ಕೊಪ್ಪಳ: ಸರ್ಕಾರದ ವಿದ್ಯುತ್ ಖಾಸಗೀಕರಣ ನಡೆಯಿಂದ ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಚಿಲವಾಡಗಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಹಟಕ್ಕೆ ಬಿದ್ದು ಸರ್ಕಾರ ಖಾಸಗೀಕರಣ ಹಿಂಪಡೆಯದೇ ಇದ್ದಲ್ಲಿ ಇಡೀ ರಾಜ್ಯದ ರೈತ ಸಂಘಟನೆಗಳು ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
25 ವರ್ಷಗಳ ಹಿಂದೆ ತಾಲೂಕಿನ ಹಿರೇಬಗನಾಳದಲ್ಲಿ ಮೀಟರ್ ಕೂಡಿಸುವ ಸಂದರ್ಭದಲ್ಲಿ ಇಡಿ ರಾಜ್ಯಾದ್ಯಂತ ಹೋರಾಟ ಮಾಡಿ ಕೊಪ್ಪಳ ಜಿಲ್ಲೆಯಿಂದ ಏನು ಉತ್ತರ ಕೊಟ್ಟಿದ್ದೇವೋ ಹಾಗೇ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ರಾಜ್ಯ ರೈತ ಸಂಘ ಹಸಿರು ಸೇನೆ ಹೋರಾಟದ ಮೂಲಕ ಸರಕಾರವನ್ನು ಎಚ್ಚರಿಸುತ್ತೇವೆ ಎಂದರು.ಖಾಸಗೀಕರಣ ಮಾಡುವ ನಿರ್ಧಾರ ತೆಗೆದುಕೊಂಡರ ಈ ಹಿಂದೆ ನರಗುಂದ ಬಂಡಾಯ ಆಗುವ ಸಂದರ್ಭದಲ್ಲಿ ಗುಂಡೂರಾವ್ ಸರಕಾರ ಹೇಗೆ ಬಿತ್ತೋ ಹಾಗೆಯೇ ಈ ಸರ್ಕಾರವೂ ಬೀಳುತ್ತದೆ ಎಂದು ಮತ್ತೊಮ್ಮೆ ಎಚ್ಚರಿಸಿದ ಅವರು ರಾಜ್ಯದ ರೈತರು ಸಿಡಿದೇಳುವ ಮುನ್ನ ಸರಕಾರ ಜಾಗೃತವಾಗಬೇಕು ಎಂದರು.
ಕಿನ್ನಾಳ ಗ್ರಾಮದಿಂದ ಸುಮಾರು 25 ಟ್ರ್ಯಾಕ್ಟರ್ ಮೂಲಕ ನೂರಾರು ರೈತರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಸುಕುಮುನಿ ಬಿ., ಕಿನ್ನಾಳ ಗ್ರಾಮ ಘಟಕದ ಅಧ್ಯಕ್ಷ ಪರಶುರಾಮ ಬಿಸರಳ್ಳಿ, ಉಪಾಧ್ಯಕ್ಷರಾದ ಶಂಕ್ರಪ್ಪ ಚೀಲವಾಡಗಿ, ನಾಗರಾಜ ಮೇಟಿ, ಆನಂದ ಆರೇರ್, ಶರಣಪ್ಪ ಬುರಡಿ, ಪಂಪಾಪತಿ ಟಂಕಸಾಲಿ, ಚಿನ್ನಪ್ಪ ಸಜ್ಜನ್, ಶಿವು ಸಜ್ಜನ್, ಇನ್ನಿತರರು ಇದ್ದರು.