ಬಾಲ್ ಬ್ಯಾಡ್ಮಿಂಟನ್ ಕ್ರೀಡಾ ಪಟುಗಳಿಗೆ ಮೀಸಲು ಕಲ್ಪಿಸಲು ಶಾಸಕ ಕೆ.ಎನ್.ರಾಜಣ್ಣ ಭರವಸೆ

KannadaprabhaNewsNetwork |  
Published : Sep 21, 2026, 01:15 AM IST
ಮಧುಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾ ಕೂಟವನ್ನು ಶಾಸಕ ಕೆ.ಎನ್‌.ರಾಜಣ್ಣ ಉದ್ಘಾಟಿಸಿದರು.  | Kannada Prabha

ಸಾರಾಂಶ

ಈ ಕ್ರೀಡಾಕೂಟಕ್ಕೆ ರಾಜ್ಯದಿಂದ 28 ಬಾಲಕರ ತಂಡ 16 ಬಾಲಕಿಯರ ತಂಡ ಪಾಲ್ಗೊಂಡಿದ್ದು, ರಾಯಚೂರು, ಗುಲ್ಬರ್ಗ, ದಾವಣಗೆರೆ, ಚಿತ್ರದುರ್ಗ, ಪುತ್ತೂರು ,ಶಿರಸಿ, ಮೈಸೂರು , ಚಾಮರಾಜನಗರ , ತುಮಕೂರು , ಬೆಂಗಳೂರು ,ಮುಳಬಾಗಿಲು, ಚಿಂತಾಮಣಿ ,ಚಿಕ್ಕಬಳ್ಳಾಪುರ, ಧರ್ಮಪುರ ಸೇರಿದಂತೆ ಸ್ಥಳೀಯ ಮಧುಗಿರಿಯ ಆಟಗಾರರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಬಾಲ್ ಬ್ಯಾಡ್ಮಿಂಟನ್ ಆಟಗಾರರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.2ರ ಅಡಿ ಮೀಸಲಾತಿ ಸಿಗಲು ಅಸೋಸಿಯೇಷನ್ ಪದಾಧಿಕಾರಿಗಳ ನಿಯೋಗದೊಂದಿಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಕೆ. ಎನ್. ರಾಜಣ್ಣ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಧುಗಿರಿ ಸ್ಪೋರ್ಟ್ಸ್ ಕ್ಲಬ್ ಮತ್ತು ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದೊಂದಿಗೆ ರಾಜ್ಯಮಟ್ಟದ 14 ವರ್ಷದೊಳಗಿನ ಸಬ್ ಜೂನಿಯರ್ ಬಾಲಕರ ಮತ್ತು ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಾ. ಜಿ .ಪರಮೇಶ್ವರ್ ಅವರು ಸ್ವತ: ಬಾಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು ಅವರೊಡನೆ ಚರ್ಚಿಸಿ ಮುಂದಿನ ದಿನಗಳಲ್ಲಿ ಮೀಸಲು ದೊರೆಯುವಂತೆ ಮಾಡುವುದಾಗಿ ತಿಳಿಸಿದರು.

ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಸ್ಫೂರ್ತಿಯಿಂದ ಆಡಬೇಕು ಎಂದು ತಿಳಿಸಿ, ಮಧುಗಿರಿಯಲ್ಲಿ ಸತತವಾಗಿ ಎರಡನೇ ಬಾರಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುತ್ತಿರುವ ಮಧುಗಿರಿ ಸ್ಪೋರ್ಟ್ಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳನ್ನು ಪ್ರಶಂಸಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಎಂ. ಕೆ. ನಂಜುಂಡಯ್ಯ, ಎನ್. ಗಂಗಣ್ಣ ,ಯುವ ಮುಖಂಡ ಹರ್ಷ ಕುರುಬರಹಳ್ಳಿ, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸೇರಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಮಧುಗಿರಿ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಡಾ. ಎಂ. ಜಿ .ಸೋಮಶೇಖರ್, ಅಧ್ಯಕ್ಷ ಬಿ.ಎಸ್.ನರೇಂದ್ರ ಕುಮಾರ್, ಕಾರ್ಯಾಧ್ಯಕ್ಷ ತಾತಾ ಲಕ್ಷ್ಮಣ್ ,ಉಪಾಧ್ಯಕ್ಷರಾದ ಟಿ.ಡಿ. ಅಶ್ವತ್ತನಾರಾಯಣ್, ಎಂ. ಟಿ. ಯೋಗೀಶ್, ಎಂ.ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ್ ,ಸಹ ಕಾರ್ಯದರ್ಶಿಗಳಾದ ಸಿ. ಶಿವಕುಮಾರ್ , ಡಾ. ಧನಂಜಯ, ಜಿ.ಪರಮೇಶ್ವರಯ್ಯ, ಸಂಘಟನಾ ಕಾರ್ಯದರ್ಶಿ ಕಾಮರಾಜು ,ಪತ್ರಿಕಾ ಕಾರ್ಯದರ್ಶಿ ಜಿ. ನಾರಾಯಣರಾಜು, ನಿರ್ದೇಶಕರಾದ ಎನ್. ಮೋಹನ್ ಕುಮಾರ್, ಎಸ್. ರವಿ, ಎಂ.ಆರ್. ಶೇಖರ್ , ಎಂ.ಜಿ .ರಂಗರಾಜು, ಕೆಂಚೇಶ್ ,ಕೆ. ವಾಸುದೇವರಾಜು, ಬಿ.ಕೆ. ಮಂಜುನಾಥ್ ಹಾಗೂ ರವಿಕಾಂತ್ ಇದ್ದರು.

ಈ ಕ್ರೀಡಾಕೂಟಕ್ಕೆ ರಾಜ್ಯದಿಂದ 28 ಬಾಲಕರ ತಂಡ 16 ಬಾಲಕಿಯರ ತಂಡ ಪಾಲ್ಗೊಂಡಿದ್ದು, ರಾಯಚೂರು, ಗುಲ್ಬರ್ಗ, ದಾವಣಗೆರೆ, ಚಿತ್ರದುರ್ಗ, ಪುತ್ತೂರು ,ಶಿರಸಿ, ಮೈಸೂರು , ಚಾಮರಾಜನಗರ , ತುಮಕೂರು , ಬೆಂಗಳೂರು ,ಮುಳಬಾಗಿಲು, ಚಿಂತಾಮಣಿ ,ಚಿಕ್ಕಬಳ್ಳಾಪುರ, ಧರ್ಮಪುರ ಸೇರಿದಂತೆ ಸ್ಥಳೀಯ ಮಧುಗಿರಿಯ ಆಟಗಾರರು ಪಾಲ್ಗೊಂಡಿದ್ದರು.

ಈ ಪಂದ್ಯಾವಳಿಗಳ ಮುಖ್ಯ ತೀರ್ಪುಗಾರರಾಗಿ ಮುರಳಿ ಮತ್ತು ತಂಡ ಕಾರ್ಯನಿರ್ವಹಿಸಿತು.

ರಾಷ್ಟ್ರೀಯ ಕ್ರೀಡಾಪಟುಗಳಾದ ಬಾಬುರೆಡ್ಡಿ, ದಿವಾಕರ್ ,ತನುಶ್ರೀ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಬಲದಂಡೆ ನಾಲೆಗೆ ನೀರು: ಕುಂದೂರಲ್ಲಿ ರೇಣು ಬಾಗಿನ
ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸೋಣ: ಎನ್‌.ಎಸ್‌.ಬೋಸರಾಜು