ಹುಬ್ಬಳ್ಳಿ:
ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಜಿಮ್ಖಾನಾ ಮೈದಾನದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕೃತ ಪ್ರದರ್ಶಿನಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಇತಿಹಾಸ, ಪರಂಪರೆ ನೋಡಿದಾಗ ನಾಡಿನ, ದೇಶದ ಒಟ್ಟು ಭಾಷೆಗಳನ್ನು ಗಮನಿಸಿದಾಗ ಅತ್ಯಂತ ಪುರಾತನ ಭಾಷೆಗಳು ನಮ್ಮಲ್ಲಿವೆ. ವೇದ ಕಾಲದಲ್ಲಿ ವೇದಗಳ ರಚನೆಗೆ ಇದೇ ಭಾಷೆ ಬಳಕೆ ಮಾಡಲಾಗಿದೆ. ಅಷ್ಟೊಂದು ಭಾಷಾ ಸಂಪತ್ತು ಸಂಸ್ಕೃತಕ್ಕಿತ್ತು. ನಾವು ಸೇರಿದಂತೆ ಇಂದಿನ ಪಾಲಕರು ಆಂಗ್ಲ ಭಾಷೆ ಕಲಿತರೆ ಸಾಕು ಎನ್ನುವ ಮನಸ್ಥಿತಿಗೆ ಬಂದಿದ್ದೇವೆ. ಅಲ್ಲದೇ ಅನೇಕ ಪರಿಸ್ಥಿತಿಗಳಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.ಈ ವೇಳೆ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜೀತೇಂದ್ರ ಮಜೇಥಿಯಾ, ವಿಭವ ಇಂಡಸ್ಟ್ರೀಸ್ನ ಮುಖ್ಯ ಕಾರ್ಯನಿರ್ವಾಹಕ ನಂದಕುಮಾರ, ಕ್ಷಮತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಜೋಶಿ, ಪಂಚಾಮೃತ ಇಂಡಸ್ಟ್ರೀಸ್ನ ನಿರ್ದೇಶಕ ಚನ್ನಬಸಪ್ಪ ಹೊಸಮನಿ ಸೇರಿದಂತೆ ಹಲವರಿದ್ದರು.ಭಗವದ್ಗೀತೆ ಭಾರತದ ಪಾರಿಜಾತ: ಟೆಂಗಿನಕಾಯಿ
ಜಿಮ್ಖಾನಾ ಮೈದಾನದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗೀತಾಮೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಮಂತ್ರಿ ದತ್ತಾತ್ರೇಯ ವಜ್ರಳ್ಳಿ ಪ್ರಾಸ್ತಾವಿಕ ಮಾತನಾಡಿ, ಭಗವದ್ಗೀತೆ 5 ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಜನರಿಗೆ ಗಾಢವಾದ ಭಾವನೆ ಬೀರಿದೆ. ಜಗತ್ತಿನ ಜಿಜ್ಞಾಸೆಗಳಿಗೆ ಪ್ರೇರಣೆಯಾದ ಗ್ರಂಥವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಗೀತಾ ಸ್ಪರ್ಧೆ, ಉಪನ್ಯಾಸ, ವಸ್ತು ಪ್ರದರ್ಶಿನಿ, ಪುಸ್ತಕ ಪ್ರದರ್ಶಿನಿ, ಮಾರಾಟ, ರೂಪಕ ಹಾಗೂ ಸಂಪೂರ್ಣ ಅಧ್ಯಾಯಗಳನ್ನು ಕಂಠಸ್ಥ ಮಾಡಿದವರಿಗೆ ಸನ್ಮಾನಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷೆ ಭಾರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹದೇವ ಕರಮರಿ, ಸದಾನಂದ ಕಾಮತ್ ಸೇರಿದಂತೆ ಹಲವರಿದ್ದರು.