ದಾಬಸ್ಪೇಟೆ: ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೆಕೆರೆ, ಹೊಸನಿಜಗಲ್, ದೇವರಹೊಸಹಳ್ಳಿ ಗ್ರಾಮಗಳಲ್ಲಿ ಟ್ರಾನ್ಸ್ ಫಾರ್ಮರ್ ಸರಿಯಿಲ್ಲದೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ರೈತರು ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ಲೈನ್ ಗಳು ಕೈಗೆ ಎಟುಕುತ್ತಿದ್ದು ಬೆಸ್ಕಾಂ ಇಲಾಖೆಗೆ ಸರಿಪಡಿಸುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದರು.
ಬಳಿಕ ಬೆಸ್ಕಾಂ ಇಲಾಖೆಯ ಎಇ ಅವರನ್ನು ಕರೆಸಿಕೊಂಡ ಶಾಸಕರು, ಈ ಸಮಸ್ಯೆಗಳಿಗೆ ಅತಿ ಶೀಘ್ರವಾಗಿ ಪರಿಹಾರ ಕಲ್ಪಿಸಿಕೊಡುವಂತೆ ಸೂಚಿಸಿದರು.
ಟಿಡಿಪಿಎಸ್ ಕಂಪನಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದರೂ ಸಕಾರಣ ನೀಡದೆ ಕೆಲಸದಿಂದ ತೆಗೆದಿದ್ದಾರೆಂದು ಉದ್ಯೋಗಿಯೊಬ್ಬರು ದೂರಿದಾಗ ಕಂಪನಿ ಸಿಬ್ಬಂದಿಗೆ ಕರೆ ಮಾಡಿ ಮಾತನಾಡಿದ ಶಾಸಕರು ಕೂಡಲೇ ವಜಾ ಮಾಡಿರುವ ಕಾರ್ಮಿಕನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ನಿಮ್ಮ ಮೊದಲ ಆದ್ಯತೆ ಸ್ಥಳೀಯರಿಗೆ ನೀಡಬೇಕು. ಮುಂದಿನ ದಿನಗಳಲ್ಲಿ ಕಂಪನಿಗಳ ಸಭೆ ಕರೆದು ಚರ್ಚಿಸುತ್ತೇನೆ ಎಂದರು.ಶಾಲೆಯ ಬಗ್ಗೆ ಕಾಳಜಿ:
ಬಳಿಕ ಮಾತನಾಡಿದ ಶಾಸಕರು, ಇಲಾಖೆಗಳಲ್ಲಿ ರೈತರು, ಬಡವರ ಕೆಲಸಗಳನ್ನು ವಿಳಂಬ ಮಾಡಬೇಡಿ. ಕಚೇರಿಗಳಲ್ಲಿ ಕೆಲ ಸಿಬ್ಬಂದಿ ರೈತರನ್ನು ಅಲೆದಾಡುಸುತ್ತಿರುವುದು, ಲಂಚಕ್ಕೆ ಬೇಡಿಕೆ ಇಡುವ ಮಾಹಿತಿ ಬಂದಿದ್ದು, ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ರಾಮಾಂಜಿನೇಯ, ಶಿವಕುಮಾರ್, ಹೊಸಳಯ್ಯ, ದಿನೇಶ್ ನಾಯಕ್, ಯೋಗಾನಂದೀಶ್, ಪಾರ್ಥರಾಜು, ನಾರಾಯಣ್, ಸಿದ್ದರಾಜು, ನಾಗರಾಜು, ಖಲೀಂಉಲ್ಲಾ, ನಯಾಜ್ ಖಾನ್, ಬೈಲಪ್ಪ ಇತರರಿದ್ದರು.ಪೋಟೋ 2 :
ದಾಬಸ್ಪೇಟೆಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಸಾರ್ವಜನಿಕರ ಕುಂದುಕೊರತೆಗಳಗಳನ್ನು ಆಲಿಸಿದರು. ಅಗಳಕುಪ್ಪೆ ಗೋವಿಂದರಾಜು, ರಾಮಾಂಜಿನೇಯ, ಶಿವಕುಮಾರ್ ಇತರರಿದ್ದರು.