ಸಡಗರ ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ

KannadaprabhaNewsNetwork |  
Published : Jun 12, 2025, 03:56 AM IST
ಹಳೇ ಹುಬ್ಬಳ್ಳಿ ಜಂಗ್ಲಿ​​ಪೇಟ್‌ನಲ್ಲಿ ಬುಧವಾರ ಸಂಜೆ ಕರಿ ಹರಿಯುವ ಸ್ಪರ್ಧೆ ನಡೆಯಿತು. | Kannada Prabha

ಸಾರಾಂಶ

ಎತ್ತು ಹಾಗೂ ಹೋ​ರಿ​ಗ​ಳ ಕೊಂಬಿಗೆ ಬ​ಣ್ಣ ಹ​ಚ್ಚ​ಲಾ​ಗಿತ್ತು. ಜೂ​ಲಾ​ಗ​ಳನ್ನು ಹಾಕಿ, ಕೊ​ಬ್ಬರಿ​ಗ​ಳಿಗೆ ರಿ​ಬ್ಬನ್‌ ಕಟ್ಟಿ ಸಿಂಗ​ರಿ​ಸ​ಲಾ​ಗಿ​ತ್ತ​ಲ್ಲದೇ, ಕೊ​ರ​ಳಲ್ಲಿ ಕ​ಡಬು, ಕೊ​ಡ​ಬಳೆ, ಕೊ​ಬ್ಬ​ರಿ ಸರ ಹಾಕಿ ವಿ​ಶೇಷ ಪೂಜೆ ಸ​ಲ್ಲಿ​ಸ​ಲಾ​ಯಿ​ತು. ಸಂಜೆ ನ​ಗ​ರದ ಕೆಲ ಪ್ರ​ದೇ​ಶ​ದಲ್ಲಿ ಹೋ​ರಿ​ಗ​ಳನ್ನು ಓ​ಡಿ​ಸುವ ಮತ್ತು ಬೆ​ದ​ರಿ​ಸುವ ಸ್ಪ​ರ್ಧೆ ನ​ಡೆ​ದವು. ಜಾ​ನು​ವಾ​ರು​ಗ​ಳ ಕೊಂಬಿ​ಗೆ ಕ​ಟ್ಟಿದ್ದ ಕೊ​ಬ್ಬರಿ ಹಾಗೂ ಚ​ಕ್ಕುಲಿ ಸೇ​ರಿ​ದಂತೆ ವಿ​ವಿಧ ತಿ​ನಿ​ಸು​ಗ​ಳನ್ನು ಹ​ರಿ​ದು​ಕೊ​ಳ್ಳುವ ಸ್ಪ​ರ್ಧೆ​ಯಲ್ಲಿ ಯು​ವ​ಕರು ಭಾ​ಗ​ವ​ಹಿ​ಸಿ​ದ್ದರು.

ಹುಬ್ಬಳ್ಳಿ: ಕೃಷಿ ಚ​ಟು​ವ​ಟಿಕೆ ಆ​ರಂಭಿ​ಸುವ ಮುನ್ನ ನ​ಡೆ​ಯುವ ರೈ​ತಾಪಿ ವ​ರ್ಗದ ಸಾಂಸ್ಕೃ​ತಿಕ ಹಾಗೂ ಧಾ​ರ್ಮಿಕ ಹ​ಬ್ಬ​ಗ​ಳಲ್ಲಿ ಒಂದಾದ ಕಾರ ಹು​ಣ್ಣಿ​ಮೆ​ಯನ್ನು ಬು​ಧ​ವಾರ ಮ​ಹಾ​ನ​ಗರ ಸೇ​ರಿ​ದಂತೆ ಎ​ಲ್ಲೆಡೆ ಸ​ಡ​ಗರ, ಸಂಭ್ರ​ಮ​ದಿಂದ ಆ​ಚ​ರಿ​ಸ​ಲಾ​ಯಿ​ತು.

ನ​ಗ​ರದ ಹಳೇ ಹುಬ್ಬಳ್ಳಿ ಜಂಗ್ಲಿ​​ಪೇಟ್‌, ಉ​ಣ​ಕಲ್‌, ಭೈ​ರಿ​ದೇ​ವ​ರ​ಕೊಪ್ಪ, ಅ​ಮ​ರ​ಗೋ​ಳ, ಗಾ​ಮ​ನ​ಗಟ್ಟಿ, ಗೋ​ಪ​ನ​ಕೊಪ್ಪ, ನ​ವ​ಲೂರು ಸೇ​ರಿ​ದಂತೆ ವಿ​ವಿ​ಧೆಡೆ ಕಾರ ಹು​ಣ್ಣಿ​ಮೆ ಆ​ಚ​ರಣೆ ನ​ಡೆ​ಯಿ​ತು.

ಎತ್ತು ಹಾಗೂ ಹೋ​ರಿ​ಗ​ಳ ಕೊಂಬಿಗೆ ಬ​ಣ್ಣ ಹ​ಚ್ಚ​ಲಾ​ಗಿತ್ತು. ಜೂ​ಲಾ​ಗ​ಳನ್ನು ಹಾಕಿ, ಕೊ​ಬ್ಬರಿ​ಗ​ಳಿಗೆ ರಿ​ಬ್ಬನ್‌ ಕಟ್ಟಿ ಸಿಂಗ​ರಿ​ಸ​ಲಾ​ಗಿ​ತ್ತ​ಲ್ಲದೇ, ಕೊ​ರ​ಳಲ್ಲಿ ಕ​ಡಬು, ಕೊ​ಡ​ಬಳೆ, ಕೊ​ಬ್ಬ​ರಿ ಸರ ಹಾಕಿ ವಿ​ಶೇಷ ಪೂಜೆ ಸ​ಲ್ಲಿ​ಸ​ಲಾ​ಯಿ​ತು.

ಸಂಜೆ ನ​ಗ​ರದ ಕೆಲ ಪ್ರ​ದೇ​ಶ​ದಲ್ಲಿ ಹೋ​ರಿ​ಗ​ಳನ್ನು ಓ​ಡಿ​ಸುವ ಮತ್ತು ಬೆ​ದ​ರಿ​ಸುವ ಸ್ಪ​ರ್ಧೆ ನ​ಡೆ​ದವು. ಜಾ​ನು​ವಾ​ರು​ಗ​ಳ ಕೊಂಬಿ​ಗೆ ಕ​ಟ್ಟಿದ್ದ ಕೊ​ಬ್ಬರಿ ಹಾಗೂ ಚ​ಕ್ಕುಲಿ ಸೇ​ರಿ​ದಂತೆ ವಿ​ವಿಧ ತಿ​ನಿ​ಸು​ಗ​ಳನ್ನು ಹ​ರಿ​ದು​ಕೊ​ಳ್ಳುವ ಸ್ಪ​ರ್ಧೆ​ಯಲ್ಲಿ ಯು​ವ​ಕರು ಭಾ​ಗ​ವ​ಹಿ​ಸಿ​ದ್ದರು. ನಂತರ ಬಿಳಿ ಹಾಗೂ ಕರಿ ಎ​ತ್ತು​ಗ​ಳಿಂದ ಕರಿ ಹ​ರಿ​ಯುವ ಸಂಪ್ರ​ದಾ​ಯವೂ ನ​ಡೆ​ಯಿ​ತು.

ಮ​ಹಿ​ಳೆ​ಯ​ರಿಂದ ವಟ ಸಾ​ವಿತ್ರಿ ಪೂಜೆ: ಹು​ಬ್ಬ​ಳ್ಳಿ ದೇ​ಶ​ಪಾಂಡೆ ನ​ಗರ, ಕೇ​ಶ್ವಾ​ಪೂರ, ವಿ​ದ್ಯಾ​ನ​ಗರ, ಲಿಂಗ​ರಾಜ ನ​ಗರ, ಕ​ಮ​ರಿ​ಪೇ​ಟೆ, ಅ​ಕ್ಷಯ ಕಾಲನಿ, ಗೋ​ಕುಲ ಗ್ರಾಮ, ಉ​ಣ​ಕಲ್‌ ಸೇ​ರಿ​ದಂತೆ ಎ​ಲ್ಲೆಡೆ ಬು​ಧ​ವಾರ ವಟ ಸಾ​ವಿತ್ರಿ ಪೂ​ಜೆಯನ್ನು ಶ್ರದ್ಧಾ ಬ​ಕ್ತಿ​ಯಿಂದ ಆ​ಚ​ರಿ​ಸಿ​ದ​ರು.

ಮ​ಹಿ​ಳೆ​ಯರು ಹ​ತ್ತಿ​ರದ ಅ​ರಳಿ ಮ​ರಕ್ಕೆ ಪೂಜೆ ಸ​ಲ್ಲಿಸಿ, ತಮ್ಮ ಇ​ಷ್ಟಾರ್ಥ ಈ​ಡೇ​ರಿ​ಸುವಂತೆ ಅ​ರಳಿ ಮ​ರಕ್ಕೆ ನೂ​ಲನ್ನು ಸು​ತ್ತುವ ಸಂಪ್ರ​ದಾ​ಯ​ವಿದೆ. ಅದೇ ರೀತಿ ಇ​ಷ್ಟಾರ್ಥ ಈ​ಡೇ​ರಿ​ದ​ವರು ವಿ​ಶೇಷ ಪೂಜೆ ಸ​ಲ್ಲಿಸಿ, ನೈ​ವಿದ್ಯೆ ಹಿ​ಡಿ​ಯು​ವುದು ವಾ​ಡಿಕೆ ಇದೆ. ನ​ಸು​ಕಿನ ಜಾ​ವ​ದಿಂದ ರಾ​ತ್ರಿ​ಯ​ವ​ರೆಗೂ ಅ​ರಳಿ ಮ​ರಕ್ಕೆ ಮ​ಹಿ​ಳೆ​ಯರು, ಯು​ವ​ತಿ​ಯರು ಪೂಜೆ ಸ​ಲ್ಲಿ​ಸು​ತ್ತಿ​ದ್ದದ್ದು ಕಂಡು ಬಂದಿ​ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ