ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಫಸ್ಟ್ ಸರ್ಕಲ್ ಸಹಯೋಗದೊಂದಿಗೆ ಕೃಷಿ ಇಲಾಖೆ, ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದಿಂದ ಮುನ್ನಡೆ ಮಂಡ್ಯ ವಿಷನ್-೨೦೩೫ ಕಾರ್ಯಕ್ರಮದಡಿ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ಸಕ್ಕರೆ, ಬೆಲ್ಲ, ತೆಂಗು, ಭತ್ತ, ಹಾಲು ಇವು ಆಹಾರಕ್ಕೆ ಮುಖ್ಯವಾಗಿ ಬೇಕಾಗುವ ಉತ್ಪನ್ನಗಳು. ಉತ್ಪಾದನೆಗೆ ಬೇಕಾದ ನೀರಿನ ವ್ಯವಸ್ಥೆಯೂ ಉತ್ತಮವಾಗಿದೆ. ಆದರೆ, ಬೆಳೆದಂತಹ ಕಚ್ಚಾ ಆಹಾರೋತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಈ ಆಹಾರ ಉತ್ಪನ್ನಗಳನ್ನು ಸಂಸ್ಕರಿಸಿ ಬ್ರ್ಯಾಂಡ್ ರೂಪ ಕೊಟ್ಟು ಮೌಲ್ಯವರ್ಧನೆ ಮಾಡದಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ನಿಖರವಾಗಿ ಹೇಳಿದರು.ಮೂಲತಃ ಕೃಷಿ ಜಿಲ್ಲೆಯಾಗಿರುವ ಮಂಡ್ಯದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಕಷ್ಟಸಾಧ್ಯವಾದ ವಿಷಯ. ಅದಕ್ಕಾಗಿ ೨.೫೦ ಎಕರೆ ಪ್ರದೇಶದಲ್ಲಿ ಸಣ್ಣ ಸಣ್ಣ ಫುಡ್ ಇಂಡಸ್ಟ್ರಿಗಳು ಸ್ಥಾಪನೆಯಾಗಬೇಕು. ಅದಕ್ಕೆ ಪೂರಕವಾಗಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡಿಕೊಡುವ ಕೆಲಸ ಸರ್ಕಾರದಿಂದ ಸುಗಮವಾಗಿ ಆಗಬೇಕು. ಸರ್ಕಾರ ಇದಕ್ಕೆ ಅವಕಾಶ ನೀಡಿದರೆ ಫುಡ್ ಕ್ಲಸ್ಟರ್ಗಳು ಸ್ಥಾಪನೆಗೊಂಡ ಪ್ರಗತಿಯ ಕಡೆ ಮುಖ ಮಾಡಲಿವೆ. ಮುಂದಿನ ೧೦ ವರ್ಷಗಳಲ್ಲಿ ಫುಡ್ ಕ್ಲಸ್ಟರ್ ಆಗುವಂತೆ ಅಧಿವೇಶನದಲ್ಲಿ ಚರ್ಚೆಗಳಾಗಬೇಕು. ವಿಷಯಗಳು ಚರ್ಚೆಗಷ್ಟೇ ಸೀಮಿತವಾಗದೆ ಅದನ್ನು ಕಾರ್ಯರೂಪಕ್ಕೆ ತರುವಂತಹ ಬದ್ಧತೆ ಎಲ್ಲರಲ್ಲಿರಬೇಕು ಎಂದರು.
ಪಾರಂಪರಿಕವಾಗಿಯೂ ಮಂಡ್ಯ ಜಿಲ್ಲೆ ಸಮೃದ್ಧವಾಗಿದೆ. ಒಂದೊಂದು ತಾಲೂಕಿನಲ್ಲಿ ೧೦ರಿಂದ ೧೫ ಪಾರಂಪರಿಕ ತಾಣಗಳಿವೆ. ಅವುಗಳನ್ನು ಪ್ರವಾಸಿಗರನ್ನು ಸೆಳೆಯುವಂತೆ ಅಭಿವೃದ್ಧಿಪಡಿಸದಿರುವುದು ಅವು ಆಕರ್ಷಣೆ ಕಳೆದುಕೊಂಡಿವೆ. ಜಗತ್ತಿನ ೧೨೦ ದೇಶಗಳು ಪ್ರವಾಸೋದ್ಯಮದಿಂದಲೇ ಬೆಳವಣಿಗೆ ಕಾಣುತ್ತಿವೆ. ಹಾಗಾಗಿ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ರೈತ ಉತ್ಪಾದಕ ಕಂಪನಿ ತೆಂಗಿನ ಮೊಗ್ಗುಗಳಿಂದ ಮಾಡಿದ ಕಲ್ಪರಸ ಎಂಬ ಪಾನೀಯವನ್ನು ಗಣ್ಯರು ಬಿಡುಗಡೆ ಮಾಡಿದರು.