ಅಭಿವೃದ್ಧಿ ಕಾರ್ಯಕ್ಕೆ ಸಂಘಟನೆಗಳು ಕೈಜೋಡಿಸಲಿ: ಡಾ. ಎಚ್.ಕೆ. ಪಾಟೀಲ

KannadaprabhaNewsNetwork |  
Published : Dec 28, 2025, 03:15 AM IST
ಗದಗ ನಗರಸಭೆಯ ವಾರ್ಡ್ ನಂ. 34ರಲ್ಲಿ ಸಿಸಿ ರಸ್ತೆ ಒಳಚರಂಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿದ ಬಳಿಕಕಾರ್ಯಕ್ರಮದಲ್ಲಿ ಸಚಿವ ಡಾ. ಎಚ್‌.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರಸಭೆಯ ವಾರ್ಡ್ ನಂ. 34ರಲ್ಲಿ ಸಿಸಿ ರಸ್ತೆ ಒಳಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಪಂಚವಟಿ ನಾಗರಕಟ್ಟೆ ಉದ್ಯಾವನ ಗದಗ ನಗರದಲ್ಲಿಯೇ ಮಾದರಿಯಾಗಿ ನಿರ್ಮಾಣ ಮಾಡಲು ನಗರಸಭೆಯೊಂದಿಗೆ ಕೈ ಜೋಡಿಸಿ ಎಂದರು.

ಗದಗ: ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಾಮಾಜಿಕ ಸಂಘಟನೆಗಳು ಕೈ ಜೋಡಿಸಿದಲ್ಲಿ ಆ ಕಾರ್ಯಗಳು ಯಶಸ್ವಿಗೊಳ್ಳುವವು ಎಂಬುದಕ್ಕೆ ಗದುಗಿನ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘವೇ ಉದಾಹರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರಸಭೆಯ ವಾರ್ಡ್ ನಂ. 34ರಲ್ಲಿ ಸಿಸಿ ರಸ್ತೆ ಒಳಚರಂಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿದ ಆನಂತರ ಜರುಗಿದ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂಡೋರ್ ಸ್ಟೇಡಿಯಂ ಬಡಾವಣೆಯ ಉದ್ಯಾನದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಕಾರಣ ನಗರದ ಸರ್ವ ಪದಾಧಿಕಾರಿಗಳು ಪಂಚವಟಿ ನಾಗರಕಟ್ಟೆ ಉದ್ಯಾವನ ಗದಗ ನಗರದಲ್ಲಿಯೇ ಮಾದರಿಯಾಗಿ ನಿರ್ಮಾಣ ಮಾಡಲು ನಗರಸಭೆಯೊಂದಿಗೆ ಕೈ ಜೋಡಿಸಿ ಎಂದರು.

ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಈ ಬಡಾವಣೆಯಲ್ಲಿ ವಿದ್ಯಾವಂತರು, ಸರ್ಕಾರಿ ನೌಕರರು, ಪ್ರಜ್ಞಾವಂತರು ಹೆಚ್ಚಾಗಿ ವಾಸವಾಗಿದ್ದು, ಅವರೆಲ್ಲರೂ ಸಂಘಟಿತರಾಗಿ ಸಮಾಜಮುಖಿ, ಜನಮುಖಿ ಕಾರ್ಯ ಕೈಗೊಂಡಿರುವುದು ಅಭಿನಂದನೀಯ. ಈ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸುವ ಮೂಲಕ ಜನಪರ ಕಾರ್ಯಗಳಿಗೆ ಬೆಂಬಲಿಸಬೇಕು. ಇಂಡೋರ್ ಸ್ಟೇಡಿಯಂ ಬಡಾವಣೆಯ ಉದ್ಯಾನದ ಕಾಮಗಾರಿಗೆ ನನ್ನ ಶಾಸಕರ ನಿಧಿಯಿಂದ ಆರ್ಥಿಕ ಸಹಾಯವನ್ನು ಮಾಡುವುದಾಗಿ ಸಂಕನೂರ ಅವರು ಭರವಸೆ ನೀಡಿದರು.

ವಾರ್ಡ್‌ನ ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಅಧ್ಯಕ್ಷತೆ ವಹಿಸಿದ್ದರು. ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಮಾತನಾಡಿದರು.

ಅಶೋಕ ಮಂದಾಲಿ, ಲಕ್ಷ್ಮಣ ಜೋಗದಂಡಕರ, ಶಿವಾನಂದ ಪಲ್ಲೇದ, ಡಾ. ಡಿ.ಬಿ. ಚೆನ್ನಶೆಟ್ಟರ, ಜಗದೀಶ್, ವೀರಯ್ಯ ಹಿರೇಮಠ, ವಿ.ಎಸ್. ಶಿವಕಾಳಿಮಠ, ರಾಚಯ್ಯ ಕರವೀರಮಠ, ಅಮರನಾಥ ಗಡಗಿ, ಎಸ್.ವೈ. ಯಾಳಗಿಶೆಟ್ರು, ಡಾ. ರವಿ, ನಂದಿ, ಬಸವರಾಜ ಬೇಲೇರಿ, ಮಂಜುನಾಥ ಗಜಾಕೋಶ, ಶ್ರೀನಿವಾಸ, ಬಸವಂತಪ್ಪ ಕವಲೂರ, ಹಬೀಬ, ಡಿ.ಎಸ್. ಕಮತರ, ಮಂಜುನಾಥ ಚಿಕ್ಕನಗೌಡ್ರ, ಸಿದ್ದರಾಮೇಶ ಹಿರೇಮಠ, ಅನಿಲ ಗೌಳಿ, ಸುಭಾಸ್ ಗಡಾದ, ಶಿವಕುಮಾರ ರಾಠೋಡ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ ಇದ್ದರು. ಬಸವರಾಜ ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ನಂದಿ ಸ್ವಾಗತಿಸಿದರು. ಅಶೋಕ ಮಾಳೆಕೊಪ್ಪ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ