ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಸರ್ವ ಸಾಧಾರಣಾ ಸಭೆಯ ಘನ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ತೊಂದರೆದಾಯಕ. ಇಂಥಹ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಇಳಕಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘವು ಬೆಳೆದು ನಿಂತಿದೆ. ಇದಕ್ಕೆ ಕಾರಣೀಕರ್ತರಾದ ಸಂಘದ ಸರ್ವ ಸದಸ್ಯರು ಹಾಗೂ ಬೋಧಕ ಸಿಬ್ಬಂದಿಯೇ ಮೂಲ ಕಾರಣ ಎಂದರು ತಪ್ಪಲ್ಲ. ಇನ್ನೂ ಈ ಸಂಸ್ಥೆಗೆ ಶಾಸಕ ವಿಜಯಾನಂದ ಅವರು ಸಂಘ ಸಂಸ್ಥೆಗಳ ನಿರ್ದೇಶಕರಾಗಿ ಆಯ್ಕಯಾಗಿ ಬಂದಿದ್ದು, ಈ ಸಂಸ್ಥೆಗೆ ಆನೆ ಬಲ ಬಂದಂತ್ತಾಯಿತು ಎಂದು ಹೇಳಿದರು.
ಶಾಸಕರ ಮಾರ್ಗದರ್ಶನದಲ್ಲಿ ಇನ್ನಷ್ಟು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದರು. ಇನ್ನೂ ಇದೇ ವೇಳೆ ಶಾಸಕರು ಗುರುಮಹಾಂತ ಶ್ರೀಗಳನ್ನು ಗೌರವಿಸಿ ಸತ್ಕರಿಸಿದರು. ಸಂಸ್ಥೆಯವರು ಶಾಸಕ ವಿಜಯಾನಂದ ಕಾಶಪ್ಪನವರನ್ನು ಗೌರವಿಸಿದರು.ಇದೇ ವೇಳೆಯಲ್ಲಿ ಸಂಸ್ಥೆಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಂದಕಿಧೋತ ಕರವಾ, ವಿರಭದ್ರಪ್ಪ ಬೇವಿನಮಟ್ಟಿ, ಕಿರಣ ಬಿಜ್ಜಲ, ಮಲ್ಲಪ್ಪ ಹರವಿ, ಗುರುಮಹಾಂತೇಶ ಕಲ್ಮಠರನ್ನು ಗೌರವಸಿ ಸತ್ಕರಿಸಿದರು.