ಪತ್ರಿಕಾ ದಿನಾಚರಣೆ ಮತ್ತು ಬಾರ್ಡೋಲಿ ಪ್ರಶಸ್ತಿ ಪ್ರದಾನ ಸಮಾರಂಭ
ಪಟ್ಟಣದ ಕೆಎಲ್ಇ ಕಾಲೇಜಿನ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದವರು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಬಾರ್ಡೋಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಯಾವುದೇ ವರದಿಯನ್ನು ಸಿದ್ಧಪಡಿಸುವ ಮುನ್ನ ಆತುರಕ್ಕೆ ಒಳಗಾಗದೇ ಅದರಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಸತ್ಯಾಸತ್ಯತೆ, ವಿಶ್ವಾಸಾರ್ಹತೆ ಮತ್ತು ವಾಸ್ತವಾಂಶಗಳನ್ನು ಸಮಗ್ರವಾಗಿ ಪರಿಸೀಲಿಸಿ ದೃಢಿಕರಿಸಬೇಬೇಕಿದೆ ಎಂದರು.ಸಹಕಾರಿ ಧುರೀಣ ಜಾರ್ಜ ಫರ್ನಾಂಡೀಸ್ ಮಾತನಾಡಿ, ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಿ ಪಡೆದ ಅಂಕೋಲೆ ಹೋರಾಟಗಳ ನೆಲವಾಗಿರುವುದರ ಜೊತೆಗೆ ಬಹುಮುಖ ಪ್ರತಿಭೆಗಳನ್ನು ಪೋಷಿಶಿ, ಪತ್ರಿಕಾರಂಗದಲ್ಲಿಯೂ ಅಳಿಸಲಾಗದ ಛಾಪು ಮೂಡಿಸಿದ ಮಹನೀಯರನ್ನು ನೀಡಿದ ಹೆಮ್ಮೆಯ ನಾಡಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ಅರುಣ ಶೆಟ್ಟಿ ಸ್ವಾಗತಿಸಿದರು. ನಾಗರಾಜ ಜಾಂಬಳೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಭಾಸ ಕಾರೇಬೈಲ್ ನಿರೂಪಿಸಿದರು. ಉಪಾಧ್ಯಕ್ಷ ವಾಸುದೇವ ಗುನಗಾ ವಂದಿಸಿದರು. ಸಂಘದ ಕೆ. ರಮೇಶ, ಅಕ್ಷಯ ನಾಯ್ಕ, ಮೋಹನ ದುರ್ಗೇಕರ, ದಿನಕರ ನಾಯ್ಕ, ನಿತೇಶ ಕೇಣಿ, ಅಜಿತ ನಾಯಕ, ಅನುಪ ಗುನಗಾ ಉಪಸ್ಥಿತರಿದ್ದರು.