ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಂಪನ್ಮೂಲ ವ್ಯಕ್ತಿ ಡಾ.ಪ್ರಸನ್ನ ಕಾಕುಂಜೆ ಆರೋಗ್ಯದ ಸೂತ್ರಗಳನ್ನು ತಿಳಿಸಿದರು. ವಾಹನಗಳಂತೆ ದೇಹಕ್ಕೆ ಕೂಡಾ ಏನು, ಹೇಗೆ, ಎಷ್ಟು ತಿನ್ನಬೇಕು ಅಂತ ಅಗತ್ಯ ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.ಅಂಚೆ ಇಲಾಖೆಯ ಸಂಪನ್ಮೂಲ ವ್ಯಕ್ತಿ , ಪುತ್ತೂರು ಮಾರುಕಟ್ಟೆ ವ್ಯವಸ್ಥಾಪಕ ಗುರು ಪ್ರಸಾದ್ ಕೆ.ಎಸ್.ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಅಂಚೆ ಇಲಾಖೆಯ ಮೂಲಕ ಜಾರಿಗೊಳ್ಳುತ್ತಿವೆ. ಆಧಾರ್, ಎಟಿಎಂ, ಜೀವ, ಜನ ಸುರಕ್ಷಾ, ಜೀವನ ಪ್ರಮಾಣ ಪತ್ರ, ಸಮೂಹ ಅಪಘಾತ , ಆರೋಗ್ಯ ಇತ್ಯಾದಿ ವಿಮಾ ಯೋಜನೆಗಳ ಮಾಹಿತಿ ನೀಡಿದರು. ದೇಶಾದ್ಯಂತದ ಒಂದೂವರೆ ಲಕ್ಷ ಅಂಚೆ ಕಚೇರಿಯಲ್ಲಿ ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.
ಸೈಬರ್ ಸೆಕ್ಯೂರಿಟಿ ತಂತ್ರಜ್ಙ ಚಿರಾಗ್ ಸುವರ್ಣ ಮಾಹಿತಿ ನೀಡಿದರು. ಸೈಬರ್ ಅಪರಾಧಕ್ಕೆ ವಯಸ್ಸಿನ ಮಿತಿ ಇಲ್ಲ. ಯಾರೂ ಯಾವಾಗ ಬೇಕಾದರೂ ಹ್ಯಾಕರ್ಸ್ ಹಣ, ಮಾಹಿತಿ ಕದಿಯ ಬಹುದು. ಆದುದರಿಂದ ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದರು.ಮಂಗಳೂರು ಸಬ್ ಇನ್ಸ್ಪೆಕ್ಟರ್ ಕುಂಜತ್ತಬೈಲ್ ಮೋಹನ್, ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.