ಕಾವ್ಯ ಬದಲಾವಣೆಗೆ ಪ್ರೇರಕಶಕ್ತಿಯಾಗಲಿ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Mar 22, 2026, 02:30 AM IST
ಕಾರ್ಯಕ್ರಮದಲ್ಲಿ ಡಾ. ನಿಂಗು ಸೊಲಗಿ ಮಾತನಾಡಿದರು. | Kannada Prabha

ಸಾರಾಂಶ

ಭಾಷೆಯ ಸೊಗಸುಗಾರಿಕೆ, ಕಲ್ಪನಾಶಕ್ತಿ, ಪ್ರಯೋಗಶೀಲ ಗುಣ ಹಾಗೂ ಭಾವನಾತ್ಮಕ ಆಳ ಕವಿಗಳಾಗುವವರಿಗೆ ಇರಬೇಕಾದ ಮುಖ್ಯ ಗುಣಗಳು.

ಮುಂಡರಗಿ: ಕವಿಗಳಾಗ ಬಯಸುವವರು ಮೊದಲು ಬೇರೆ ಕವಿಗಳ ಕವಿತೆಗಳನ್ನು ಆಲಿಸುವ ಮತ್ತು ಆಸ್ವಾದಿಸುವುದನ್ನು ರೂಢಿಸಿಕೊಳ್ಳಬೇಕು. ಕಾವ್ಯವು ಕೇವಲ ಆನಂದಕ್ಕಲ್ಲ, ಆಯಾ ಕಾಲಘಟ್ಟದ ನಿರೀಕ್ಷಿತ ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯಾಗಬೇಕು ಎಂದು ಕವಿ, ನಾಟಕಕಾರ ಡಾ. ನಿಂಗು ಸೊಲಗಿ ತಿಳಿಸಿದರು.ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಯುಗಾದಿ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಭಾಷೆಯ ಸೊಗಸುಗಾರಿಕೆ, ಕಲ್ಪನಾಶಕ್ತಿ, ಪ್ರಯೋಗಶೀಲ ಗುಣ ಹಾಗೂ ಭಾವನಾತ್ಮಕ ಆಳ ಕವಿಗಳಾಗುವವರಿಗೆ ಇರಬೇಕಾದ ಮುಖ್ಯ ಗುಣಗಳು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಶಂಕರ ಕುಕನೂರ ಮಾತನಾಡಿ, ಆಗಾಗ ನಡೆಯುತ್ತಿರುವ ಸಾಹಿತ್ಯ ಮತ್ತು ಕವಿಗೋಷ್ಠಿಯಲ್ಲಿ ಕವಿಗಳು ಪಾಲ್ಗೊಳ್ಳುವುದರಿಂದ ಮತ್ತಷ್ಟು ಒಳ್ಳೆಯ ಕೃತಿಗಳು ಬರಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪರಿಸರವಾದಿ ಸಿ.ಎಸ್. ಅರಸನಾಳ, ಅವಿನಾಶ ಗೋಡಕಿಂಡಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕವಿಗೋಷ್ಠಿಯಲ್ಲಿ ಕೊಟ್ರೇಶ ಅಂಗಡಿ, ಸಿ.ಕೆ. ಗಣಪ್ಪನವರ, ಎಸ್.ವಿ. ಪಾಟೀಲ, ಪ್ರತಿಭಾ ಹೊಸಮನಿ, ವೀಣಾ ಪಾಟೀಲ, ರವಿ ದೇವರೆಡ್ಡಿ, ಕಳಕಪ್ಪ ಜಲ್ಲಿಗೇರಿ, ಶರಣಪ್ಪ ಕುಬಸದ, ಜಯಶ್ರೀ ಅಳವಂಡಿ, ಎಂ.ಎಸ್. ಶೀರನಹಳ್ಳಿ, ಪಾರ್ವತಿ ಕುಬಸದ, ಯಲ್ಲಪ್ಪ ಹರ್ನಾಳಗಿ, ಎನ್.ಎನ್. ಕಲಕೇರಿ, ಕೃಷ್ಣಮೂರ್ತಿ ಸಾಹುಕಾರ, ಮಂಜು ಮುಧೋಳ ಸೇರಿದಂತೆ ಅನೇಕರು ಕವನ ವಾಚನ ಮಾಡಿದರು. ಆರ್.ವೈ. ಪಾಟೀಲ ಪ್ರಾರ್ಥಿಸಿದರು. ಸಿ.ಕೆ. ಗಣಪ್ಪನವರ ಸ್ವಾಗತಿಸಿದರು. ವೀಣಾ ಪಾಟೀಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಳದಲ್ಲಿ ಮೂಲ ಸೌಕರ್ಯ ಇಲ್ಲದೇ ನಿವಾಸಿಗಳ ಪರದಾಟ
ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳ