ಕನಕದಾಸರ ಸಾಮಾಜಿಕ ಕ್ರಾಂತಿ ಶ್ಲಾಘನೀಯ

KannadaprabhaNewsNetwork |  
Published : Nov 09, 2025, 03:00 AM IST
ಫೋಟೋ ೮ಕೆಆರ್‌ಟಿ-೧ ಮತ್ತು ೮ಕೆಆರ್‌ಟಿ೧ಎ: ಕಾರಟಗಿಯ ಕನಕದಾಸ ವೃತ್ತದಲ್ಲಿ ಶನಿವಾರ ಭಕ್ತ ಕನಕದಾಸ ಜಯಂತಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಧಿಕಾರಿಗಳು, ಸಮಾಜದವರು, ಪುರಸಭೆ ಸದಸ್ಯರು ಇದ್ದರು. | Kannada Prabha

ಸಾರಾಂಶ

ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ ಶರಣರು ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಭಕ್ತ ಕನಕದಾಸರು ಒಬ್ಬರಾಗಿದ್ದಾರೆ

ಕಾರಟಗಿ: ದಾಸ ಸಾಹಿತ್ಯ ಶ್ರೀಮಂತಗೊಳಿಸಿ ದಾಸ ಸಾಹಿತ್ಯದ ಮೂಲಕ ಜಾತಿ ಮತ, ಕುಲಗಳ ಬೇಧಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಿ ಭಕ್ತಿಯ ಮೂಲಕ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಪಡೆದ ಸಂತ ಭಕ್ತ ಕನಕದಾಸರು ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಕನಕದಾಸ ವೃತ್ತದಲ್ಲಿ ಶನಿವಾರ ಪುರಸಭೆ ಮತ್ತು ತಾಲೂಕಾಡಳಿತದಿಂದ ಹಮ್ಮಿಕೊಂಡ ಭಕ್ತ ಕನಕದಾಸರ ಜಯಂತಿ ನಿಮಿತ್ತ ಕನಕದಾಸ ನಾಮಫಲಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಿ ಪುತ್ಥಳಿ ನಿರ್ಮಾಣಕ್ಕೆ ಸಾಂಕೇತಿಕವಾಗಿ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ ಶರಣರು ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಭಕ್ತ ಕನಕದಾಸರು ಒಬ್ಬರಾಗಿದ್ದಾರೆ. ೧೫-೧೬ನೇ ಶತಮಾನದಲ್ಲಿ ಜನಪ್ರೀಯರಾಗಿದ್ದ ಭಕ್ತಿಪಂಥದಲ್ಲಿ ಮುಖ್ಯ ಹರಿದಾಸರ ಭಕ್ತ ಕನಕದಾಸರು ಒಬ್ಬರು. ಭಕ್ತ ಕನಕದಾಸರು ಅಂದು ಜಟಿಲವಾಗಿ ಬೇರೂರಿದ್ದ ಸಾಮಾಜಿಕ ಮೌಢ್ಯ ಹೋಗಲಾಡಿಸಲು ಹರಿಭಕ್ತಸಾರ, ರಾಮಧ್ಯಾನಚರಿತೆ, ಕೃಷ್ಣ ಚರಿತೆ, ನಳಚರಿತೆ, ಮೋಹನ ತರಂಗೀಣಿ, ಕನಕಮಂಡಿಗೆ ನರಸಿಂಹಸ್ತೋತ್ರ ಹೀಗೆ ಹಲವಾರು ಕೃತಿ ರಚಿಸುವ ಮೂಲಕ ಜಗತ್ತಿಗೆ ಬೆಳಕು ಚೆಲ್ಲಿದರು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಮಾತನಾಡಿ, ಸಂತ ಕನಕದಾಸರು ತಾವು ಕಂಡ ಸಮಾಜದ ಹಲವಾರು ವಿಚಾರ,ತತ್ವ ತಮ್ಮ ಆಡು ಭಾಷೆಯಲ್ಲಿ ಒಗಟುಗಳ ರೂಪದಲ್ಲಿ ಜಗತ್ತಿಗೆ ಸಾರಿದರು. ಸಮಾಜ ಸುಧಾರಕರಾಗಿ ಮೇಲು ಕೀಳು ಎಂಬ ಭಾವ ಮೆಟ್ಟಿ ಭಾವ್ಯಕ್ಯತೆಯನ್ನು ೫೦೦ ವರ್ಷಗಳ ಹಿಂದೆಯೇ ಸಾರಿದ ಕನಕದಾಸರು ಮಹಾನ್ ಸಂತರು ಎಂದರು.

ಇದಕ್ಕೂ ಮುನ್ನ ಕನಕದಾಸರ ನಾಮಫಲಕಕ್ಕೆ ಸಮಾಜದ ಮುಖಂಡ ರಾಜಶೇಖರ ಆನೆಹೊಸುರ ಶ್ರದ್ಧಾಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಪುಷ್ಪಹಾರ ಹಾಕಿದರು. ನಂತರ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಲುಮತ ಸಮಾಜದ ಹಿರಿಯರು, ಯುವ ಮುಖಂಡರು, ಯುವಕ ಸಂಘಟನೆ ಪದಾಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ ನಾಮಫಲಕಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಈಶಪ್ಪ, ಸದಸ್ಯರಾದ ಮಂಜುನಾಥ ಮೇಗೂರ, ಆನಂದ ಮೆಗಡೆಮನಿ, ಸುರೇಶ ಭಜಂತ್ರಿ, ಬಸವರಾಜ ಕೊಪ್ಪದ, ಎಎಸ್‌ಐ ಬಸವರಾಜ, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ಉಮೇಶ ಭಂಗಿ, ನಿವೃತ್ತ ಪಿಎಸ್‌ಐ ಮಲ್ಲಪ್ಪ ಕುರಕುಂದಿ, ಪುರಸಭೆ ಮಾಜಿ ಅಧ್ಯಕ್ಷ ಶರಣೇಶ ಸಾಲೋಣಿ, ಶಶಾಂಕ ತಂಗಡಗಿ, ಮೌನೇಶ ದಢೇಸ್ಗೂರು, ಪರಕಿ ಶರಣಪ್ಪ, ಹೊಳೆಯಪ್ಪ ದೇವರಮನಿ, ಜಿ.ಕೆ. ರವಿ, ಚಂದ್ರು ಆನೆಹೋಸುರ, ವಿರುಪಣ್ಣ ಮೂಲಿಮನಿ, ಭೀಮಣ್ಣ ಕರಡಿ, ರೈತ ಸಂಘದ ಶರಣೆಗೌಡ ಯರಡೊಣಾ, ರಮೇಶ ಸಾಲೋಣಿ, ನರಸಪ್ಪ ಸುದ್ದಿ, ಶರಣಪ್ಪ ಸಾಲೋಣಿ, ಕನಕದಾಸ ಯುವಕ ಸಂಘದ ಸರ್ವ ಸದಸ್ಯರು, ಹಾಲುಮತ ಸಮಾಜದ ಯುವ ಮುಖಂಡರು ಇದ್ದರು.

ಭೂಮಿ ಪೂಜೆ:

ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸ ಪುತ್ಥಳಿ ಪ್ರತಿಷ್ಠಾಪಿಸುವ ಹಿನ್ನೆಲೆಯಲ್ಲಿ ಹಾಲುಮತ ಸಮಾಜ ಬಾಂಧವರು ಶನಿವಾರ ಮೂರ್ತಿ ಸ್ಥಾಪನೆಯ ಸ್ಥಳದ ಭೂಮಿ ಪೂಜೆ ನಡೆಸಿದರು. ಅರ್ಚಕ ಸಂತೋಷ ಆಚಾರ, ಬಸವರಾಜ ಸ್ವಾಮಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸ್ಥಳ ಶುದ್ಧಿಕರಣ ನಡೆಸಿ ಹೋಮ ಹವನ ನಡೆಸಿದರು.

ಬಳಿಕ ಹಾಲುಮತ ಸಮಾಜದ ಶರಣಪ್ಪ ಪರಕಿ ಮಾತನಾಡಿ, ಕನಕದಾಸ ವೃತ್ತದಲ್ಲಿ ಭಕ್ತ ಕನಕದಾಸರ ಭವ್ಯ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಕನಕದಾಸರ ೫೩೮ ನೇಯ ಜಯಂತಿ ದಿನದಂದೇ ಅರ್ಚಕರ ಪೌರೋಹಿತ್ಯದಲ್ಲಿ ಸ್ಥಳದ ಭೂಮಿ ಪೂಜೆ ಶ್ರದ್ಧಾಭಕ್ತಿಪೂರ್ವಕವಾಗಿ ನಡೆಸಲಾಗಿದೆ. ಪುತ್ಥಳಿ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ₹ ೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಬರುವ ಜನವರಿಯಲ್ಲಿ ಮೂರ್ತಿ ಸ್ಥಾಪನೆಯಂದು ಕನಕ ಸಂದೇಶ ಸಮಾವೇಶ ಹಮ್ಮಿಕೊಂಡಿದ್ದು ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಗುವುದು ಎಂದರು.

ಈ ವೇಳೆ ಜನಗಂಡೆಪ್ಪ ಪೂಜಾರಿ, ರಾಜಶೇಖರ ಆನೆಹೊಸುರ, ಮಲ್ಲಪ್ಪ ಕುರಕುಂದಿ, ಪರಸಪ್ಪ ದಾರಿಮನಿ, ಅಯ್ಯಪ್ಪ ಸುದ್ದಿ, ಲಿಂಗಪ್ಪ ರೌಡಕುಂದಿ, ದೇವಪ್ಪ ಬಾವಿಕಟ್ಟಿ, ಶರಣಪ್ಪ ಅಂಗಡಿ, ಶಂಕ್ರಪ್ಪ ಗಚ್ಚಿನಮನಿ, ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಇತರರು ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ