ಸಂಗೀತ ಆಲಿಕೆಯಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ: ಡಾ.ಜೆ.ಕರಿಯಪ್ಪ ಮಾಳಿಗೆ

KannadaprabhaNewsNetwork |  
Published : Apr 29, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯವಾಗುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ .ಕರಿಯಪ್ಪ ಮಾಳಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯವಾಗುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜೆ .ಕರಿಯಪ್ಪ ಮಾಳಿಗೆ ಹೇಳಿದರು.

ಮದಕರಿ ಯುವಕ ಸಂಘ, ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಐಮಂಗಲದ ಪೊಲೀಸ್ ತರಬೇತಿ ಶಾಲೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಸದಾ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿರುತ್ತಾನೆ. ಇಂತಹ ಒತ್ತಡದಿಂದ ಹೊರ ಬರಲು ಸಂಗೀತದ ಮೊರೆ ಹೋಗುವುದು ಸುಲಭದ ಮಾರ್ಗವೆಂದರು.

ಆಧುನಿಕ ತಂತ್ರಜ್ಞಾನ ಮೊಬೈಲ್ ಇಂದು ಅನೇಕ ಸಮಸ್ಯೆ ಸೃಷ್ಟಿಸುತ್ತಿದೆ. ಮೊಬೈಲ್ ಗೀಳಿನಿಂದ ಯುವಕರು ಬೇರೆಯದೇ ಒತ್ತಡದಲ್ಲಿ ಮುಳುಗುತ್ತಿದ್ದಾರೆ. ಮೊಬೈಲ್ ಗೀಳು ಒಳ್ಳೆಯದಲ್ಲವೆಂದು ಹೇಳಿದರೂ ಕೇಳಿಸಿಕೊಳ್ಳುವ ಪರಿಸ್ಥಿಯಲ್ಲಿ ಯುವಕರು ಇಲ್ಲ. ಇದಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲ. ನಡೆ, ನುಡಿ ಮನಸ್ಸನ್ನು ಶುದ್ದಗೊಳಿಸುವ ಪ್ರಾಚೀನ ಕಲೆ ಸಂಗೀತ ಮಾತ್ರ ಸಿದ್ಧೌಷಧವಾಗಬಲ್ಲದೆಂದರು.

ಸಂಗೀತ ಹಾಡುವುದು ಒಂದು ಕಲೆಯಾದರೆ ಅದನ್ನು ಕೇಳುವುದು, ಪ್ರೋತ್ಸಾಹ ಮಾಡುವುದು ಒಂದು ಕಲೆಯಾಗಿದೆ. ಮಾನವ ಎಲ್ಲಾ ಕಲೆಯನ್ನು ಬಲ್ಲವನಾಗಿದ್ದಾನೆ. ಆದರೆ ತಮಗೆ ಬೇಕಾದ ಕಲೆಯನ್ನು ಮಾತ್ರ ರೂಢಿಸಿಕೊಳ್ಳುತ್ತಾನೆ. ಕಲೆ ಇಂದಿನ ದಿನಮಾನದಲ್ಲಿ ಅನಿವಾರ್ಯ ಮತ್ತು ಅಗತ್ಯವಾಗಿದೆ. ಸಂಗೀತವನ್ನು ಆಸ್ವಾದಿಸುವವರಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ. ಸೌಹಾರ್ದ ಸಾಮರಸ್ಯವನ್ನು ಮೂಡಿಸುತ್ತದೆ. ಭಾವನಾತ್ಮಕವಾದ ಆರೋಗ್ಯವನ್ನು ಉಂಟು ಮಾಡುತ್ತದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ 1680 ಗ್ರಾಮಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿನ ಬುಡಕಟ್ಟಿನ ವಿಷಯಗಳನ್ನು ಅವಲೋಕನ ಮಾಡಿ ಅದನ್ನು ಸಂಶೋಧಿಸಿ ಎರಡು ಸಂಪುಟಗಳಲ್ಲಿ ಚರಿತ್ರೆಯನ್ನು ಬರೆಯಲಾಗಿದೆ. ಭಜನೆ ಪದಗಳನ್ನು ಆಲಿಸುವುದರಿಂದ ಎಲ್ಲವನ್ನು ಮೀರಿದ ಮಾನವೀಯ ಮೌಲ್ಯಗಳು ಅನಾವರಣಗೊಳ್ಳುತ್ತವೆ. ಸಂವೇದನೆ ರಹಿತರು ವಿವಿಧ ರೀತಿಯ ರೋಗಗಳಿಗೆ ಬಲಿಯಾಗುತ್ತಾರೆ. ಸಂಗೀತವು ಸಂವೇದನೆ, ಸಂಬಂಧ, ಪ್ರೀತಿಯನ್ನು ಬೆಳೆಸುತ್ತದೆ. ಜಾತಿ, ಧರ್ಮ, ದೇವರು, ರಾಜಕೀಯದಲ್ಲಿ ಬಿಕ್ಕಟ್ಟು ಇಕ್ಕಟ್ಟುಗಳಲ್ಲಿ ಮುಳುಗಿರುವ ಇಂದಿನ ಜನಸಮುದಾಯಗಳಿಗೆ ಮನುಷ್ಯರೆಲ್ಲ ಒಂದೇ ಎಂದು ಸಾರುವುದು ದು ಸಾಹಿತ್ಯ, ಕಲೆ, ಸಂಗೀತವಾಗಿದೆ ಎಂದರು.

ಪೋಲಿಸ್ ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ ಮಾತನಾಡಿ, ಒತ್ತಡ ನಿವಾರಣೆ ಮಾಡಲು ಸಂಗೀತ ಉತ್ತಮವಾದ ಸಾಧನವಾಗಿದೆ. ಇಂದು ಸಂಗೀತಕ್ಕೆ ತಲೆ ಭಾಗದವರು ಯಾರು ಇಲ್ಲ. ಪ್ರಾಣಿ, ಪಕ್ಷಿಗಳು, ಮಾನವರು, ಗಿಡಗಳು ಸಹಾ ಸಂಗೀತಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವದ್ದಿಕೆರೆ ಕಾಂತರಾಜು, ಆಕಾಶವಾಣಿ ಕಲಾವಿದ ಹಾಗೂ ಸಂಗೀತ ಪ್ರಾಧ್ಯಾಪಕ, ಆನಂದ್ ಆರ್ ಪಾಟೀಲ್, ಪೋಲಿಸ್ ಇಲಾಖೆಯ ಪ್ರಶಾಂತ್, ಲೋಕೇಶ್, ಶಿವಕುಮಾರ್, ಆನಂದ, ಶರಣಬಸಪ್ಪ, ಪರಶುರಾಮ್ ಭಾಗವಹಿಸಿದ್ದರು. ಮದಕರಿ ಬಳಗದ ಡಿ. ಗೋಪಾಲಸ್ವಾಮಿ ನಾಯಕ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಾಫಿಕ್‌ ಸಮಸ್ಯೆ ನಿಯಂತ್ರಣ ಕ್ರಮ ವಹಿಸಿ
ಇತ್ತೀಚಿನ ಖಾಯಿಲೆಗಳಿಗೆ ಕ್ರೀಡೆಗಳು ರಾಮಬಾಣ: ಅಶೋಕ ಮೆಹ್ತಾ