ಲಕ್ಷ್ಮೇಶ್ವರ: ಕನ್ನಡದ ದಾಸ ಪರಂಪರೆಯಲ್ಲಿ ೨೫೦ಕ್ಕೂ ಹೆಚ್ಚು ದಾಸರಲ್ಲಿ ದಾಸಶ್ರೇಷ್ಠರು ಎಂದರೆ ಕನಕದಾಸರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು. ಸಮಸಮಾಜ ನಿರ್ಮಾಣದ ಹರಿಕಾರರು. ಕರ್ನಾಟಕ ಸಂಗೀತಕ್ಕೆ ಬಹುದೊಡ್ಡ ಕಾಣಿಕೆ ಕೊಟ್ಟವರು ಎಂದು ತಾಲೂಕು ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ತಿಳಿಸಿದರು.
ಕೆಂಚಮ್ಮ ಮತ್ತು ಸಾವಿರಕುರಿ ಕನಕದಾಸರ ಕೀರ್ತನೆಯನ್ನು ಹಾಡಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಬಾಲೆಹೊಸೂರು ಕನಕದಾಸರ ಕುರಿತಾದ ಸ್ವರಚಿತ ಕವನ ವಾಚನ ಮಾಡಿದರು.
ಎಂ.ವಿ. ಹೂಗಾರ, ಚಂದ್ರಶೇಖರ ವಡಕಣ್ಣವರ ಕನಕದಾಸರ ಕರ್ತನೆಗಳನ್ನು ಹಾಡಿದರು. ಎನ್.ವಿ. ಹೇಮಗಿರಿಮಠ, ಪಿ.ಎಚ್. ಕೊಂಡಾಬಿಂಗಿ, ನಾಗರಾಜ ಮಜ್ಜಿಗುಡ್ಡ, ಮಂಜುನಾಥ ಚಾಕಲಬ್ಬಿ, ಉಮೇಶ ನೇಕಾರ, ಶಂಕರ ಶಿಳ್ಳಿನ, ಎಚ್.ಡಿ. ನಿಂಗರೆಡ್ಡಿ, ಎಸ್.ಎಫ್. ಆದಿ, ಜೆ.ಎಸ್. ರಾಮಶೆಟ್ಟರ, ಅಶೋಕ ಸರವಿ, ರವೀಂದ್ರ ಚೌಹಾಣ, ಕೃಷ್ಣ ಗಾರಗಿ, ಆರ್.ಎಸ್. ಪಾಟೀಲ, ಪ್ರಭು ಹಾಲಗುಂಡಿ, ಪುಷ್ಪ ಹೇಮಗಿರಿಮಠ, ಸುಮ ಗಾರಗಿ, ಶಿವಮ್ಮ ಗೋಣೆಪ್ಪನವರ, ಶಕುಂತಲಾ ಹೋರಿ ಇದ್ದರು.