ತಟ್ಟಿಹಕ್ಲಲು ದುರಂತದ ಬಗ್ಗೆ ಸೂಕ್ತ ತನಿಖೆ ಆಗಲಿ: ಸಂಸದ ಕಾಗೇರಿ

KannadaprabhaNewsNetwork |  
Published : May 28, 2026, 02:15 AM IST
ಪೊಟೋ ಪೈಲ್ : 27ಬಿಕೆಲ್3 | Kannada Prabha

ಸಾರಾಂಶ

ಶಿರಾಲಿಯ ತಟ್ಟಿಹಕ್ಲ ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಮಂದಿ ಅಸುನೀಗಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಜನತೆಗೆ ಮಾಹಿತಿ ನೀಡಬೇಕು.

ಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ತಟ್ಟಿಹಕ್ಲ ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಮಂದಿ ಅಸುನೀಗಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಜನತೆಗೆ ಮಾಹಿತಿ ನೀಡಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಟ್ಟಿಹಕ್ಕಲು ದುರಂತದಿಂದ ಆದ 11 ಜನರ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಅಭಿಪ್ರಾಯ ಕೇಳಿ ಬಂದಿದೆ. ಈ ದುರಂತ ಅದೇ ದಿನ ಬೆಳಗಿನ ಜಾವ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹೊಳೆಯಲ್ಲಿ ಕೆಸರಿನಿಂದ ಆಗಿದೆಯೋ, ರೆಸಾರ್ಟ್‌ ಮಾಡಲು ಸೇತುವೆಗಾಗಿ ಮಣ್ಣು ತುಂಬಿದ್ದರಿಂದ ನೀರು ಒಂದು ಕಡೆಯಲ್ಲಿ ನಿಂತ ಪರಿಣಾಮದಿಂದ ಆಗಿದೆಯೋ ಅಥವಾ ಸಹಜವಾಗಿಯೇ ಆಗಿದೆಯೋ ಎನ್ನುವುದರ ಬಗ್ಗೆ ಕೂಲಂಕುಶವಾದ ತನಿಖೆ ನಡೆಸುವ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತವನ್ನು ಒತ್ತಾಯಿಸಲಿದ್ದೇನೆ ಎಂದ ಅವರು ಮೃತರ ಕುಟುಂಬದವರಿಗೆ ಸರಕಾರದಿಂದ ಏನೇನು ಸೌಲಭ್ಯ ಸಿಗಬೇಕೋ ಮತ್ತು ಸಾಮಾಜಿಕವಾಗಿ ಏನು ಸಹಾಯ ಮಾಡಬೇಕೋ ಅದನ್ನು ಮಾಡುವ ಕೆಲಸ ಮಾಡುತ್ತೇವೆ ಎಂದರು. ಇಂತಹ ದುರಂತದಿಂದ ನೋವಾಗಿದೆ. ಮೃತರ ಮನೆಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ನಮ್ಮಿಂದ ಆಗುವ ಸಹಾಯ ಖಂಡಿತ ಮಾಡುತ್ತೇವೆ ಎಂದರು.ಭಟ್ಕಳ ದುರಂತ: ಮೃತರ ಕುಟುಂಬದವರಿಗೆ ಕಾಗೇರಿ ಸಾಂತ್ವನ

ಇತ್ತೀಚೆಗೆ ಶಿರಾಲಿಯ ತಟ್ಟಿಹಕ್ಲು ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸುವಾಗ ನಡೆದ ದುರಂತದಿಂದ ಮೃತಪಟ್ಟವರ ಮನೆಗೆ ಬುಧವಾರ ಬೆಳಗ್ಗೆ ಸಂಸದ ವಿಶ್ವೇಶ್ಬರ ಹೆಗಡೆ ಕಾಗೇರಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ದುರಂತದಿಂದ ಎಲ್ಲರಿಗೂ ನೋವಾಗಿದೆ. ಕೇಂದ್ರ ಸರಕಾರದಿಂದ ಈಗಾಗಲೇ ಪರಿಹಾರ ಘೋಷಣೆ ಆಗಿದ್ದು, ಸರಕಾರದಿಂದ ಮತ್ತಷ್ಟು ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಮೃತಪಟ್ಟವರ ಮನೆಯವರು ದು:ಖದಲ್ಲಿದ್ದಾರೆ. ಕೆಲವರು ಆಹಾರವನ್ನೂ ಸರಿಯಾಗಿ ಸೇವಿಸದ ಹಿನ್ನೆಲೆ ಸಂಸದರು ಕುಟಂಬದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಈ ಭಾಗಕ್ಕೆ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸುವಂತೆ ಸೂಚಿಸಿದರು.ಈ ಸಂದರ್ಭ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಊರಪ್ರಮುಖರಾದ ಕೃಷ್ಣಾ ನಾಯ್ಕ, ಪೃಥ್ವಿ ಸೇರಿದಂತೆ ಹಲವು ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ: ಶಾಸಕ ಗವಿಯಪ್ಪ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡಿ