ಕನಕಗಿರಿ: ಗಿಡ, ಮರಗಳನ್ನು ಕಡಿದು ಸುಡುವುದು ಮೊಹರಂ ಹಬ್ಬವಲ್ಲ. ಸಸಿ ನೆಡುವ ಮೂಲಕ ವಾತಾವರಣವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವ ಹಬ್ಬವಾಗಬೇಕು ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.
ಇನ್ನೂ ಭಾರತದಲ್ಲಿ ಮೊಹರಂ ಭಾವೈಕ್ಯತೆಯ ಸಂಕೇತವಾಗಿದೆ. ಮನುಷ್ಯರಿಗೆ ನಿಸರ್ಗವೂ ಭಾವೈಕ್ಯತೆಯ ಸಂಗಮವಾಗಿದೆ. ಶುದ್ಧ ನೀರು, ಗಾಳಿ ಬೆಳಕು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದೇ ರೀತಿ ಮರವನ್ನು ದೇವರ ಹೆಸರಿನಲ್ಲಿ ಕಡಿದು ಸುಡುವ ಹಕ್ಕು ಯಾವ ನಾಗರಿಕತೆಗೆ ಇಲ್ಲ. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಆಚರಣೆಯ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಪರಿಸರಸ್ನೇಹಿ ಮೊಹರಂ ಆಚರಿಸಬೇಕು ಎಂದು ಹೇಳಿದರು.
ಮುಖಂಡರಾದ ವಾಗೀಶ ಹಿರೇಮಠ, ಮಹಾಂತೇಶ ಸಜ್ಜನ, ಜಯಪ್ರಕಾಶರೆಡ್ಡಿ ಮಾದಿನಾಳ ಮಾತನಾಡಿ, ಪರಿಸರ ಉಳಿಸುವಂತೆ ಮನವಿ ಮಾಡಿದರು.ವನಪಾಲಕ ಶಿವಕುಮಾರ ವಾಲಿ, ಪಪಂ ಸದಸ್ಯರಾದ ಸಂಗಪ್ಪ ಸಜ್ಜನ, ಅಭಿಷೇಕ ಕಲುಬಾಗಿಲಮಠ, ಕಂಠಿರಂಗಪ್ಪ ನಾಯಕ, ಶೇಷಪ್ಪ ಪೂಜಾರ, ಪ್ರಮುಖರಾದ ಹುಸೇನಸಾಬ ಗೋರಳ್ಳಿ, ಖಾದರಸಾಬ್ ಗುಡಿಹಿಂದಲ, ಹನ್ಮಂತ ಬಸರಿಗಿಡ, ಮುನಿರಪಾಷ ಕಲ್ಮನಿ, ತಿಪ್ಪಣ್ಣ ಗುರಿಕಾರ ಇತರರು ಇದ್ದರು.