ಮಂಗಳೂರು: ತಡೆಗೋಡೆ ಕುಸಿದುಬಿದ್ದು ಸಂಬಂಧಿ ಬಾಲಕ ಮೃತ

KannadaprabhaNewsNetwork |  
Published : Jul 26, 2024, 01:45 AM IST
ತಡೆಗೋಡೆ ಮನೆ ಮೇಲೆ ಕುಸಿದುಬಿದ್ದಿರುವುದು | Kannada Prabha

ಸಾರಾಂಶ

ಘಟನೆಯಲ್ಲಿ ಸಂಬಂಧಿಕರ ಮನೆಗೆ ಅತಿಥಿಯಾಗಿ ಬಂದಿದ್ದ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ 17 ವರ್ಷದ ಬಾಲಕ ಶೈಲೇಶ್ ಸಾವಿಗೀಡಾದ ನತದೃಷ್ಟ ಬಾಲಕ.

ಕನ್ನಡಪ್ರಭ ವಾರ್ತೆ ಮಂಗಳೂರು

ಸುರತ್ಕಲ್‌ ಹೊರವಲಯದ ಜೋಕಟ್ಟೆ ಎಂಬಲ್ಲಿ ಭಾರೀ ಗಾಳಿ ಮಳೆಗೆ ಮನೆಯ ಮೇಲೆ ತಡೆಗೋಡೆ ಕುಸಿದು ಅತಿಥಿಯಾಗಿ ಬಂದಿದ್ದ 17 ವರ್ಷದ ಬಾಲಕ ಸಾವಿಗೀಡಾದ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಸಂಬಂಧಿಕರ ಮನೆಗೆ ಅತಿಥಿಯಾಗಿ ಬಂದಿದ್ದ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ 17 ವರ್ಷದ ಬಾಲಕ ಶೈಲೇಶ್ ಸಾವಿಗೀಡಾದ ನತದೃಷ್ಟ ಬಾಲಕ.

ಬುಧವಾರ ತಡರಾತ್ರಿ ಭಾರೀ ಮಳೆಯಾಗುತ್ತಿದ್ದಾಗ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದು ಮನೆ ನೆಲಸಮವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಹೆಂಚು ಬಿದ್ದಿದ್ದು ಈ ವೇಳೆ ಶೈಲೇಶ್ ತೀವ್ರ ಗಾಯಗೊಂಡಿದ್ದ. ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದು ಆಸ್ಪತ್ರೆಗೆ ಒಯ್ದಿದ್ದಾರೆ.

ಮನೆಯಲ್ಲಿದ್ದ ಸಂಜೀವ (55), ಸುರೇಶ್ (20), ಸವಿತಾ (19), ಒಂದು ವರ್ಷದ ಮಗು ಸಖಿ ಅವರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ರಕ್ಷಣೆ ಮಾಡಲಾಗಿದೆ.

ಮಧ್ಯರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಶೈಲೇಶ್ ಸಂಬಂಧಿಕ ಹುಡುಗನಾಗಿದ್ದು ಈ ಮನೆಗೆ ರಾತ್ರಿ ಕಳೆಯಲು ಬಂದು ದುರಂತ ಸಾವಿಗೀಡಾಗಿದ್ದಾನೆ. ಈ ಬಗ್ಗೆ ಬಜಪೆ ಠಾಣೆಗೆ ದೂರು ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಪ್ರಾಕೃತಿಕ ಅವಘಡಕ್ಕೆ ಕಳೆದ ಎರಡು ತಿಂಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ