ಕನ್ನಡಪ್ರಭ ವಾರ್ತೆ ಕೋಲಾರಕಳೆದ ೫ ವರ್ಷಗಳ ಹಿಂದೆ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ಸಾಂಕ್ರಾಮಿಕ ಕೊರೋನಾ ವೈರಸ್ ಈಗ ಮತ್ತೆ ಸಿಂಗಾಪುರ, ಚೀನಾ, ಹಾಂಗ್ಕಾಂಗ್ ಸೇರಿದಂತೆ ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿದೆ. ಕರ್ನಾಟಕವೂ ಸೇರಿದಂತೆ ವಿವಿಧ ದೇಶಗಳಲ್ಲಿ ಸುಮಾರು ೬೫೪ ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದ ಕೋಲಾರ ಜಿಲ್ಲೆಯಲ್ಲಿ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ೩೮ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ, ಬೆಂಗಳೂರಿನಲ್ಲಿಯೇ ೩೨ ಪ್ರಕರಣಗಳು ದಾಖಲಾಗಿದೆ ಎಂದು ಹೇಳಲಾಗುತ್ತಿದ್ದು, ಬೆಂಗಳೂರಿಗೆ ೬೫ ಕಿ.ಮೀ ಅಂತರದಲ್ಲಿರುವ ಕೋಲಾರ ಜಿಲ್ಲೆಗೆ ಸೋಂಕು ಹರಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ, ಮುಂದಿನ ದಿನಗಳು ಮಳೆ-ಗಾಳಿ ಕಾಲವಾಗಿರುವುದರಿಂದ ಸೊಂಕುಗಳು ವೇಗವಾಗಿ ಹರಡುವ ಸಾಧ್ಯತೆಗಳಿದೆ. ಹಾಗಾಗಿ ಜಿಲ್ಲಾಡಳಿತವು ಮುನ್ನೆಚ್ಚರಿಕೆವಹಿಸಿ ಎಲ್ಲಾ ಕ್ರಮಗಳಿಗೆ ಮುಂದಾಗಬೇಕಾಗಿದೆ. ಕಳೆದ ಬಾರಿ ಕೊರೋನಾ ಸೋಂಕು ಹರಡಿದಾಗ ಜಿಲ್ಲೆಯಲ್ಲಿ ನೊರಾರು ಮಂದಿಯನ್ನು ಕಳೆದುಕೊಂಡ ನೆನಪುಗಳು ಮಾಸುವ ಮುನ್ನವೇ ಮತ್ತೆ ಕೊರೋನಾ ಬಂದಿರುವುದ ಕಂಡರೆ ಇದು ಸಹ ಪಂಚವಾರ್ಷಿಕ ಯೋಜನೆ ರೂಪಿಸಿಕೊಂಡಿದೆಯೇನೂ ಎಂಬ ಸಂಶಯ ಬರುವುದು ಸಹಜವಾಗಿದೆ, ಆದರೆ ಕೊರೋನಾ ವೈರಸ್ಗಳು ಕಳೆದ ಬಾರಿ ಇದ್ದಷ್ಟು ತೀವ್ರ ಪ್ರಬಲವಾಗಿಲ್ಲ ಎಂದು ಬೆಂಗಳೂರಿನ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.ಏನೇ ಆದರೂ ಸಾರ್ವಜನಿಕರು ಕಳೆದ ಬಾರಿಯಂತೆ ಮಾಸ್ಕ್ಗಳನ್ನು ಧರಿಸಬೇಕು. ಪರಸ್ಪರ ಅಂತರವನ್ನು ಕಾಯ್ದೆಕೊಂಡರೆ ಸಾಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಜನರಿಗೆ ಕೊರೋನಾ ಸೋಂಕು ನಿಯಂತ್ರಿಸುವಂತ ಜಾಗೃತಿಯ ಅರಿವು ಮೂಡಿಸಬೇಕಾಗಿದೆ. ಹೊರತು ವಿನಃ ಭಯಪಡುವಂತೆ ಆತಂಕ ವಾತವರಣ ಸೃಷ್ಠಿಸುವಿಕೆಗೆ ಕಡಿವಾಣ ಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ಅಪಪ್ರಚಾರಗಳಿಗೆ ಕಡಿವಾಣ ಹಾಕಬೇಕಾಗಿದೆ.ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಲಂಗು, ಲಾಗಮು ಇಲ್ಲದಂತೆ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಅಪಪ್ರಚಾರ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಸಾರ್ವಜನಿಕರು, ಕೋರೋನಾಗಿಂತ ಹೆಚ್ಚಾಗಿ ಭೀತಿಗಳಿಗೆ ತುತ್ತಾಗಿ ಸಾವನ್ನಪ್ಪುವಂತ ಪ್ರಕರಣಗಳೇ ಹೆಚ್ಚಾಗುವ ಸಾಧ್ಯತೆ ಇರುವುದು ಹಾಗಾಗಿ ಈ ಕುರಿತು ಅಪಪ್ರಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಗಳು ಮುಂದಾಗಬೇಕಾಗಿದೆ.ಕೋಲಾರದಿಂದ ಪ್ರತಿನಿತ್ಯ ಸಾವಿರಾರು ಮಂದಿ ಬೆಂಗಳೂರಿಗೆ ಪ್ರಯಾಣಿಸುವುದರಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಅರಿವು ಮೂಡಿಸುವ ಮೂಲಕ ಮುಂದಿನ ಸಾವು-ನೋವುಗಳನ್ನು ನಿಯಂತ್ರಿಸಬೇಕಾಗಿದೆ, ಮಾಸ್ಕ್ನ್ನು ಕಡ್ಡಾಯಗೊಳಿಸಬೇಕಾಗಿದೆ. ಸಾರ್ವಜನಿಕರು ಜನದಟ್ಟನೆ ಕೊಡುವ ಜಾಗದಲ್ಲಿ ಮಾಸ್ಕ್ ಧರಿಸುವುದು ಸೂಕ್ತವಾದ ಕ್ರಮವಾಗಿದೆ. ಕೊರೋನಾದ ಲಕ್ಷಣಗಳು ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೊರೋನಾ ಟೆಸ್ಟ್ಗಳನ್ನು ಪ್ರಾರಂಭಿಸಬೇಕು. ವಿಶೇಷ ಕೊಠಡಿಗಳಿಗೆ ಹಾಗೂ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್ಗಳು ಮುಂಜಾಗೃತಕ್ರಮವಾಗಿ ದಾಸ್ತನು ಮಾಡಿಕೊಳ್ಳಬೇಕು, ಕೊರೋನಾ ನಿರೋಧಕ ಲಸಿಕೆಗಳು ಸಿದ್ದಪಡಿಸಿ ಕೊಂಡಿರಬೇಕು.ಕೋರೋನಾ ಲಕ್ಷಣಗಳು ಜ್ವರ, ಸ್ರವಿಸುವ ಮೂಗು, ಗಂಡಲು ನೋವು, ತಲೆನೋವು, ಆಯಾಸ ಬಳಲಿಕೆ ಮುಂತಾದವು ಕಾಣಿಸಿಕೊಳ್ಳುತ್ತದೆ. ಕರ್ನಾಟಕದಲ್ಲಿ ಕೋವಿಡ್-೧೯ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದಾಖಲಾಗುವ ರೋಗಿಗಳಿಂದ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಕೋವಿಡ್ ಟೆಸ್ಟ್ಗಳನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಕೋರೋನಾ ಕೋಲಾರಕ್ಕೆ ಕಾಲಿಡುವ ಮುನ್ನ ಕಳೆದ ವರ್ಷದ ಅಂಕಿಅಂಶಗಳಿಗೆ ಸಮಾಂತರವಾಗಿ ಔಷಧಿಗಳನ್ನು ಲಸಿಕೆಗಳನ್ನು ಪರೀಕ್ಷಾ ಕಿಟ್ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಸೂಕ್ತವಾಗಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುತ್ತಿದೆ. ಮಂದಗತಿಯಲ್ಲಿ ಕಾಣಿಸಿಕೊಂಡ ಕೋರಾನ ಮುಂದಿನ ದಿನಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುವುದನ್ನು ಅಲ್ಲಗೆಳೆಯಲು ಸಾಧ್ಯವಾಗದೆ ಹಾಗಾಗಿ ಜಿಲ್ಲಾಡಳಿತವು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಸೊಕ್ತವಾಗಿದೆ ಎಂಬುವುದು ಪ್ರಜ್ಞಾವಂತರ ಸಲಹೆಯಾಗಿದೆ.