ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಕ್ರೂರತ್ವವನ್ನು ಹೋಗಲಾಡಿಸಲು ಶ್ರೀಕೃಷ್ಣನು ನೀಡಿದ ಮಾನವ ಪ್ರೇಮ ಸಂದೇಶಗಳ ಕೊಡುಗೆ ಅಪಾರವಾಗಿದೆ. ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಜನಜನಿತವಾಗಿವೆ. ಮಹಾಭಾರತದ ಮೂಲಕ ಶ್ರೇಷ್ಠ ಪಾತ್ರಗಳನ್ನು ಪರಿಚಯಿಸಿದ ಶ್ರೀಕೃಷ್ಣನ ಮಾನವ ಕಲ್ಯಾಣದ ಸಂದೇಶಗಳನ್ನು ನಾವೆಲ್ಲರು ಪಾಲಿಸಬೇಕು ಎಂದು ಕರೆ ನೀಡಿದರು.ಶ್ರೀ ಕೃಷ್ಣ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಋಗ್ವೇದಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕೃಷ್ಣ ಎಂದರೆ ಪ್ರೇಮ, ಆನಂದ, ಅಕರ್ಷಣೆ ಎಂಬುದಾಗಿದೆ. ಇಡೀ ವಿಶ್ವಕ್ಕೆ ಪುಣ್ಯಭೂಮಿ, ಕರ್ಮಭೂಮಿಯಾಗಿರುವ ಭಾರತದಲ್ಲಿ ಅನೇಕ ಮಹಾನ್ ಪುರುಷರು, ಋಷಿಗಳು, ಸಾಧುಸಂತರು, ದಾರ್ಶನಿಕರು, ತತ್ವಜ್ಞಾನಿಗಳು, ಆಚಾರ್ಯರು, ಚಿಂತಕರು ಕಾಲಕಾಲಕ್ಕೆ ತಮ್ಮದೇ ಆದ ಮೌಲ್ಯಯುತ ಸಂದೇಶಗಳನ್ನು ನೀಡಿ ಮಾನವಕುಲದ ಕಲ್ಯಾಣಕ್ಕೆ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಈ ಪೈಕಿ ಶ್ರೀಕೃಷ್ಣನ ಅವತಾರವು ಒಂದಾಗಿದೆ ಎಂದು ತಿಳಿಸಿದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಹಾಗೂ ನಗರಸಭೆ ಸದಸ್ಯೆ ಮಮತ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್ಕುಮಾರ್, ಸಮಾಜದ ಮುಖಂಡರಾದ ಬಾಲಸುಬ್ರಮಣ್ಯಂ ಮತ್ತಿತರರಿದ್ದರು.