ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೆಆರ್ಎಸ್ ಭರ್ತಿಯಾದ ಪರಿಣಾಮ ಜಲಾಶಯದ ಹಿನ್ನೀರು ತಾಲೂಕಿನ ಗಂಜೀಗೆರೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೂ ವ್ಯಾಪಿಸಿದೆ. ಹಿನ್ನೀರಿಗೆ ಹೊಂದಿಕೊಂಡಂತೆ ಬಸ್ತಿ ಗೊಮ್ಮಟ ಕ್ಷೇತ್ರ, ಭೂ ವರಾಹನಾಥ ಕ್ಷೇತ್ರ, ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಕ್ಷೇತ್ರಗಳಿವೆ.
ನಿತ್ಯ ನೂರಾರು ಪ್ರವಾಸಿಗರು ಗಂಜೀಗೆರೆ ಬಳಿಯ ಹಿನ್ನೀರು ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಿನ್ನೀರಿನ ಅಲೆಗಳು ರಸ್ತೆ ಬದಿಗೆ ಅಪ್ಪಳಿಸುತ್ತಿರುವುದರಿಂದ ರಸ್ತೆಯ ಒಂದು ಭಾಗದ ಮಣ್ಣು ಕುಸಿತವಾಗುತ್ತಿದೆ. ಮಣ್ಣು ಕುಸಿತವಾಗುವ ಅರಿವಿಲ್ಲದೆ ವಾಹನ ಚಾಲಕರು ರಸ್ತೆ ಬದಿಗೆ ಬಂದರೆ ವಾಹನ ಸಮೇತ ಹಿನ್ನೀರಿಗೆ ಬೀಳುವ ಅಪಾಯ ಎದುರಾಗಿದೆ.2022 ರಲ್ಲಿ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನಡೆದ ಐತಿಹಾಸಿಕ ಕುಂಬಮೇಳ ಹಾಗೂ ಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಕಿರಿದಾಗಿದ್ದ ಇಲ್ಲಿನ ರಸ್ತೆಯ ಅಗಲೀಕರಣ ಮಾಡಲಾಗಿತ್ತು. ಅಗಲೀಕರಣದ ವೇಳೆ ರಸ್ತೆ ಬದಿಗೆ ಮಣ್ಣು ಸುರಿಯಲಾಯಿತಾದರೂ ಣ್ಣು ಕುಸಿಯದಂತೆ ಲೋಕೋಪಯೋಗಿ ಇಲಾಖೆ ಪಿಚಿಂಗ್(ಕಲ್ಲಿನ ಕಾಂಕ್ರೀಟ್) ಮಾಡಿರಲಿಲ್ಲ.
ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಸಿಗರ ವಾಹನಗಳು ಸಂಚರಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಹಿನ್ನೀರಿನ ಭಾಗದಲ್ಲಿ ರಕ್ಷಣಾ ತಡೆಗೋಡೆಗಳನ್ನು ನಿರ್ಮಿಸಿಲ್ಲ. ತಡೆಗೋಡೆಗಳಿಲ್ಲದ ಪರಿಣಾಮ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಕುಸಿಯುತ್ತಿರುವ ಮಣ್ಣಿನ ಮೂಲಕ ಹಿನ್ನೀರಿನಲ್ಲಿ ವಾಹನ ಸಮೇತ ಬೀಳುವ ಆತಂಕ ಎದುರಾಗಿದೆ.
- ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರು,ಲೋಕೋಪಯೋಗಿ ಇಲಾಖೆ
ಕೆ.ಆರ್.ಪೇಟೆ:ತಾಲೂಕಿನ ವ್ಯಾಪ್ತಿ ಹಾದುಹೋಗಿರುವ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ 54ನೇ ವಿತರಣಾ ನಾಲೆ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ರೈತ ಹೋರಾಟಗಾರ ಕರೋಟಿ ತಮ್ಮೇಗೌಡ ಆರೋಪಿಸಿದ್ದಾರೆ.
ಮಳೆ ನಡುವೆ ನಾಲಾ ಲೈನಿಂಗ್ ಮಾಡುತ್ತಿದ್ದು ಎಲ್ಲಿಯೂ ಕಬ್ಬಿಣದ ಬಳಕೆ ಮಾಡುತ್ತಿಲ್ಲ. ಕೇವಲ ಮೂರ್ನಾಲ್ಕು ಇಂಚಿನಷ್ಟು ಸಿಮೆಂಟ್ ಲೈನಿಂಗ್ ಮಾಡುತ್ತಿದ್ದು ಕಾಮಗಾರಿ ಹೀಗೆ ಸಾಗಿದರೆ ಒಂದು ವರ್ಷವೂ ಬಾಳಿಕೆ ಬರುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರಾಗಲಿ ಅಥವಾ ಇತರೆ ಯಾವುದೇ ಅಧಿಕಾರಿಗಳಾಗಲಿ ಸ್ಥಳದಲ್ಲಿದ್ದು ಕಾಮಗಾರಿಯ ಗುಣಮಟ್ಟ ಪರೀಕ್ಷಿಸುತ್ತಿಲ್ಲ ಎಂದು ತಿಳಿಸಿದ್ದಾರೆ.ಗುತ್ತಿಗೆದಾರ ತನಗಿಷ್ಟ ಬಂದಂತೆ ಕಳಪೆ ಕಾಮಗಾರಿ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಗುತ್ತಿಗೆದಾರನ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಶಾಸಕ ಹೆಚ್.ಟಿ.ಮಂಜು ರೈತಪರ ಕಾಳಜಿಯುಳ್ಳವರಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.