ಕಾಯಕವೇ ಕೈಲಾಸ ಬಸವಣ್ಣರ ಸಂದೇಶ ಸಾಕಷ್ಟು ಅರ್ಥ ನೀಡುತ್ತದೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : May 01, 2025, 12:46 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಬಸವಣ್ಣ ಅವರಂತ ಮಹಾನ್ ನಾಯಕರ ಸಂದೇಶಗಳನ್ನು ಕೇವಲ ದಿನಾಚರಣೆಗೆ ಸೀಮಿತಗೊಳಿಸದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕು. ಬಸವಣ್ಣನವರು ತಮ್ಮ ಅನುಭವ ಮಂಟಪದ ಮೂಲಕ ಜಾತಿವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಉತ್ತಮ ನೀಡಿರುವ ಬಸವಣ್ಣನವರ ತತ್ವ-ಸಂದೇಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಸವಣ್ಣರ ಜಯಂತಿಯಲ್ಲಿ ಮಾತನಾಡಿ, ಬಸವಣ್ಣನವರು ತಮ್ಮ ಅನುಭವ ಮಂಟಪದ ಮೂಲಕ ಜಾತಿವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದರು. ಕಾಯಕವೇ ಕೈಲಾಸ ಎಂದು ನೀಡಿರುವ ಸಂದೇಶ ಸಾಕಷ್ಟು ಅರ್ಥ ನೀಡುತ್ತದೆ ಎಂದರು.

ಬಸವಣ್ಣ ಅವರಂತ ಮಹಾನ್ ನಾಯಕರ ಸಂದೇಶಗಳನ್ನು ಕೇವಲ ದಿನಾಚರಣೆಗೆ ಸೀಮಿತಗೊಳಿಸದೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆ ಜನಾಂಗಕ್ಕೆ ಬಳುವಳಿಯಾಗಿ ನೀಡಬೇಕು ಎಂದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಬಸವಣ್ಣ ವಿಶ್ವನಾಯಕರು ಎಲ್ಲಾ ಸಮುದಾಯವರು ಸಹ ಇಂತಹ ಮಹಾನ್ ನಾಯಕರ ಜಯಂತಿಗಳಲ್ಲಿ ಭಾಗವಹಿಸಿ ಅವರ ತತ್ವ, ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.

ವೀರಶೈವ ಮುಖಂಡ ಮಂಡಿಬೆಟ್ಟಹಳ್ಳಿ ದ್ಯಾವಪ್ಪ ಮಾತನಾಡಿದರು. ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಮಲ್ಲೇಶ್, ಅಮೃತಿ ರಾಜಶೇಖರ್, ಕಲಿಗಣೇಶ್, ಮಂಡಿಬೆಟ್ಟಹಳ್ಳಿ ಮೀನಾಕ್ಷಿ, ಪುರಸಭೆ ಸದಸ್ಯ ಶಿವಕುಮಾರ್, ತಾಪಂ ಇಒ ಲೋಕೇಶ್, ಸಿಇಒ ಸತೀಶ್, ಡಾ.ಅರವಿಂದ್, ಬಿಇಒ ರವಿ, ಕಣಿವೆಯೋಗೇಶ್, ಬೊಮ್ಮರಾಜು, ದೇವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಸವಣ್ಣ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ: ಕುಮಾರಸ್ವಾಮಿ

ಶ್ರೀರಂಗಪಟ್ಟಣ:

ಬಸವಣ್ಣನವರ ಒಬ್ಬ ವ್ಯಕ್ತಿಯಲ್ಲ ಅವರ ಒಂದು ಶಕ್ತಿಯಾಗಿದ್ದರು ಎಂದು ಮೈಸೂರಿನ ಪ್ರಸಿದ್ಧ ವಚನಕಾರ ಕುಮಾರಸ್ವಾಮಿ ಬಣ್ಣಿಸಿದರು.

ತಾಲೂಕು ಆಡಳಿತದಿಂದ ಬಸವ ಜಯಂತಿ ಅಂಗವಾಗಿ ಶ್ರೀಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಬಸವಣ್ಣ ಅವರ ವಚನಗಳ ಕುರಿತು ಪ್ರವಚನ ನೀಡಿದರು.

ಬಸವಣ್ಣನವರು ಮಹಾ ಮಂತ್ರಿ ಆಗಿದ್ದರೂ ಸಹ ನಾನು ದೊಡ್ಡವನು ಎಂದುಕೊಳ್ಳದೆ. ಎಂದಿಗೂ ಬಾಗಿದ ತಲೆ, ಮುಗಿದ ಕೈ ಆಗಿ ನಿಂತಿದ್ದವರಾಗಿದ್ದರು. ಬಸವಣ್ಣರನ್ನು ಪೂಜಿಸೂವ ಮೂರ್ತಿಯಾಗಿ ಇಂದು ನಾವು ಕಾಣುತ್ತಿದ್ದೇವೆ ಎಂದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ಸಮುದಾಯದ ಮುಖಂಡರೊಂದಿಗೆ ಭಾಗವಹಿಸಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ಈ ವೇಳೆ ಅಖಿಲ ಭಾತರ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶಿವಕುಮಾರ, ಕಾರ್ಯದರ್ಶಿ ನಿಜಗುಣ, ಸಹಕಾರ್ಯದರ್ಶಿ ದೀಪಕ್, ನಿರ್ದೇಶಕರಾದ ಶ್ರೀಕಂಠು, ವೀಣಾ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಮಾಜಿ ಅಧ್ಯಕ್ಷ ಮರಿಬಸವಯ್ಯ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ