ಸರ್ವ ಪ್ರಕಾರ ಸಾಹಿತ್ಯಗಳು ನಿರಂತರ ಹರಿಯಲಿ

KannadaprabhaNewsNetwork |  
Published : Aug 05, 2025, 12:30 AM IST
ಹರಿಹರದ ಪ್ರಗತಿಪರ ಬರಹಗಾರರ ಒಕ್ಕೂಟ ಚಿಂತನ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಬಿರ್ಲಾಕಲ್ಯಾಣ ಮಂಟಪದಲ್ಲಿ ಒಕ್ಕೂಟದ ೩೦ನೇ ವಾಷಿಕೋತ್ಸವ ಮತ್ತು ಜಿಲ್ಲಾಮಟ್ಟದ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕಸಪಾ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.  ಸುಬ್ರಹ್ಮಣ್ಯ ನಾಡಿಗೇರ್, ಜಿ.ಕೆ.ಕುಲಕರ್ಣಿ, ಮಂಜುನಾಥ ಅಗಡಿ, ಹಿ.ಗೂ.ದುಂಡ್ಯಪ್ಪ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸರ್ವ ಪ್ರಕಾರಗಳ ಸಾಹಿತ್ಯ ರೂಪಗಳು ಕನ್ನಡದ ಸಾಹಿತ್ಯ ವೇದಿಕೆಗಳಲ್ಲಿ ನಿರಂತರ ಹರಿಯುತ್ತಿರಲಿ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

- ಪ್ರಗತಿಪರ ಬರಹಗಾರರ ಒಕ್ಕೂಟ ಕಾರ್ಯಕ್ರಮದಲ್ಲಿ ವಾಮದೇವಪ್ಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಸರ್ವ ಪ್ರಕಾರಗಳ ಸಾಹಿತ್ಯ ರೂಪಗಳು ಕನ್ನಡದ ಸಾಹಿತ್ಯ ವೇದಿಕೆಗಳಲ್ಲಿ ನಿರಂತರ ಹರಿಯುತ್ತಿರಲಿ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಚಿಂತನ ಪ್ರತಿಷ್ಠಾನ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಕ್ಕೂಟದ ೩೦ನೇ ವಾರ್ಷಿಕೋತ್ಸವ ಮತ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಉತ್ಪನನ, ಸಮಯಪ್ರಜ್ಞೆ, ಶಿಷ್ಟಚಾರ, ನಿರಂತರ ಗ್ರಹಿಕೆ ಸಂವಾದಗಳಿಗೆ ವಿಶೇಷ ಸ್ಥಾನವಿದೆ. ಅವುಗಳಲ್ಲಿ ಪರಿಣತರದಲ್ಲಿ ಪರಿಪೂರ್ಣ ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದರು.

ದಾವಣಗೆರೆ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಮಾತನಾಡಿ, ಹಿರಿಯರಾದ ದಿ. ನಾಗಮ್ಮ ಕೇಶವಮೂರ್ತಿ, ಟಿ.ಗಿರಿಜಾ ಹಾಗೂ ಲಲಿತಮ್ಮ ಡಾ.ಚಂದ್ರಶೇಖರ್ ಸಾಹಿತ್ಯದಲ್ಲಿ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಯುವ ಕವಿಗಳು ಕವಯತ್ರಿಯರು ಆಸಕ್ತಿಯಿಂದ ಸಾಹಿತ್ಯ ಕೃಷಿ ಮಾಡಿ, ಸಾಧನೆ ಮಾಡುವಂತೆ ಕರೆ ನೀಡಿದರು.

ದಾವಣಗೆರೆ ಜಿಲ್ಲಾ ಕಲೇಸಂ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಮಾತನಾಡಿ, ನಾಗಮ್ಮ ಕೇಶವಮೂರ್ತಿ, ಟಿ.ಗಿರಿಜಾ, ಲಲಿತಮ್ಮನವರು ಸ್ತ್ರೀಯರಿಗೆ ಶಕ್ತಿ ತುಂಬಿದ ಮೂರು ರತ್ನಗಳು. ಅವರು ನೀಡಿದ ಮಾರ್ಗದರ್ಶನ ಪಾಲಿಸುವುದು ನಮಗೆಲ್ಲಾ ಅಗತ್ಯ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ ಮಾತನಾಡಿದರು. ಹಿರಿಯ ಸಾಹಿತಿ ಹಿ.ಗೂ. ದುಂಡ್ಯಪ್ಪನವರಿಗೆ ಲಲಿತಶ್ರೀ ೨೦೨೫ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿ.ಕೆ.ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ೨೬ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ಎ.ಬಿ.ಮಂಜಮ್ಮ, ಬಿ.ನಾಗರತ್ಮ, ಜಯರಾಮನ್, ಸೌಮ್ಯ, ಚಂದನ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ತುಂಗಾಭದ್ರಾ ನದಿಗೆ ಒಕ್ಕೂಟ ಸದಸ್ಯರು ಬಾಗಿನ ಅರ್ಪಿಸಿದರು.

- - -

-04HRR02, 03:

ಕಾರ್ಯಕ್ರಮವನ್ನು ಜಿಲ್ಲಾ ಕಸಪಾ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ