ಕನ್ನಡಪ್ರಭ ವಾರ್ತೆ ದಾವಣಗೆರೆ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಎಂಬಿಎ ಕೋರ್ಸ್ಗಳು ಭವಿಷ್ಯದ ಉದ್ಯಮ ನಾಯಕರಿಗೆ ಕಸ್ಟಮೈಸ್ ಮಾಡಿದ ಪರಿಹಾರಗಳನ್ನು ಒದಗಿಸುತ್ತವೆ. ನಾವು ಇಂದಿನ ವ್ಯವಹಾರ ವೃತ್ತಿಪರರ ವಿಭಿನ್ನ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೊಸ ಎಂಬಿಎ ಕಾರ್ಯಕ್ರಮಗಳ ಸರಣಿ ಪರಿಚಯಿಸುತ್ತಿದ್ದೇವೆ. ಈ ಕೋರ್ಸ್ಗಳು ನಿತ್ಯ ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತವೆ. ವಿವಿಧ ವೃತ್ತಿ ಹಂತಗಳು ಮತ್ತು ಆಶಯಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ನಾಲ್ಕು ವಿಶಿಷ್ಟ ಮಾದರಿಗಳಲ್ಲಿ ಈ ಕೋರ್ಸ್ಗಳನ್ನು ನೀಡಲಾಗುತ್ತದೆ. ಸಾಮಾನ್ಯ ಎಂಬಿಎ, ವೃತ್ತಿಪರ ಎಂಬಿಎ, ಉನ್ನತ ಎಂಬಿಎ, ಅಂತರ ರಾಷ್ಟ್ರೀಯ ಎಂಬಿಎ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಜಾಗತಿಕ ವ್ಯಾಪಾರದ ಪ್ರಕ್ರಿಯೆಗಳು, ವೈವಿಧ್ಯಮಯ ಸಂಸ್ಕೃತಿಯ ದೃಷ್ಠಿಕೋನಗಳು, ಮತ್ತು ಜಾಗತಿಕ ಮಾರುಕಟ್ಟೆಯ ಗತಿಗಳ ಬಗ್ಗೆ ತಿಳಿದುಕೊಳ್ಳಲು ಸಂವಾದಾತ್ಮಕ ಅಧಿವೇಶನಗಳು, ಕಂಪನಿ ಭೇಟಿಗಳು, ಮತ್ತು ಉದ್ಯಮದ ಪ್ರಮುಖರೊಂದಿಗೆ ನೆಟ್ವರ್ಕಿಂಗ್ ಅವಕಾಶಗಳನ್ನು ಪಡೆಯುತ್ತಾರೆ. ಈ ಕೋರ್ಸ್ ಅಂತರ ರಾಷ್ಟ್ರೀಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಿ, ಬಹುಜಾತಿ ಕಂಪನಿಗಳು, ಜಾಗತಿಕ ಸಮಾಲೋಚನೆ ಸಂಸ್ಥೆಗಳು, ಅಂತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ನಾಯಕತ್ವದ ಸ್ಥಾನಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಎಂ ವಿ.ವಿ.ಯ ಡಾ. ಎಸ್.ಶಿವಕುಮಾರ್, ಡಾ.ಗಿರೀಶ್ ಬೋಳಕಟ್ಟಿ, ಟಿ.ಆರ್. ತೇಜಸ್ವಿ ಕಟ್ಟಿಮನಿ, ಡಾ. ಶ್ರೀಶೈಲ ಪಿ.ವಿಜಯಪುರ, ವಿನಯ್ ಇದ್ದರು.
- - - -5ಕೆಡಿವಿಜಿ38:ದಾವಣಗೆರೆಯ ಜಿಎಂ ವಿ.ವಿ.ಯಲ್ಲಿ ಹೊಸ ಕೋರ್ಸ್ ಆರಂಭಿಸಿರುವ ಕುರಿತು ಡಾ. ಪಿ.ಎಸ್. ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.