ಗವಿಮಠಕ್ಕೆ ಮೇಘಾಲಯ ರಾಜ್ಯಪಾಲ ವಿಜಯಶಂಕರ ಭೇಟಿ

KannadaprabhaNewsNetwork |  
Published : Feb 23, 2025, 12:30 AM IST
22ಕೆಪಿಎಲ್21 ಕೊಪ್ಪಳ ಗವಿಮಠದಲ್ಲಿ ಮೆಘಾಲಯ ರಾಜ್ಯಪಾಲರಾದ ವಿಜಯಶಂಕರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಾತ್ರೆಯಲ್ಲಿ ತೆಗೆದ ಫೋಟೋಗಳನ್ನು ನೋಡಿದ ರಾಜ್ಯಪಾಲರು, ಮುಂಬರುವ ವರ್ಷ ಜಾತ್ರೆಗೆ ಆಗಮಿಸುತ್ತೇನೆ. ನಾನು ಇರುವಾಗಲೇ ಮೇಘಾಲಯಕ್ಕೆ ಒಮ್ಮೆ ಬನ್ನಿ ಎಂದು ಆಹ್ವಾನ ಸಹ ನೀಡಿದರು.

ಕೊಪ್ಪಳ:

ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಮೇಘಾಲಯ ರಾಜ್ಯಪಾಲ ಚಂದ್ರಶೇಖರ ಎಚ್. ವಿಜಯಶಂಕರ ಶನಿವಾರ ಭೇಟಿ ನೀಡಿ, ಗವಿ ಮಠದ ಗದ್ದುಗೆಯ ದರ್ಶನ ಪಡೆದರು. ಬಳಿಕ ಗವಿಸಿದ್ಧೇಶ್ವರ ಶ್ರೀಗಳ ಆಶೀರ್ವಾದ ಪಡೆದ ಪ್ರಸಾದ ಸ್ವೀಕರಿಸಿದರು.

ಈ ವೇಳೆ ಪರಸ್ಪರ ಚರ್ಚೆ ನಡೆಸಿದರು. ಮೇಘಾಲಯದಲ್ಲಿ ರಾಸಾಯನಿಕ ಮುಕ್ತ ಆಹಾರ ಇರುವ ಕುರಿತು ಹೇಳಿದ ರಾಜ್ಯಪಾಲರು ಶ್ರೀಗಳಿಗೆ ಅಲ್ಲಿಂದ ತಂದಿದ್ದ ಆಹಾರ ಸಾಮಗ್ರಿ ಸಹ ನೀಡಿ, ವಿವರಣೆ ನೀಡಿದರು.

ಜಾತ್ರೆಯಲ್ಲಿ ತೆಗೆದ ಫೋಟೋಗಳನ್ನು ನೋಡಿದ ರಾಜ್ಯಪಾಲರು, ಮುಂಬರುವ ವರ್ಷ ಜಾತ್ರೆಗೆ ಆಗಮಿಸುತ್ತೇನೆ. ನಾನು ಇರುವಾಗಲೇ ಮೇಘಾಲಯಕ್ಕೆ ಒಮ್ಮೆ ಬನ್ನಿ ಎಂದು ಆಹ್ವಾನ ಸಹ ನೀಡಿದರು. ಆಗ ಶ್ರೀಗಳು, ನಾನು ಸಹ ಆ ಭಾಗವನ್ನು ನೋಡುವ ಬಯಕೆ ಇದ್ದು ಖಂಡಿತ ಬರುವೇ ಎಂದು ತಿಳಿಸಿದರು. ಚರ್ಚೆ ನಡೆಯುವಾಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಲದ ರಾಜಕೀಯ ಮೆಲುಕು ಹಾಕಿದರು.

ಈ ವೇಳೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಡಾ. ಬಸವರಾಜ, ಸಿ.ವಿ. ಚಂದ್ರಶೇಖರ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್‌ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ