ಕೊಟ್ನಾಯಗುತ್ತು: ದೇಸಿಂಗರಾಯ ಕಂಬಳ ಉದ್ಘಾಟನೆ

KannadaprabhaNewsNetwork |  
Published : Apr 07, 2025, 12:34 AM IST
ಬಳ್ಕುಂಜೆ ಕರಿಯ ದೇಸಿಂಗರಾಯ ಬೊಳಿಯ ದೇಸಿಂಗರಾಯ ಕಂಬಳಕ್ಕೆ ಚಾಲನೆ  | Kannada Prabha

ಸಾರಾಂಶ

ಬಳ್ಕುಂಜೆ ಕಂಬಳ ಸಮಿತಿ ಕೊಟ್ನಾಯಗುತ್ತು ಆಶ್ರಯದಲ್ಲಿ ಕೊಟ್ನಾಯಗುತ್ತುನಲ್ಲಿ ಎರಡನೇ ವರ್ಷದ ಬಳ್ಕುಂಜೆ ಕರಿಯ ದೇಸಿಂಗರಾಯ ಬೊಳಿಯ ದೇಸಿಂಗರಾಯ ಕಂಬಳದ ಉದ್ಘಾನಾ ಸಮಾರಂಭ ಶನಿವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಬಳ್ಕುಂಜೆ ಕಂಬಳ ಬಳ್ಕುಂಜೆ ಗ್ರಾಮಕ್ಕೆ ಉತ್ಸವವಾಗಿದ್ದು ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಉತ್ತಮ ರೀತಿಯಲ್ಲಿ ಕಂಬಳ ಸಂಘಟಿಸುವುದು ಅಭಿನಂದನೀಯವೆಂದು ಬಳ್ಕುಂಜೆ ಭಂಡಸಾಲೆ ಡಾ.ಬಾನುತೇಜ ಅಜಿಲ ಹೇಳಿದ್ದಾರೆ.

ಬಳ್ಕುಂಜೆ ಕಂಬಳ ಸಮಿತಿ ಕೊಟ್ನಾಯಗುತ್ತು ಆಶ್ರಯದಲ್ಲಿ ಕೊಟ್ನಾಯಗುತ್ತುನಲ್ಲಿ ನಡೆದ ಎರಡನೇ ವರ್ಷದ ಬಳ್ಕುಂಜೆ ಕರಿಯ ದೇಸಿಂಗರಾಯ ಬೊಳಿಯ ದೇಸಿಂಗರಾಯ ಕಂಬಳದ ಉದ್ಘಾನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗ್ಗೆ ಮನೆತನದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಕಂಬಳ ಕರೆಗೆ ಪ್ರಸಾದ ಹಾಕಿ ಕಂಬಳಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಕವತ್ತಾರು ದೇವಸ್ಥಾನದ ಅರ್ಚಕ ವಿಷ್ಣುರಾಜ್ ಭಟ್ ದೇಂದಡ್ಕ, ಬಳ್ಕುಂಜೆ ಚರ್ಚ್ ಧರ್ಮಗುರು ಪಾ. ಪೌಲ್ ಸಿಕ್ವೇರ, ಬಳ್ಕುಂಜೆ ಮಸೀದಿ ಧರ್ಮಗುರು ಮಹಮ್ಮದ್ ಶರೀಪ್, ಉಳೆಪಾಡಿ ದೇವಸ್ಥಾನದ ಅರ್ಚಕ ಮಧ್ವಪತಿ ಆಚಾರ್ಯ, ಮುಂಡ್ಕೂರು ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಭಟ್ , ಕವತ್ತಾರು ದೇವಸ್ಥಾನದ ಆಡಳಿತ ಮುಕ್ತೇಸರ ನೀನಾ ನಿತ್ಯಾನಂದ ಅಜಿಲ, ಕನ್ನಡ ಸಾಹಿತ್ಯ ಪರಿಷ್ಯತ್ ಮಾಜಿ ಅಧ್ಯಕ್ಷ ಡಾ ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಬಾಲಕೃಷ್ಣ ಹೆಗ್ಡೆ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೋಪಿನಾಥ ಪಡಂಗ, ಪ್ರಭಾಕರ ಪೂಂಜ ಕೊಟ್ನಾಯಗುತ್ತು, ಮೂಲ್ಕಿ ಠಾಣಾಧಿಕಾರಿ ವಿದ್ಯಾದರ್, ಭಗವಾನ್ ಅಳ್ವ ಮಡಲ್ಲ, ಗುಣಪಾಲ್ ಅಳ್ವ, ಚಿತ್ತಂಜನ್ ಅಳ್ವ, ಎರ್ಮಾಳ್ ರೋಹಿತ್ ಹೆಗ್ಡೆ, ಸುಧಾಕರ ಹೆಗ್ಡೆ, ಶಂಭು ಎನ್ ಶೆಟ್ಟಿ ಕೊಟ್ರಪಾಡಿ ಗುತ್ತು, ಶಶಿಕುಮಾರ್ ಶೆಟ್ಟಿ, ವಿಠಲ ಶೆಟ್ಟಿ ಕೊಟ್ರಪಾಡಿ, ಪ್ರಭಾಕರ ಪೂಂಜ, ಬಾಲಕೃಷ್ಣ ಶೆಟ್ಟಿ ವರಪಾಡಿ, ಪ್ರಕಾಶ್ ಶೆಟ್ಟಿ, ಜಯದೀಪ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ನೆಲ್ಸ್ ನ್ ಲೋಭೋ, ರಂಜನ್ ಶೆಟ್ಟಿ, ಬಾಸ್ಕರ ಶೆಟ್ಟಿ ಏಳಿಂಜೆ, ಇನ್ನಬಗ್ಗರ ಗುತ್ತು ಗುತ್ತಿನಾರ್ ದೇವಿಪ್ರಸಾದ್ ಶೆಟ್ಟಿ, ಪುಲೋಡಿ ಉದಯ ಶೆಟ್ಟಿ, ಪ್ರಸಾದ್ ಶೆಟ್ಟಿ ಬಳ್ಕುಂಜೆ ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು.

ದಿನಕರ ಶೆಟ್ಟಿ ಸ್ವಾಗತಿಸಿದರು, ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ