ಚೇಳೂರಿನಲ್ಲಿ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವ

KannadaprabhaNewsNetwork |  
Published : Jan 26, 2026, 02:00 AM IST
ಚಿತ್ರ 2) ಚೇಳೂರಿನ ಪಾಪಾಗ್ನಿ ನದಿ ದಡದಲ್ಲಿ ಸಜ್ಜುಗೊಂಡಿದ್ದ ನೂತನ ಮರದ ರಥದಲ್ಲಿ ಭಕ್ತರಿಗೆ ದರ್ಶನ ನೀಡಿದ ಶ್ರೀ ಕೋದಂಡರಾಮಸ್ವಾಮಿ. | Kannada Prabha

ಸಾರಾಂಶ

ಹಲವು ಶತಮಾನಗಳಿಂದ ಕಲ್ಲಿನ ಚಕ್ರದ ರಥದಲ್ಲಿ ನಡೆಯುತ್ತಿದ್ದ ಈ ಸಾಂಪ್ರದಾಯಿಕ ಉತ್ಸವಕ್ಕೆ ಈ ಬಾರಿ ವಿಶೇಷ ಕಳೆ ಬಂದಿತ್ತು.

ಕನ್ನಡಪ್ರಭ ವಾರ್ತೆ ಚೇಳೂರು ತಾಲ್ಲೂಕಿನ ಪಾಪಾಗ್ನಿ ನದಿ ದಡದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಕೋದಂಡರಾಮಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.ನೂತನ ರಥದ ಆಕರ್ಷಣೆ:

ಹಲವು ಶತಮಾನಗಳಿಂದ ಕಲ್ಲಿನ ಚಕ್ರದ ರಥದಲ್ಲಿ ನಡೆಯುತ್ತಿದ್ದ ಈ ಸಾಂಪ್ರದಾಯಿಕ ಉತ್ಸವಕ್ಕೆ ಈ ಬಾರಿ ವಿಶೇಷ ಕಳೆ ಬಂದಿತ್ತು. ಈ ವರ್ಷ ನೂತನವಾಗಿ ನಿರ್ಮಿಸಲಾದ ಭವ್ಯ ಮರದ ರಥದಲ್ಲಿ ಮೊದಲ ಬಾರಿಗೆ ಕೋದಂಡರಾಮಸ್ವಾಮಿಯು ಭಕ್ತರಿಗೆ ದರ್ಶನ ನೀಡಿದನು. ಹೂವುಗಳಿಂದ ಕಣ್ಮನ ಸೆಳೆಯುವಂತೆ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಹನುಮಂತನ ಉತ್ಸವ ಮೂರ್ತಿಗಳನ್ನು ಮಂತ್ರಘೋಷಗಳೊಂದಿಗೆ ಪ್ರತಿಷ್ಠಾಪಿಸಿ, ಭಕ್ತಿಯ ಸಂಕೇತವಾಗಿ ರಥವನ್ನು ಎಳೆಯಲಾಯಿತು.

ಬ್ರಹ್ಮ ರಥೋತ್ಸವಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ತಹಸೀಲ್ದಾರ್ ಶ್ವೇತಾ ಬಿ.ಕೆ. ಹಾಗೂ ಪಿಡಿಒ ಗೌಸ್ ಪೀರ್ ಅವರು ಜಂಟಿಯಾಗಿ ಚಾಲನೆ ನೀಡಿ, ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಚೋಳರ ಕಾಲದ ಈ ಪುರಾತನ ದೇವಾಲಯದ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ರಥೋತ್ಸವದ ಪ್ರಮುಖ ಆಕರ್ಷಣೆಯಾಗಿ ಕಲಾತಂಡಗಳಿಂದ ನಡೆದ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು. ಇದರೊಂದಿಗೆ ವೀರಗಾಸೆ ಹಾಗೂ ವಿವಿಧ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿದವು. ನೆರೆಯ ಆಂಧ್ರಪ್ರದೇಶ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಹಣ್ಣು-ಜವನ ಅರ್ಪಿಸಿ ಪುನೀತರಾದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಪಿ.ವಿ. ರಾಮಾಂಜನೆಯ್ಯರೆಡ್ಡಿ, ಕೆಡಿಎಸ್ಎಸ್ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಕೆ. ಆನಂದ್, ಕರವೇ ಅಧ್ಯಕ್ಷ ಕೆ.ಜಿ. ವೆಂಕಟರವಣಪ್ಪ ಭಾಗವಹಿಸಿದ್ದರು. ಅಲ್ಲದೆ, ಕಂದಾಯ ನಿರೀಕ್ಷಕ (ಆರ್.ಐ) ಈಶ್ವರ್, ಪಿಡಿಒ ಕೆ. ವೆಂಕಟಾಚಲಪತಿ, ಪ್ರಮುಖರಾದ ಸುರೇಂದ್ರ, ಜಾಲರಿ,ಸಾವಕಾರ ಶ್ರೀನಿವಾಸ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ಕಲ್ಪಿಸಿತ್ತು. ಫೆ. 6ರ ತನಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಉತ್ಸವಗಳು ಮುಂದುವರಿಯಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!