ಗಂಗಾವತಿ: ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಪ್ರೋತ್ಸಾಹದ ಕೊರತೆಯಾಗಿದೆ ಎಂದು ಕರ್ನಾಟಕ ನಾಟಕ ಆಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ್ ಕಳವಳ ವ್ಯಕ್ತ ಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಅಂಗೈಯಲ್ಲಿ ಮನೋರಂಜನೆ ಸಿಗುತ್ತಿದ್ದು, ರಂಗ ಮಂದಿರಕ್ಕೆ ತೆರಳಿ ನಾಟಕಗಳನ್ನು ವೀಕ್ಷಿಸುತ್ತಿರುವ ಸಂಖ್ಯೆ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರೆ ಪಾತ್ರಗಳನ್ನು ಆಯ್ಕೆ ಮಾಡಿ ಅಕ್ಕಮಹಾದೇವಿ ನಾಟಕ ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ನಗರ ಕಲೆ-ಸಂಸ್ಕೃತಿಯ ತವರೂರು ಎನಿಸಿಕೊಂಡಿದೆ. ಇಲ್ಲಿ ನಡೆಯುವ ನಾಟಕ ಸೇರಿದಂತೆ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಕೇಸರಹಟ್ಟಿ ಮಾತನಾಡಿ, ನಾಟಕ ಪ್ರದರ್ಶನಕ್ಕೆ ಗಣ್ಯರ ಸಹಕಾರ ಕಾರಣ ಎಂದರು.
ನಾಟಕಕಾರ ಎಸ್.ವಿ. ಪಾಟೀಲ್ ಗುಂಡೂರು, ರೇವಣಸಿದ್ದಯ್ಯಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಶಂಕರಗೌಡ ಹೊಸಳ್ಳಿ, ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಸರೋಜಾ ಮಲ್ಲಿಕಾರ್ಜುನ ನಾಗಪ್ಪ, ಜ್ಯೋತಿ ಜಾಜಪ್ಪ ನ್ಯಾಮಗೌಡರ್, ಅನ್ನಪೂರ್ಣಾಸಿಂಗ್, ಶೈಲಜಾ ಹಿರೇಮಠ, ಸುನೀತಾ ಶ್ಯಾವಿ, ಗೀತಾ ವಿಕ್ರಂ, ಶಿವಪ್ಪ ಗಾಳಿ, ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ನಾಗರಾಜ ಇಂಗಳಗಿ, ಗಿರಿಧರ ಜೂರಟಗಿ, ರಾಘವೇಂದ್ರ ದಂಡಿನ್, ಶ್ರವಣಕುಮಾರ ರಾಯ್ಕರ್ ಇದ್ದರು.