ವಾಟೆಹೊಳೆ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಸಿಮೆಂಟ್ ಮಂಜು

KannadaprabhaNewsNetwork |  
Published : Jul 03, 2025, 11:47 PM ISTUpdated : Jul 03, 2025, 11:48 PM IST
3ಎಚ್ಎಸ್ಎನ್9 :  | Kannada Prabha

ಸಾರಾಂಶ

ಆಲೂರಿನ ವಾಟೆಹೊಳೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸುಮಾರು ಹದಿನೆಂಟು ಸಾವಿರ ಹೆಕ್ಟರ್ ಭೂ ಪ್ರದೇಶವಿದ್ದು ಎಲ್ಲರೂ ಮಧ್ಯಮವರ್ಗದ ರೈತಾಪಿಜನರು ಈ ವಾಟೆಹೊಳೆ ಜಲಾಶಯದ ನೀರನ್ನು ಬೇಸಿಗೆ ಕಾಲದಲ್ಲಿ ಅವಲಂಬಿಸಿದ್ದು ಕೃಷಿ ಮಾಡಲು ಅನುಕೂಲವಾಗುತ್ತದೆ. ಬೇಸರದ ವಿಷಯವೆಂದರೆ ವಾಟೆಹೊಳೆ ನಾಲೆಯು ಹದಗೆಟ್ಟು ಅವೈಜ್ಞಾನಿಕವಾಗಿರುವುದು ರೈತರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದರು. ಜನರ ಜೀವನಾಡಿಯಾಗಿರುವ ವಾಟೆಹೊಳೆ ಜಲಾಶಯ ಮಳೆಗಾಲಕ್ಕೂ ಮುಂಚೆಯೇ ಜೂನ್ ತಿಂಗಳಲ್ಲೆ ಉತ್ತಮ ಮಳೆಯಾಗಿ ಭರ್ತಿಯಾಗಿದೆ ಎಂದರು.

ಹಾಸನ: ಜನರ ಜೀವನಾಡಿಯಾಗಿರುವ ವಾಟೆಹೊಳೆ ಜಲಾಶಯ ಮಳೆಗಾಲಕ್ಕೂ ಮುಂಚೆಯೇ ಜೂನ್ ತಿಂಗಳಲ್ಲೆ ಉತ್ತಮ ಮಳೆಯಾಗಿ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ತಂದಿದೆ ಎಂದು ಶಾಸಕರಾದ ಸಿಮೆಂಟ್ ಮಂಜು ತಿಳಿಸಿದ್ದಾರೆ.

ಆಲೂರಿನ ವಾಟೆಹೊಳೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸುಮಾರು ಹದಿನೆಂಟು ಸಾವಿರ ಹೆಕ್ಟರ್ ಭೂ ಪ್ರದೇಶವಿದ್ದು ಎಲ್ಲರೂ ಮಧ್ಯಮವರ್ಗದ ರೈತಾಪಿಜನರು ಈ ವಾಟೆಹೊಳೆ ಜಲಾಶಯದ ನೀರನ್ನು ಬೇಸಿಗೆ ಕಾಲದಲ್ಲಿ ಅವಲಂಬಿಸಿದ್ದು ಕೃಷಿ ಮಾಡಲು ಅನುಕೂಲವಾಗುತ್ತದೆ. ಬೇಸರದ ವಿಷಯವೆಂದರೆ ವಾಟೆಹೊಳೆ ನಾಲೆಯು ಹದಗೆಟ್ಟು ಅವೈಜ್ಞಾನಿಕವಾಗಿರುವುದು ರೈತರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದರು.

ನಾಲೆಯು ಅವೈಜ್ಞಾನಿಕವಾಗಿರುವ ಕಾರಣದಿಂದ ನೀರನ್ನು ಬಿಟ್ಟ ಕೂಡಲೇ ನಾಲೆಯಲ್ಲಿ ಹರಿಯದೆ ಎಲ್ಲೆಂದರಲ್ಲಿ ನೀರು ಪೋಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅದನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!