ರಾಷ್ಟ್ರಧ್ವಜ ಎತ್ತಿ ಹಿಡಿಯೋಣ, ವಿಕಸಿತ ಭಾರತದೆಡೆಗೆ ಒಟ್ಟಾಗೋಣ

KannadaprabhaNewsNetwork |  
Published : Aug 12, 2026, 03:15 AM IST
(ಪೋಟೋ-11ಬಿಕೆಟಿ7, (1)ರಾಷ್ಟ್ರಧ್ವಜದ ಗೌರವ, ದೇಶದ ಏಕತೆ ಹಾಗೂ ಅಖಂಡತೆಯ ಸಂದೇಶ ಸಾರಿದ ಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ, ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಭವ್ಯ ಬೃಹತ್ ತಿರಂಗಾ ಯಾತ್ರೆ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ, ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಭವ್ಯ ಬೃಹತ್ ತಿರಂಗಾ ಯಾತ್ರೆ ಅದ್ಧೂರಿಯಾಗಿ ನಡೆಯಿತು.

ನಗರದ ಬಿಳೂರು ಗುರುಬಸವ ಅಜ್ಜನವರ ದೇವಸ್ಥಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರ ಗೌರವದ ಸಂಕೇತವಾಗಿರುವ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನಲ್ಲೂ ಐಕ್ಯತೆ, ಹೆಮ್ಮೆ ಹಾಗೂ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ ಎಂದರು.

500 ಮೀಟರ್ ಉದ್ದದ ಬೃಹತ್ ತಿರಂಗಾ ಆಕರ್ಷಣೆ: ಯಾತ್ರೆಯಲ್ಲಿ ಸುಮಾರು 500 ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ ಸಾಗಿದ ಕಾರ್ಯಕರ್ತರು ಹಾಗೂ ನಾಗರಿಕರು ಯಾತ್ರೆಗೆ ಮೆರುಗು ತಂದರು.

ತಿರಂಗಾ ಯಾತ್ರೆಯು ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ರಸ್ತೆ, ಕಿಲ್ಲಾ ಅಂಬಾಭವಾನಿ ದೇವಸ್ಥಾನ, ಹಳೆ ಪೋಸ್ಟ್ ಮಾರ್ಗವಾಗಿ ಸರದಾರ ವಲ್ಲಭಭಾಯಿ ಪಟೇಲ್ ಚೌಕ್ನಲ್ಲಿ ಸಮಾರೋಪಗೊಂಡಿತು. ನಂತರ ನಡೆದ ಬಹಿರಂಗ ಸಭೆ ಜರುಗಿತು. ಮಾಜಿ ಸೈನಿಕರಾದ ಕ್ಯಾಪ್ಟನ್ ಅರ್ಜುನ ಕೋರಿ, ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ, ಸುಬೇಧಾರ್ ಶಂಕ್ರಪ್ಪ ಬಾರಕೇರ, ಹವಾಲ್ದಾರ ವಿನೋಧ ಮುಧೋಳಿ, ನಂದು ಗಾಯಕವಾಡ, ಬಸವರಾಜ ಯಂಕಂಚಿ, ಕುಮಾರಸ್ವಾಮಿ ಹಿರೇಮಠ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸರಾಜ ಹುನಗುಂದ, ಸುರೇಶ ಕೊಣ್ಣುರ, ಡಾ.ರವಿ ಕೋಟೆನ್ನವರ, ಸುರೇಶ ಮಜ್ಜಗಿ, ಕಲ್ಲಪ್ಪ ಭಗವತಿ, ಮಲ್ಲೇಶ ವಿಜಾಪುರ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ, ರಾಜು ರೇವಣಕರ, ಸತ್ಯನಾರಾಯಣ ಹೆಮಾದ್ರಿ, ಶಶಿಕಲಾ ಮಜ್ಜಗಿ ಭಾಗೀರಥಿ ಪಾಟೀಲ, ಜಯಶ್ರೀ ಭದ್ರಶೆಟ್ಟಿ, ಶಿವಲೀಲಾ ಸಂಬನ್ನವರ, ಸುಜಾತಾ ಶಿಂಧೆ, ಲಕ್ಷ್ಮೀ ತಳವಾರ, ಸಂಚಾಲಕರಾದ ಶಂಕರ ಗಲಗ, ಚಂದ್ರಕಾಂತ ಖಾತೆದಾರ, ಮಾನೇಶ ಅಂಬಿಗೇರ, ದುಂಡಪ್ಪ ಏಳಮ್ಮಿ, ನಾಗರಾಜ ನಾರಾಯಣಕರ್, ವಿಲಾಸ ಒಂದಕುದರಿ, ಆಕಾಶ ಚವ್ಹಾಣ, ಸೇರಿದಂತೆ ಎನ್.ಸಿ,ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ರಾಷ್ಟ್ರಧ್ವಜದ ಗೌರವ, ದೇಶದ ಏಕತೆ ಹಾಗೂ ಅಖಂಡತೆಯ ಸಂದೇಶ ಸಾರಿದ ಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯೋಣ, ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ ತಿರಂಗಾ ಯಾತ್ರೆ ಯಶಸ್ವಿಯಾಗಿ ನಡೆಯಿತು.

ಯುವಜನತೆಯಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರಧ್ವಜ ಎತ್ತಿ ಹಿಡಿಯೋಣ, ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ ತಿರಂಗಾ ಯಾತ್ರೆ ಕಾರ್ಯಕ್ರಮಗಳು ಮಹತ್ವದ್ದಾಗಿವೆ, ಪ್ರಧಾನಿ ನರೇಂದ್ರ ಮೋದಿಯವರು ಕರೆಯಂತೆ ಪ್ರತಿಯೊಂದು ಮನೆಯ ಮೇಲೂ ನಮ್ಮ ರಾಷ್ಟ್ರ ಧ್ವಜ ಹಾರಾಡಲಿ ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಪ್ರಗತಿ ಮತ್ತು ಏಕತೆಯ ಸಂಕೇತ, ಎಲ್ಲರೂ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿ.

-ಡಾ.ವೀರಣ್ಣ ಚರಂತಿಮಠ, ಮಾಜಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ
ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!