ವಿಚಾರಗಳ ಮೂಲಕ ಸಮಾಜ ತಿದ್ದಿದ ಮಹಾತ್ಮರು; ಜನಾರ್ದನ

KannadaprabhaNewsNetwork |  
Published : Feb 22, 2024, 01:45 AM IST
ಿಿ | Kannada Prabha

ಸಾರಾಂಶ

12 ನೇ ಶತಮಾನದಲ್ಲಿ ಶಿವಶರಣರು, ವಚನಕಾರರು ವಚನ, ಸಾಹಿತ್ಯ,ವಿಚಾರಧಾರೆಗಳ ಮೂಲಕ ಸಮಾಜದ ಅಂಕಡೊಂಕುಗಳನ್ನು ತಿದ್ದಿ ಸಾಮಾಜಿಕ ಪರಿವರ್ತನೆಯ ಕೆಲಸ ಮಾಡಿದರು ಎಂದು ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಹೇಳಿದರು.

ಶೃಂಗೇರಿ: 12 ನೇ ಶತಮಾನದಲ್ಲಿ ಶಿವಶರಣರು, ವಚನಕಾರರು ವಚನ, ಸಾಹಿತ್ಯ,ವಿಚಾರಧಾರೆಗಳ ಮೂಲಕ ಸಮಾಜದ ಅಂಕಡೊಂಕುಗಳನ್ನು ತಿದ್ದಿ ಸಾಮಾಜಿಕ ಪರಿವರ್ತನೆಯ ಕೆಲಸ ಮಾಡಿದರು ಎಂದು ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ, ಸಂತ ಸೇವಾಲಾಲ್‌, ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿಯಲ್ಲಿ ಮಾತನಾಡಿದರು. ಹಿಂದುಳಿದ, ಶ್ರಮಿಕರ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಸಮಾಜದಲ್ಲಿನ ಮೇಲು ಕೀಳು, ಬಡವ ಬಲ್ಲಿದ, ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಜಾತಿ ಪದ್ಧತಿ, ಮೂಡನಂಬಿಕೆಗಳನ್ನು ವಿರೋಧಿಸಿದರು. ಜನರಲ್ಲಿ ಆದ್ಯಾತ್ಮಿಕತೆ, ಭಕ್ತಿ ಮೂಲಕ ಜಾಗೃತಿ ಮೂಡಿಸಿದರು. ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿ ಉಂಟುಮಾಡಿದರು. ಸುಮಾರು 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಿದರು. ಜೆಸಿ ತರಬೇತುದಾರ ಎನ್.ಕೆ.ವಿಜಯ್‌ ಕುಮಾರ್ ಉಪನ್ಯಾಸ ನೀಡಿ, ಮಹಾತ್ಮರ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಇಡೀ ಸಮಾಜಕ್ಕೆ ಅನ್ವಯವಾಗುವಂತಿರಬೇಕು. ಆದ್ಯಾತ್ಮಿಕ ಶ್ರದ್ದೆಯಿಂದ ಮನುಷ್ಯನೊಳಗಿನ ಅಹಂ ಭಾವ ನಾಶವಾಗುತ್ತದೆ. ಮಹಾತ್ಮರ ತತ್ವಾದರ್ಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತಹಸೀಲ್ದಾರ್ ಗೌರಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮಡಿವಾಳ ಸಂಘದ ಕೃಷ್ಣಪ್ಪವಾಸು, ಸಂದೇಶ್‌ ಮತ್ತಿತರರು ಇದ್ದರು.21 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ,ಸಂತಸೇವಾಲಾಲ್‌,ಛತ್ರಪತಿ ಶಿವಾಜಿ,ಸರ್ವಜ್ಞ ಜಯಂತಿ ಕಾರ್ಯಕ್ರವನ್ನು ತಹಸಿಲ್ದಾರ್‌ ಗೌರಮ್ಮ ಉದ್ಘಾಟಿಸಿದರು.ವಿಜಯ್್‌ ಕುಮಾರ್‌,ಜನಾರ್ದನ್‌ .ಕೃಷ್ಣಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜೃಂಭಣೆಯ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ
ಸನಾತನ ಪರೀಕ್ಷೆಗೊಳಗಾದ್ರೂ ಅಳಿಸಲಸಾಧ್ಯ: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್