣಾ ತೀವ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷರು ಯೂನುಸ್ ಪಾಷ, ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್, ಹೊಸ ಹಂಪಾಪುರ ಗ್ರಾಮ ಘಟಕ ರೇವಣ್ಣನಾಯಕ, ಉಪಾಧ್ಯಕ್ಷರು ಶ್ರೀಧರ್, ಜಿಲ್ಲಾ ಉಪಾಧ್ಯಕ್ಷರು ಸಮೀಷರೀಪ್, ಜಿಲ್ಲಾ ಸಲಹೆಗಾರರು ಅಣಗಳ್ಳಿ ಬಸವರಾಜು, ಪದಾಧಿಕಾರಿಗಳು ಸುರೇಶ್ ಸಿಂಗನಲ್ಲೂರು, ರೇಚಣ್ಣ, ಮಹಮ್ಮದ್ ಅಬ್ಜಲ್(ಅಜ್ಜು), ಹಾಗೂ ಇತರರು ಇದ್ದರು.