ನಾಯಕರು ಹುಟ್ಟುವುದಿಲ್ಲ, ಅವರು ರೂಪುಗೊಳ್ಳುತ್ತಾರೆ: ಡಾ. ಪ್ರೀತಿ ಸುಧಾಕರ್

KannadaprabhaNewsNetwork |  
Published : Jul 05, 2026, 01:15 AM IST
ಸಿಕೆಬಿ-1 ಶಾಂತ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ತಿನ ಶಾಲಾ ಮುಖ್ಯ ನಾಯಕಿಯಾಗಿ ಆಯ್ಕೆಯಾದ ಮೇಘನಾರಿಗೆ  ಡಾ. ಪ್ರೀತಿ ಸುಧಾಕರ್ ನಾಯಕತ್ವದ  ಪತ್ರವನ್ನು ನೀಡಿ ಅಭಿನಂದಿಸಿದರು | Kannada Prabha

ಸಾರಾಂಶ

ಕುಟುಂಬದಿಂದ ರಾಷ್ಟ್ರದವರೆಗೆ ಸಮರ್ಥ ನಾಯಕರ ಅವಶ್ಯಕತೆ ಇದ್ದು ಶಾಲಾ ಹಂತದಲ್ಲಿಯೇ ನಾಯಕತ್ವದ ತರಬೇತಿ ಪಡೆಯುವುದರಿಂದ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು,

ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ ಚುನಾವಣೆ ಕಾರ್ಯಕ್ರಮದಲ್ಲಿ ಡಾ. ಪ್ರೀತಿ ಸುಧಾಕರ್ ಅಭಿಮತ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೊಡ್ಡ ವ್ಯಕ್ತಿಗಳಾಗಿ, ನಾಯಕರಾಗಿ ಯಾರೂ ಹುಟ್ಟುವುದಿಲ್ಲ. ತಾವು ಬೆಳೆದು ಬರುವ ಸಂದರ್ಭಗಳಲ್ಲಿ ನಿರಂತರ ಪ್ರಜ್ಞಾಪೂರ್ವಕ ಕಾರ್ಯಗಳಿಂದ ನಾಯಕರಾಗಿ ರೂಪಗೊಳ್ಳುತ್ತಾರೆ ಎಂದು ಶಾಂತ ವಿದ್ಯಾಸಂಸ್ಥೆಗಳ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯ ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಶಾಲಾ ನಾಯಕರು ಹಾಗೂ ವಿವಿಧ ತರಗತಿಗಳ ಪ್ರತಿನಿಧಿಗಳಿಗೆ ಪ್ರತಿನಿಧಿ ಪತ್ರ ವಿತರಿಸಿ ಮಾತನಾಡಿ, ಕುಟುಂಬದಿಂದ ರಾಷ್ಟ್ರದವರೆಗೆ ಸಮರ್ಥ ನಾಯಕರ ಅವಶ್ಯಕತೆ ಇದ್ದು ಶಾಲಾ ಹಂತದಲ್ಲಿಯೇ ನಾಯಕತ್ವದ ತರಬೇತಿ ಪಡೆಯುವುದರಿಂದ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು, ಪ್ರಜಾಪ್ರಭುತ್ವದಲ್ಲಿ ಸಮರ್ಥ ನಾಯಕರ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿರುತ್ತದೆ. ಸಮರ್ಥ ಮತ್ತು ಸಂವೇದನಾಶೀಲ ನಾಯಕರಿದ್ದರೆ ಮಾತ್ರ ಒಂದು ಕುಟುಂಬ, ಸಂಸ್ಥೆ, ವ್ಯವಸ್ಥೆ ಹಾಗೂ ಇಡೀ ದೇಶ ಬೆಳೆಯಲು ಸಾಧ್ಯ ಎಂದರು.

ವಿದ್ಯಾಭ್ಯಾಸದ ಹಂತದಲ್ಲಿ ನಾಯಕರು ತನ್ನ ಶಾಲೆ ಅಥವಾ ತರಗತಿಯ ವಿದ್ಯಾರ್ಥಿಗಳನ್ನು ಗುರಿ ಸಾಧನೆಯತ್ತ ವ್ಯವಸ್ಥಿತವಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಮತ್ತು ಸಂವೇದನೆ ಹೊಂದಿರಬೇಕು, ಶಾಲೆಯ ವಿವಿಧ ಚಟುವಟಿಕೆಗಳ ಯೋಜನೆ, ಕಾರ್ಯನಿರ್ವಹಣೆ, ಜವಾಬ್ದಾರಿ ಹಂಚಿಕೆ ಹಾಗೂ ಕಾರ್ಯಕ್ರಮದ ಮೌಲ್ಯವನ್ನು ನಿರ್ಧರಿಸಿ ಇನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ನಾಯಕರಾಗಿ ಎಲ್ಲ ವಿದ್ಯಾರ್ಥಿಗಳು ಬೆಳೆಯಬೇಕು, ತನ್ನ ಗುರಿಯನ್ನು ಅರ್ಥ ಮಾಡಿಕೊಳ್ಳುವುದು, ಪಾರದರ್ಶಕ ಚಟುವಟಿಕೆಗಳು, ನೈತಿಕತೆ, ಎಲ್ಲರನ್ನು ಒಳಗೊಳ್ಳುವ ಗುಣ, ಉಸ್ತುವಾರಿ ತಂತ್ರ ಮತ್ತು ಅನುಭೂತಿಯನ್ನು ನಾಯಕರು ಹೊಂದಿದ್ದು ಶಾಲೆಗಳ ಚಟುವಟಿಕೆಗಳನ್ನು ಗುಣಾತ್ಮಕವಾಗಿ ಮುನ್ನಡೆಸುವಲ್ಲಿ ನೆರವಾಗಬೇಕು ಎಂದು ಪ್ರೇರೇಪಿಸಿದರು.

ಸಂಸೆಯ ನಿದೇಶಕ ಡಾ. ಕೋಡಿ ರಂಗಪ್ಪ ಮಾತನಾಡಿ, ದೊಡ್ಡ ನಾಯಕರಾಗಿ ಯಾರೂ ಹುಟ್ಟುವುದಿಲ್ಲಾ. ಹಂತ ಹಂತವಾಗಿ ಯೋಗ್ಯ ಶಿಕ್ಷಣ ,ಜ್ಞಾನ ,ಕೌಶಲ್ಯ ಸಾಮರ್ಥ್ಯ ಗಳಿಕೆ, ರಚನಾತ್ಮಕ ಮನೋಭಾವ, ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ನಾಯಕರಾಗಿ ರೂಪುಗೊಳ್ಳಬೇಕು. ನಾಯಕನಾಗುವನು ತನ್ನ ಕಾರ್ಯಕ್ಷೇತ್ರದಲ್ಲಿ ಪರಿಪೂರ್ಣ ಜ್ಞಾನ, ತಿಳುವಳಿಕೆ ಹಾಗೂ ಒಟ್ಟಾರೆ ಆಶಯಗಳ ಸಾಧನೆಗಾಗಿ ತನ್ನನ್ನು ಸಮರ್ಪಿಸಿ ಕೊಳ್ಳಬೇಕು. ನಿಮ್ಮ ಕತವ್ಯದ ಪರಿಣಾಮಕಾರಿ ಕಾರ್ಯನಿರ್ವಹಣೆ ಮತ್ತು ಮಾನವ ಅಂತರ್ ಸಂಬಂಧರ್ನ್ನುನು್ನ ಕಟ್ಟಿಕೊಳ್ಳುವ ಮೂಲಕ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬೇಕೆಂದು ಮಕ್ಕಳನ್ನು ಉತ್ತೇಜಿಸಿದರು.

ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಅಲ್ಲಪ್ಪ ಪ್ರಸಾದ್ ಶಾಲಾ ನಾಯಕರಿಗೆ ನಾಯಕತ್ವದ ಪ್ರಮಾಣವಚನ ಬೋಧಿಸಿ, ನಾಳಿನ ನಾಯಕರಾಗಬೇಕಾದ ನೀವು ನಾಯಕತ್ವದ ಬೌದ್ಧಿಕ, ಸಾಮಾಜಿಕ, ತಾಂತ್ರಿಕ, ನಿರ್ವಹಣಾತ್ಮಕ ಹಾಗೂ ನೈತಿಕತೆಯ,ಸಾಕ್ಷಿ ಪ್ರಜೆಗಳಾಗಿ ಬಾಳಬೇಕೆಂದರು.

ವಿದ್ಯಾರ್ಥಿ ಪರಿಷತ್ತಿನ ಶಾಲಾ ಮುಖ್ಯ ನಾಯಕನಾಗಿ ಆಯ್ಕೆಯಾಗಿರುವ ನೀರಜ್ ಮತ್ತು ನಾಯಕಿ ಮೇಘನಾ ಮತ್ತು ವಿವಿಧ ತರಗತಿಗಳ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ನಾಯಕತ್ವದ ಪತ್ರವನ್ನು ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಮತ್ತು ಡೀನ್ ಡಾ. ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ಅಧ್ಯಾಪಕರಾದ ರಂಗರಾಜನ್, ಕಲ್ಯಾಣಿ, ಕಲೀಮುಲ್ಲಾ, ಸಿರೀಶ, ರಾಧಾ, ಶಶಿಧರ್, ವೆಂಕಟೇಶ್ ಇದ್ದರು.

ಸಿಕೆಬಿ-1 ಶಾಂತ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ತಿನ ಶಾಲಾ ಮುಖ್ಯ ನಾಯಕಿಯಾಗಿ ಆಯ್ಕೆಯಾದ ಮೇಘನಾಗೆ ಡಾ. ಪ್ರೀತಿ ಸುಧಾಕರ್ ನಾಯಕತ್ವದ ಪತ್ರವನ್ನು ನೀಡಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ