ಶಿಗ್ಗಾಂವಿ ತಹಸೀಲ್ದಾರ್‌ ಕಚೇರಿ ಹಿಂದೆ ಜೋಳದ ಹೊಲದಲ್ಲಿ ಚಿರತೆ ಪ್ರತ್ಯಕ್ಷ

KannadaprabhaNewsNetwork |  
Published : Sep 24, 2025, 01:01 AM IST
ಪೊಟೋ ಪೈಲ್ ನೇಮ್ ೨೩ಎಸ್‌ಜಿವಿ೭ ಶಿಗ್ಗಾಂವಿ ಪಟ್ಟದ ತಹಸೀಲ್ದಾರ ಕಛೇರಿಯ ಹಿಂದುಗಡೆಯ ಅಪ್ಪಿನಕೇರಿ   ಗೋವಿನ ಜೋಳದ ಹೊಲದಲ್ಲಿ ಚಿರತೆಯೂ ಕಂಡು ಬಂದ ದೃಶ್ಯ  | Kannada Prabha

ಸಾರಾಂಶ

ಪಟ್ಟಣದ ತಹಸೀಲ್ದಾರ್ ಕಚೇರಿಯ ಹಿಂದುಗಡೆಯ ಅಪ್ಪಿನಕೇರಿ ಗೋವಿನ ಜೋಳದ ಹೊಲದಲ್ಲಿ ಚಿರತೆಯೊಂದು ಸುಮಾರು ದಿನಗಳಿಂದ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಯವರು ಮಾತ್ರ ಸೆರೆ ಹಿಡಿಯುವ ಗೋಜಿಗಿ ಹೋಗದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಶಿಗ್ಗಾಂವಿ:ಪಟ್ಟಣದ ತಹಸೀಲ್ದಾರ್ ಕಚೇರಿಯ ಹಿಂದುಗಡೆಯ ಅಪ್ಪಿನಕೇರಿ ಗೋವಿನ ಜೋಳದ ಹೊಲದಲ್ಲಿ ಚಿರತೆಯೊಂದು ಸುಮಾರು ದಿನಗಳಿಂದ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಯವರು ಮಾತ್ರ ಸೆರೆ ಹಿಡಿಯುವ ಗೋಜಿಗಿ ಹೋಗದೇ ನಿರ್ಲಕ್ಷ್ಯ ವಹಿಸಿದ್ದಾರೆ.

೮ ದಿನದಲ್ಲಿ ಶಿಗ್ಗಾಂವಿಯ ಎರಡು ಸಾಕಿದ ನಾಯಿಗಳನ್ನು ಇದು ತಿಂದು ಹಾಕಿದೆ. ರೈತರು ಸಾಕಷ್ಟು ಬಾರಿ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದರೂ ಕೂಡಾ ಸ್ಥಳಕ್ಕೆ ಬರುವುದು ಅದರ ಹೆಜ್ಜೆ ಗುರುತು ಪರಿಶೀಲನೆ ಮಾಡುವದು ಹೋಗುವದು ಇದೆ ಕಾಯಕವಾಗಿದೆ. ಎಲ್ಲಿಯೂ ಚಿರತೆಯನ್ನು ಹಿಡಿಯುವುದಾಗಲಿ ಅಥವಾ ಅರಣ್ಯ ಪ್ರದೇಶಕ್ಕೆ ಓಡಿಸುವ ಕ್ರಮಕ್ಕೆ ಮುಂದಾಗಿಲ್ಲಾ ಅನ್ನುವುದು ರೈತರ ಆರೋಪವಾಗಿದೆ.

ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ರಾತ್ರಿ ವೇಳೆ ಬಂದು ಸ್ಥಳ ಪರಿಶೀಲನೆ ಮಾಡಿದರೂ ಕತ್ತಲಾಗಿದ್ದರಿಂದ ಮುಂಜಾನೆ ಬರುವುದಾಗಿ ಹೇಳಿದ ಹೋದರಾದರು ಮುಂಜಾನೆ ಬಂದರೂ ಕೂಡಾ ಚಿರತೆಯನ್ನು ಹಿಡಿಯುವವರನ್ನು ಕರೆತರುವುದಾಗಿ ಹೇಳಿ ಹೋದ ಅರಣ್ಯ ಇಲಾಖೆಯವರು ತನಿಖೆಯಾಗಲಿ ಮುಂದಿನ ಕ್ರಮಕ್ಕಾಗಲಿ ಮುಂದಾಗಿಲ್ಲ. ಅಧಿಕಾರಿಗಳು ಇದರ ಕುರಿತು ತನಿಖೆಯನ್ನು ಮಾಡಿ ಅರಣ್ಯಪ್ರದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಹಸಿರು ಸೇನಾ ಕರ್ನಾಟಕ ಜಿಲ್ಲಾ ಅಧ್ಯಕ್ಷ ವರುಣಗೌಡ ಪಾಟೀಲ ಆಗ್ರಹಿಸಿದ್ದಾರೆ.

ದಿನ ನಿತ್ಯ ಹೊಲದಲ್ಲಿ ಕಾಲ ಕಳೆಯುವ ರೈತರು ಇಂದು ಹೊಲಕ್ಕೆ ಭಯದಲ್ಲಿ ಹೋಗುವ ದಯನೀಯ ಸ್ಥಿತಿ ಬಂದಿದ್ದು, ಆದ್ದರಿಂದ ತಕ್ಷಣವಾಗಿ ಚಿರತೆಯನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಮಹಿಳಾ ಘಟಕ ಸಂಜನಾ ರಾಯ್ಕರ ಆಗ್ರಹಿಸಿದ್ದಾರೆ.ತಾಲೂಕಿನಲ್ಲಿ ಚಿರತೆಯ ಹಾವಳಿ ಹಚ್ಚಿಗೆ ಕಂಡು ಬಂದರು ಅದು ಎಲ್ಲಿ ಹೋಗಿದೆ, ಅದರ ಕುರಿತು ಸಹಾಯಕ ಅರಣ್ಯಾಧಿಕಾರಿಗಳು ತನಿಖೆಯ ಕೆಲಸವನ್ನು ಮಾಡುತ್ತಿದ್ದಾರೆ. ಚಿರತೆಯು ಒಂದೇ ಸ್ಥಳದಲ್ಲಿರದೆ ಎಲ್ಲೆಂದರಲ್ಲಿ ಸುಮಾರು ೪೦ ಕಿಮೀವರೆಗೆ ಹೆಚ್ಚು ಸ್ಥಳವನ್ನು ಬದಲಾಯಿಸುತ್ತದೆ. ಆದ್ದರಿಂದ ಅಂಥಹ ಸುಳಿವು ಸಿಕ್ಕಲ್ಲಿ ತಕ್ಷಣವಾಗಿ ಇಲಾಖೆಗೆ ತಿಳಿಸಬೇಕು ದುಂಡಶಿ ವಲಯ ಅರಣ್ಯಾಧಿಕಾರಿ ಮಲ್ಲಪ್ಪ

ಹೇಳಿದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ