ಹೊಸಪೇಟೆ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪತ್ತಿನ ವ್ಯವಹಾರ ತನ್ನದೇ ಆದ ಮಹತ್ವ ಹೊಂದಿದೆ. ಅದನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಜಿಲ್ಲಾ ಯೂನಿಯನ್ ಅಧ್ಯಕ್ಷ ಜೆ.ಎಮ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಹಂತದಲ್ಲಿಯೂ ಕಾನೂನು ಬದಲಾವಣೆಗಳು ನಿರಂತರವಾಗಿದ್ದು, ಅವುಗಳನ್ನು ಸಹಕಾರಿ ಸಂಘಗಳಿಗೆ ತಿಳಿಯಪಡಿಸುವ ದೃಷ್ಟಿಯಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಲ್ಬುರ್ಗಿ ವಿಭಾಗದಲ್ಲಿ ಹಮ್ಮಿಕೊಂಡ ಮೊದಲ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಮುಖಂಡರಾದ ಬಿ.ಕೆ.ನಾಗರಾಜರಾವ್, ಬಂಡೆ ರಂಗಪ್ಪ, ಬಿ.ವಿ.ರವೀಂದ್ರನಾಥ್, ವರುಣ್ ಭಟ್, ಹಾಲಯ್ಯ ಉಡೇಚಾರ ಪಾಲ್ಗೊಂಡಿದ್ದರು.ಮಹಾಮಂಡಳದ ಅಧಿಕಾರಿ ರುದ್ರಪ್ಪ, ಮಲ್ಲಯ್ಯಶೆಟ್ಟಿ, ಯೂನಿಯನ್ನ ಸಿಇಒ ನಾಗರಾಜ, ಗುರುರಾಜ ಜೋಶಿ ನಿರ್ವಹಿಸಿದರು.
ಹೊಸಪೇಟೆಯಲ್ಲಿ ಸಹಕಾರ ಮಹಾಮಂಡಳದ ವತಿಯಿಂದ ಕಲ್ಬುರ್ಗಿ ವಿಭಾಗದ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಆಡಳಿತ ಮಂಡಳಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನುಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ಉದ್ಘಾಟಿಸಿದರು.