ಸಾಮೂಹಿಕ ವಿವಾಹ ಬಡವರಿಗೆ ವರದಾನ: ಶಿವಶಾಂತವೀರ ಶರಣರು

KannadaprabhaNewsNetwork |  
Published : May 05, 2026, 02:45 AM IST
ಕಾರ್ಯಕ್ರಮದಲ್ಲಿ ಬಳಗಾನೂರಿನ ಶಿವಶಾಂತವೀರ ಶರಣರು ಮಾತನಾಡಿದರು. | Kannada Prabha

ಸಾರಾಂಶ

ಜಾತ್ರೆಗಳು ಬದುಕಿಗೆ ಅರ್ಥ ಮತ್ತು ವೈಭವ ತರುತ್ತವೆ. ಮಾನವನ ಜನ್ಮದ ಸಾರ್ಥಕತೆಗೆ ಆಧ್ಯಾತ್ಮಿಕ ಕಾರ್ಯ, ದೈವಿಕ ಸಾಮಾಜಿಕ ಕಾರ್ಯಗಳು ಸಹಾಯಕವಾಗುತ್ತವೆ.

ರೋಣ: ಸಾಮೂಹಿಕ ವಿವಾಹಗಳು ಬಡವರ ಕಣ್ಣೀರು ಒರೆಸಲು ಸಹಾಯಕವಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತವೆ ಎಂದು ಬಳಗಾನೂರಿನ ಶಿವಶಾಂತವೀರ ಶರಣರು ತಿಳಿಸಿದರು.

ತಾಲೂಕಿನ ಬೆಳವಣಿಕಿ ಗ್ರಾಮದ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹ, ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಜಾತ್ರೆಗಳು ಬದುಕಿಗೆ ಅರ್ಥ ಮತ್ತು ವೈಭವ ತರುತ್ತವೆ. ಮಾನವನ ಜನ್ಮದ ಸಾರ್ಥಕತೆಗೆ ಆಧ್ಯಾತ್ಮಿಕ ಕಾರ್ಯ, ದೈವಿಕ ಸಾಮಾಜಿಕ ಕಾರ್ಯಗಳು ಸಹಾಯಕವಾಗುತ್ತವೆ. ಹೂವಿನಂತೆ ಮನುಷ್ಯ ಜೀವಿತಾವಧಿಯಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕಿಲ್ಲಾತೋರಗಲ್ಲ ಚನ್ನಮಲ್ಲಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬೆಳವಣಕಿಯ ವಿದ್ಯಾರ್ಥಿನಿಯರು ವಾರ್ಷಿಕ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸುವ ಮೂಲಕ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಇಂದಿನದು ಕಂಪ್ಯೂಟರ್ ಹಾಗೂ ಪೈಪೋಟಿಯ ಯುಗವಾಗಿದ್ದು, ವಿದ್ಯಾರ್ಥಿಗಳು ಒಳ್ಳೆಯ ಅಂಕ ಸಂಪಾದಿಸಿ ಜೀವನ ರೂಪಿಸಿಕೊಳ್ಳಬೇಕೆಂದರು.

ಈ ವೇಳೆ 5 ಜೊತೆ ಸಾಮೂಹಿಕ ವಿವಾಹಗಳು ಜರುಗಿದವು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ವಿ.ಎನ್. ಮೇಟಿ, ಆನಂದಯ್ಯ ಭೂಪಳಾಪೂರಮಠ, ಬಸವರಾಜ ಕಟಗೇರಿ, ಮಲ್ಲಿಕಾರ್ಜುನ ಹಿರೇಮಠ ಮುಂತಾದವರು ಇದ್ದರು. ಶಿವಕುಮಾರ ಹಾಲಭಾವಿ ಸ್ವಾಗತಿಸಿದರು. ಮಲ್ಲಣ್ಣ ದಾದ್ಮಿ ವಂದಿಸಿದರು. ಸಂಕಪ್ಪ ಕುರಹಟ್ಟಿ ವಂದಿಸಿದರು. 421 ಬೆಳೆವಿಮೆ ಪ್ರಸ್ತಾವನೆ ತಿರಸ್ಕೃತ

ನರಗುಂದ: ಮುಂಗಾರು ಮತ್ತು ಹಿಂಗಾರು ಹಂಗಾಮಿನ 2024- 25ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆ ಆಗದೆ ಇರುವ ತಾಲೂಕಿನ ಮುಂಗಾರು ಹಂಗಾಮಿನ 233, ಹಿಂಗಾರು ಹಂಗಾಮಿನ 188 ಸೇರಿ ಒಟ್ಟು 421 ಬೆಳೆವಿಮೆ ಪ್ರಸ್ತಾವನೆಗಳು ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ.ಗ್ರಾಮವಾರು ತಿರಸ್ಕೃತಗೊಂಡಿರುವ ಪ್ರಸ್ತಾವನೆಗಳ ಮಾಹಿತಿಯನ್ನು ನರಗುಂದ ಹಾಗೂ ತಾಲೂಕಿನ ಕೊಣ್ಣೂರಿನ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ರೈತರು ಆಕ್ಷೇಪಣೆಗಳಿದ್ದರೆ ಮೇ 12ರೊಳಗಾಗಿ ಸಲ್ಲಿಸಬೇಕು ಎಂದು ತಾಲೂಕು ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಸಾಧನೆಗೆ ಸುನಿಲ್ ಕುಮಾರ್ ಪ್ರಶಂಸೆ
ಸುಂಟಿಕೊಪ್ಪದಲ್ಲಿ ಬಿಜೆಪಿ ವಿಜಯೋತ್ಸವ