ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಂಸ್ಥೆ, ವಿಷ್ಣು ಸಹಸ್ರನಾಮ ಗ್ಲೋಬಲ್ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಭಜನಾ ಪರಿಷತ್ ಸಹಯೋಗದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಉಭಯ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಧರ್ಮರಾಯ, ಶ್ರೀಕೃಷ್ಣನಿಗೆ ಮುಂದೇನು ಮಾಡಬೇಕು ಮಾರ್ಗದರ್ಶನ ಕೊಡುವಂತೆ ವಿನಂತಿಸಿದಾಗ ಕ್ಷತ್ರೀಯನಾಗಿ ಹುಟ್ಟಿದರೂ ಸುದೀರ್ಘ 700 ವರ್ಷಗಳ ಕಾಲ ಬದುಕಿದ ಮತ್ತು ಅದರಲ್ಲಿ 525 ವರ್ಷಗಳನ್ನು ಅಧ್ಯಯನಕ್ಕೆ ಮೀಸಲಿಟ್ಟ ಭೀಷ್ಮಾಚಾರ್ಯರಲ್ಲಿ ಹೋಗಿ ಕೇಳು ಎಂದು ಸಲಹೆ ನೀಡುತ್ತಾರೆ. ಆಗ ಭೀಷ್ಮರು ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದು ವಿಷ್ಣು ಸಹಸ್ರನಾಮ ಎಂದು ಅರ್ಥಸಹಿತವಾಗಿ ಧರ್ಮರಾಯನಿಗೆ ಹೇಳುತ್ತಾನೆ. ಮಾನವನ ಪ್ರಯತ್ನಕ್ಕೆ ಭಗವಂತನ ಅನುಗ್ರಹವೂ ಬೇಕು. ಹಕ್ಕಿಯೊಂದು ವಿಹರಿಸಲು ಎರಡೂ ರೆಕ್ಕೆಗಳು ಬೇಕು. ಆಗಮಾತ್ರ ಅದಕ್ಕೆ ಸ್ವಚ್ಛಂದವಾಗಿ ವಿಹರಿಸಲು ಸಾಧ್ಯ. ಅದೇ ರೀತಿ ಭಗವಂತನ ಅನುಗ್ರಹ ಬೇಕೇ ಬೇಕು ಎಂದರು.ನಿತ್ಯದಾನ, ಧರ್ಮ, ಸತ್ಕರ್ಮ ಆಚರಣೆ ಮಾಡಿದಾಗ ನಿತ್ಯಸಂಪತ್ತು ನಮ್ಮದಾಗುತ್ತದೆ. ಯಶಸ್ಸು, ಕೀರ್ತಿ ಲಭಿಸುತ್ತದೆ. ಹೃದಯದೊಳಗೆ ಭಗವಂತ ಬಂದು ನಿಲ್ಲುತ್ತಾನೆ. ಸಕಲ ಮಂಗಲಗಳಿಗೆ ಮನೆಯಾಗಿರುವವನು ಶ್ರೀಹರಿ. ಭಗವಂತನ ನಖದಿಂದ ಪವಿತ್ರ ಗಂಗಾನದಿ ಹುಟ್ಟಿ ಎಲ್ಲರನ್ನೂ ಪಾವನರನ್ನಾಗಿ ಮಾಡುವ ಹಾಗೆ ಭಗವಂತನ ಪಾದಸಂಪರ್ಕ ಪಡೆದ ಗೋಪಿಚಂದನ ಕೂಡ ಅಷ್ಟೇ ಪವಿತ್ರವಾಗಿದೆ. ಭಗವಂತನ ಸಂಪರ್ಕ ಪಡೆದ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರವಾಗಿದೆ. ಹಾಗೆಯೇ ಯಾರು ಭಗವಂತನನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೋ ಅವರಿಗೆ ಸದಾ ನಿತ್ಯೋತ್ಸವವಾಗಿರುತ್ತದೆ ಎಂದು ಹೇಳಿದರು.
ಭಗವಂತನ್ನು ಸ್ತುತಿಸುವವರಿಗೆ ಶ್ರೀ ವಿಷ್ಣು ಎಂದಿಗೂ ದು:ಖ ಕೊಡಲಾರ. ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ. ಸಮಗ್ರ ಹಿಂದೂಗಳನ್ನು ಒಂದೆಡೆ ತರಲು ವಿಷ್ಣು ಸಹಸ್ರನಾಮ ಪಾರಾಯಣದ ಉದ್ಧೇಶವಾಗಿದೆ. ಜೀವನದಲ್ಲಿ ತಾಳ್ಮೆಯೇ ತಪಸ್ಸು. ಜೀವನ ಪರ್ಯಂತ ಧೈರ್ಯಗಡೆದೆ ಪಾಲಿಸಬೇಕು ಎಂದರು.
ಮುಂದೆ 5 ಸಾವಿರ ಭಕ್ತರಿಂದ ವಿಷ್ನು ಸಹಸ್ರನಾಮ ಪರಾಯಣ