ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಶನಿವಾರ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತ ಹೋರಾಟಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಚಳವಳಿಯ ಪ್ರಖ್ಯಾತ ಹೋರಾಟಗಾರರು ಮರೆಯಾಗಿದ್ದಾರೆ. ಬೃಹತ್ ರೈತ ಚಳವಳಿಗಳು ಇತಿಹಾಸದ ಪುಟ ಸೇರಿಯಾಗಿದೆ. ಅಂದಿನ ಹಸಿರು ಶಾಲುಗಳ ಗತವೈಭವ ಮತ್ತೆ ಮರುಕಳಿಸಲು ರೈತಸಂಘದವರು ಮುಂದಾಗಬೇಕು ಎಂದರು.
ಶಕ್ತಿ ಕೇಂದ್ರ ಅನಿಸಿಕೊಂಡಿರುವ ವಿಧಾನಸೌಧದಲ್ಲೇ ರೈತರಿಗೆ ಅನ್ಯಾಯವಾಗುತ್ತಿದೆ. ಇಂದಿಗೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ರೈತರ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಯಾವ ಸರ್ಕಾರವೂ ಅನ್ನದಾತನ ಸಮಸ್ಯೆ ಪರಿಹರಿಸಲು ಸಮರ್ಪಕವಾದ ಯೋಜನೆ ರೂಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಂದಿನ ಯುವಕರು ಚಿನ್ನದಂತಾ ಗತಕಾಲದ ಚಳವಳಿಗಳ ಮಾಹಿತಿ ಪಡೆದು ಜಾಗೃತರಾಗಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಚಳವಳಿ ನಿರಂತರವಾಗಿ ನಡೆಯಬೇಕು. ರೈತರ ಮನೆ ಜೀವಗಳು ಉಳಿಯುವಂತಾಗಬೇಕು ಎಂಬುದು ರೈತಸಂಘದ ಆಶಯವಾಗಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜಿಲ್ಲೆಯ ಹಲವು ಮುಖಂಡರು ಮನೆಯ ಹಿತವನ್ನು ಬದಿಗಿಟ್ಟು ದಶಕಗಳ ಕಾಲದಿಂದ ರೈತಪರ ಹೋರಾಟದಲ್ಲಿ ಭಾಗಿಯಾಗಿದ್ದೀರಿ. ನಾನು ತಂದೆಯವರ ಕಾಲದಲ್ಲಿ ಹೋರಾಟವನ್ನು ನೋಡಿದ್ದೆ. ಯಾವುದೇ ಚಳವಳಿಯಲ್ಲಿ ಭಾಗವಹಿಸಿಲ್ಲ. ಆದರೆ, ಹೋರಾಟಗಾರರ ಬದಕು ಬವಣೆ ತಿಳಿದಿದ್ದೇನೆ ಎಂದರು.
ಹೋರಾಟದ ಜೊತೆಗೆ ರೈತಸಂಘ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ಹಮ್ಮಿಕೊಳ್ಳಬೇಕಾಗಿದೆ. ನಾನು ರೈತಸಂಘದ ಜೊತೆಗಿರುತ್ತೇನೆ. ಎಲ್ಲಾ ರೀತಿಯ ಸಹಕಾರಗಳನ್ನೂ ನೀಡಲು ಸದಾಸಿದ್ಧವಾಗಿದ್ದೇನೆ. ರೈತಸಂಘ ರೈತಪರ ಕೆಲಸವನ್ನು ಹೆಚ್ಚಾಗಿ ಮಾಡಬೇಕು ಎಂದು ಕರೆ ನೀಡಿದರು.
100ಕ್ಕೂ ಹೆಚ್ಚು ಹೊರಾಟಗಾರಿಗೆ ಗೌರವಾರ್ಪಣೆ:
ಕೆ.ಎಸ್.ಪುಟ್ಟಣ್ಣಯ್ಯರ ಅವಧಿಯಿಂದಲೂ ಕಾವೇರಿ ಚಳವಳಿ,ಕಬ್ಬು ಬೆಳೆ ಹೋರಾಟ, ಸ್ಥಳೀಯ ಸಮಸ್ಯೆಗಳ ಹೋರಾಟ ಸೇರಿದಂತೆ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸಿದ ಪಾಂಡವಪುರ ತಾಲೂಕಿನ ನ್ಯಾಮನಹಳ್ಳಿಯ ಶಿವರಾಮೇಗೌಡ, ಹೊಸಕೋಟೆ ರಾಮೇಗೌಡ, ಮೇಲುಕೋಟೆ ಲಕ್ಷ್ಮೇಗೌಡ ನಾರಾಯಣಪುರ ಜಯರಾಮೇಗೌಡ, ಶ್ರೀರಂಗಪಟ್ಟಣ ಮಹದೇವಪುರ ನಾಗೇಂದ್ರ, ತಮ್ಮೇಗೌಡ ಮದ್ದೂರು ರವಿಕುಮಾರ್ ಸೇರಿದಂತೆ 100ಕ್ಕೂಹೆಚ್ಚು ರೈತ ಹೋರಾಟಗಾರರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿನಂದಿಸಿದರು.