ಮಹಾವೀರರ ತತ್ವಗಳು ಸಮಾಜಕ್ಕೆ ದಾರಿ ದೀಪ: ಶಾಸಕ ವಿಶ್ವಾಸ ವೈದ್ಯ

KannadaprabhaNewsNetwork |  
Published : Mar 31, 2026, 03:15 AM IST
ಫೋಟೋ ಶೀರ್ಷಿಕೆ: ೩೦ಎಸ್‌ಡಿಟಿ೧/೨ಸವದತ್ತಿಯ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಭಗವಾನ ಮಹಾವೀರರ ಜಯಂತಿ ಅಂಗವಾಗಿ ಶಾಸಕ ವಿಶ್ವಾಸ ವೈದ್ಯ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿದರು. ಚಂದ್ರಣ್ಣ ಶಾಮರಾಯನವರ, ತಹಸಿಲ್ದಾರ ಎಮ್.ಎನ್.ಹೆಗ್ಗಣ್ಣವರ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸವದತ್ತಿಯ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆದ ಭಗವಾನ ಮಹಾವೀರರ ಜಯಂತಿ ಅಂಗವಾಗಿ ಶಾಸಕ ವಿಶ್ವಾಸ ವೈದ್ಯ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಿದರು.

ಸವದತ್ತಿ: ಅಹಿಂಸೆಯೇ ಪರಮೋ ಧರ್ಮ ಎಂಬ ಸಂದೇಶದ ಮೂಲಕ ಜಗತ್ತಿಗೆ ಶಾಂತಿಯ ಮೌಲ್ಯಗಳನ್ನು ಬೋಧಿಸಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹಿಂಸೆ ಮತ್ತು ಶಾಂತಿಯ ಹರಿಕಾರ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಹಿಂಸಾತ್ಮಕವಾದ ಚಟುವಟಿಕೆಗಳು ಸಮಾಜಕ್ಕೆ ಮಾರಕವಾಗಿದ್ದು, ಅಹಿಂಸಾ ತತ್ವದಡಿ ಪ್ರತಿಯೊಬ್ಬರು ಜೀವನ ಸಾಗಿಸುವ ನಿಟ್ಟಿನಲ್ಲಿ ಮಹಾವೀರರ ಬೋಧನೆಗಳನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.

ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜದ ಮುಖಂಡರಾದ ಚಂದ್ರಣ್ಣ ಶಾಮರಾಯನವರ, ಮದನಲಾಲ ಚೋಪ್ರಾ, ಸುರೇಶ ಚೋಪ್ರಾ, ಬಮ್ಮು ಶೇಠ, ಮದನ ತಾಥೇಡ, ಬೋಪಾಲ ಬಾಂಡೇಕರ, ಗ್ರೇಡ್-೨ ತಹಸಿಲ್ದಾರ ಎಂ.ಎನ್.ಮಠದ, ಸಿಡಿಪಿಒ ಅಮೃತ ಸಾಣಿಕೊಪ್ಪ, ಬಿಇಒ ಎ.ಎ.ಖಾಜಿ, ಶಿರಸ್ತೆದಾರ ಶಶಿರಾಜ ವನಕಿ, ಶಾಂತಿಲಾಲ ಜೈನ್, ಎಫ್.ವೈ.ಗಾಜಿ, ಎಂ.ಎನ್.ಮುತ್ತಿನ, ಬಸವರಾಜ ಅರಮನೆ, ಮಂಜುನಾಥ ಪಾಚಂಗಿ, ಪ್ರವೀಣ ರಾಮಪ್ಪನವರ, ಬಸವರಾಜ ಗುರಣ್ಣವರ, ಹಾಗೂ ಸಮಾಜ ಬಾಂಧವರು ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗಳಿಯಲ್ಲಿ ಮಹಾವೀರ ಜಯಂತಿ ಆಚರಣೆ
ಮನುಕುಲ ಉದ್ದಾರಿಸಿದ ಮಹಾನ್ ಚೇತನ: ಶಿವಲೀಲಾ ಸದಾಶಿವ ಬುಟಾಳಿ