ಕನ್ನಡಪ್ರಭ ವಾರ್ತೆ ತಾಳಿಕೋಟೆ
ಉಪನ್ಯಾಸಕ ಡಾ.ಎ.ಬಿ.ಇರಾಜ ಮಾತನಾಡಿ, ಕರ್ನಾಟಕದ ನೆಲ ನಾಲ್ಕು ಭಾಗಗಳಾಗಿ ಒಳಗೊಂಡಿತ್ತು, ಕಾವೇರಿಯಿಂದ ಗೋದಾವರಿವರೆಗೆ ಇತಿಹಾಸ ಪರಂಪರೆ ಹೊಂದಿದ ಈ ನಾಡು ನಾಟ್ಯ ಪರಂಪರೆ ವಚನ ಸಾಹಿತ್ಯ ಶಿಲ್ಪ ಕಲೆಯೊಂದಿಗೆ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಈ ವೇಳೆ ಎಸ್ಎಸ್ಎಲ್ಸಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ೩೯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ತಾಪಂ ಇಒ ಅನಸೂಯಾ ಚಲವಾದಿ, ಪಿಎಸ್ಐ ಜ್ಯೋತಿ ಖೋತ್, ಪಿಎಸ್ಐ ಎಸ್.ಎಂ.ಪಡಶೆಟ್ಟಿ, ಪುರಸಭಾ ಅಧ್ಯಕ್ಷೆ ಜುಬೇದಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಮುಖ್ಯಾಧಿಕಾರಿ ವಸಂತ ಪವಾರ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ, ಉಪಸ್ಥಿತರಿದ್ದರು. ಸಿಆರ್ಸಿ ರಾಜು ವಿಜಾಪೂರ, ಶಿಕ್ಷಕಿ ಸುವರ್ಣಾ ಗದಗಿಮಠ ನಿರೂಪಿಸಿದರು.