ಕೊಟ್ಟೂರು: ಯುದ್ಧ ಭೀತಿಯಲ್ಲಿರುವ ಜಗತ್ತಿಗೆ ಭಗವಾನ್ ಮಹಾವೀರರ ಅಂಹಿಸೆ ಮತ್ತು ಶಾಂತಿಯ ಸಂದೇಶ ಪಾಲನೆ ಬಹುಮುಖ್ಯವಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.
ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ, ಜೀವಿಸುವ ಹಕ್ಕಿದೆ. ಅಹಿಂಸೆ ಮಾರ್ಗದ ಮೂಲಕ ನೋವು ನೀಡದೆ ಮಾನವ ಹೇಗೆ ಜೀವಿಸಬೇಕೆನ್ನುವ ಮಾರ್ಗದರ್ಶವನ್ನು ನೀಡಿದ ಮಹಾನ್ ಸಂತರು ಮಹಾವೀರರು.
ವಿಶೇಷ ಉಪನ್ಯಾಸ ನೀಡಿದ ಕೊಟ್ರೇಶ್ ಶಿಕ್ಷಕರು ಮನುಷ್ಯನ ಜೀವನಕ್ಕೆ ವೈಭೋಗ, ಸಂಪತ್ತು ಬೇಕಿಲ್ಲ. ಅದಿಲ್ಲದಿದ್ದರೂ ಸಂತೋಷವಾಗಿ ಬದುಕಬಹುದು ಎಂದು ಸಂದೇಶ ನೀಡಿದರು. ಅವರು ವೈಭೋಗದ ರಾಜ ಮನೆತನದಲ್ಲಿ ಜನಿಸಿದರೂ ಎಲ್ಲವನ್ನೂ ತಿರಸ್ಕರಿಸಿ 12 ವರ್ಷಗಳ ತಪಸ್ಸನ್ನಾಚರಿಸಿ ಜ್ಞಾನ ಸಂಪಾದಿಸಿ ಅದನ್ನು ಸಮಾಜಕ್ಕೆ ಹಂಚಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಸುರೇಶ ಚಿನಮನಹಳ್ಳಿ, ತಾಲೂಕು ದಿಗಂಬರ ಜೈನ ಸಂಘದ ಅಧ್ಯಕ್ಷ ಬ್ರಹ್ಮೇಶ್ ಕುಮಾರ, ನೌಕರರ ಸಂಘದ ಅಧ್ಯಕ್ಷ ಯೋಗೇಶ್ವರ ದಿನ್ನೆ, ಜೈನ ಸಮಾಜದ ಮುಖಂಡರಾದ ಕೊಟ್ರಪ್ಪ ಜೈನ್, ಕಿರಣ್ ಕುಮಾರ್ ಜೈನ್, ಪ್ರದೀಪ್ ಕುಮಾರ್ ಜೈನ್ ಮುಂತಾದವರು, ಕಂದಾಯ ನಿರೀಕ್ಷಕ ಶಿವಕುಮಾರ ಡಿ., ಭೂಮಾಪಕ ಭರಮಪ್ಪ, ಗ್ರಾಮ ಲೆಕ್ಕಿಗ ಹರೀಶ ಹಾಗೂ ಇತರರು ಹಾಜರಿದ್ದರು. ಸಿ.ಮ. ಗುರುಬಸವರಾಜ ನಿರೂಪಿಸಿದರು.
ಭಗವಾನ್ ಮಹಾವೀರರ ಜಯಂತಿ
ಮೆರವಣಿಗೆಯಲ್ಲಿ ತಹಸೀಲ್ದಾರ ಕೆ.ಎಂ. ಗುರುಬಸವರಾಜ್, ಸಂತೋಷ ಜೈನ್, ದಿಗಂಬರ ಜೈನ್ ಸಮಾಜ ಅಧ್ಯಕ್ಷ ಎಚ್.ಎಸ್. ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಅಮಿತ್ ಎಚ್.ಜೆ., ಅಜಿತ್ ಎಚ್.ಡಿ., ಎಚ್.ಡಿ. ರಾಯಪ್ಪ, ಪ್ರಸನ್ನ, ಡಾ. ಧರ್ಮಣ್ಣ, ಬಾಹುಬಲಿ ಪಾಟೀಲ್, ಪದ್ಮರಾಜ್ ಜೈನ್, ಎಂ. ಭರತೇಶ್, ರತ್ನಾಕರ್ ಜೈನ್, ರಾಜಣ್ಣ, ಜ್ವಾಲಾ ಮಾಲಿನಿ ಮಹಿಳಾ ಸಮಾಜದ ಎಚ್. ಸೀಮಾ, ಪದ್ಮಾವತಿ ಎಂ.ಡಿ., ಚಂಪರಾಯಪ್ಪ ಹಾಗೂ ಜೈನ್ ಸಮಾಜದ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.
ಗ್ರಾಮದ ಜೈನ ಬಸದಿಯಲ್ಲಿ ಬೆಳಗಿನಿಂದ ಮಹಾವೀರ ಸ್ವಾಮಿಗೆ ವಿವಿಧ ಪೂಜೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗುಂಜಾಳ್ ಭುಜಬಲಿ ಸಾಹುಕಾರ್, ಎಂ.ಶಾಂತರಾಜ, ಎಂ. ಜಯಣ್ಣ, ನೇಮಿರಾಜ ಸೇರಿದಂತೆ ಶ್ರಾವಕಿಯರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.