- ಮುಂದೆಯೂ ಪ್ರಧಾನಿ ಆಗಿರಬೇಕು: ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ - - -
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ 25 ವರ್ಷಗಳ ಕಾಲ ನಡೆಸಿದ ಆಡಳಿತವು ಕಳಂಕರಹಿತವಾಗಿದೆ. ಪ್ರಧಾನಿ ಆದ ಬಳಿಕ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಈ ಮೂಲಕ ವಿಶ್ವಮಟ್ಟದಲ್ಲಿ ಭಾರತದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಬಣ್ಣಿಸಿದರು.
ನಗರದ ದೇವರಾಜ ಅರಸು ಬಡಾವಣೆಯ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ವರ್ಷದ ಜನ್ಮದಿನ ಹಾಗೂ 25 ವರ್ಷಗಳ ಸುದೀರ್ಘವಾದ ಆಡಳಿತ ನೀಡಿದ ಕಾರಣಕ್ಕೆ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ದೇಶದ ರಸ್ತೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗಿದೆ. “ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂಬ ಪ್ರಧಾನಿಯವರ ಭ್ರಷ್ಟಾಚಾರ ವಿರೋಧಿ ನಿಲುವಿನ ಆಡಳಿತಕ್ಕೆ ವಿಶ್ವವೇ ತಲೆಬಾಗಿದೆ. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರ ನಾಯಕತ್ವ ಮುಂದುವರಿಯಬೇಕು. ಮುಂದಿನ ಅವಧಿಯಲ್ಲಿಯೂ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿ ಆಗಬೇಕು ಎಂಬುದು ತಮ್ಮ ಆಶಯ ಎಂದರು.
ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ, ಗೋಪಾಲರಾವ್ ಮಾನೆ, ಗಾಯತ್ರಿ ಖಂಡೋಜಿ ರಾವ್, ಬಿ.ರಮೇಶ್ ನಾಯಕ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಗುರು ಸೋಗಿ, ಟಿಂಕರ್ ಮಂಜಣ್ಣ, ಭಾಗ್ಯ ಪಿಸಾಳೆ, ಮಹೇಂದ್ರ ಹೆಬ್ಬಾಳ, ಕಿಶೋರ್, ರಾಜಕುಮಾರ್ ಶಿವಳ್ಳಿ, ನಂದನಕುಮಾರ ಅಣಬೇರು, ಅಂಜಿನಪ್ಪ, ಆನೆಕೊಂಡ ಪುಟ್ಟಣ್ಣ, ನಿಂಗರಾಜ, ಎಸ್. ಬಾಬು, ರವಿಕುಮಾರ್, ಯರಗುಂಟೆ ಮಂಜು, ದೇವರಾಜ್, ಗೋವಿಂದ ರಾಜು, ಮಾಲತೇಶ, ದುರುಗೇಶ್, ಹನುಮಂತ, ಯರಿಸ್ವಾಮಿ, ಶಿವಾನಂದ, ಶಿವಕುಮಾರ್ ದೇವರಡ್ಡಿ, ಕುಮಾರ್, ಬಾವಾಜಿ, ಎಸ್ಕೆಪಿ ರಾಜು, ಶಂಕರ್, ಮಂಜುಳಾ ಇಟಗಿ ಮತ್ತಿತರರು ಹಾಜರಿದ್ದರು. -17ಕೆಡಿವಿಜಿ39: ದಾವಣಗೆರೆಯ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಯಶವಂತ ರಾವ್ ಜಾಧವ್ ಉದ್ಘಾಟಿಸಿದರು.
(ಬಾಕ್ಸ್)
ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ 76ನೇ ಜನ್ಮದಿನದ ಪ್ರಯುಕ್ತ ಗುರುವಾರ ಬಿಜೆಪಿಯಿಂದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಮಂಡಲ ಅಧ್ಯಕ್ಷ ತಾರೇಶ್ವರ ನಾಯಕ್ ಅಧ್ಯಕ್ಷತೆಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಎಂ.ಸುರೇಶ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಪ್ರಧಾನ ಕಾರ್ಯದರ್ಶಿಗಳಾದ ಗುತ್ತೂರು ಮಂಜುನಾಥ, ಡಿ.ವಿ. ಜಯರುದ್ರಪ್ಪ, ಕೆ.ಜಿ. ಕಲ್ಲೇಶ್, ದುರ್ಗೇಶ್, ಕೆ.ಎಂ.ವೀರೇಶ್, ಪೂಜಾ ಶ್ರೀನಿವಾಸ, ಜಲ್ಲಿ ನಾಗರಾಜು, ಮಂಜುನಾಥ, ಸತೀಶ್, ವಾಸು ಸಾಕ್ರೆ, ಕೊಟ್ರೇಶ್ ಗೌಡ, ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.
- - -