2 ವರ್ಷಕ್ಕಿಂತ ಈ ಬಾರಿ ಹೆಚ್ಚು ಕರ ಸಂಗ್ರಹ

KannadaprabhaNewsNetwork |  
Published : May 26, 2025, 12:00 AM IST
2.ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿ | Kannada Prabha

ಸಾರಾಂಶ

ರಾಮನಗರ: ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ (2024 -25) ರಾಮನಗರ ಜಿಲ್ಲಾ ಪಂಚಾಯಿತಿ ಅತಿ ಹೆಚ್ಚು 56.71 ಕೋಟಿ ರು. ತೆರಿಗೆ ವಸೂಲಿ ಮಾಡಿದೆ.

ರಾಮನಗರ: ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ (2024 -25) ರಾಮನಗರ ಜಿಲ್ಲಾ ಪಂಚಾಯಿತಿ ಅತಿ ಹೆಚ್ಚು 56.71 ಕೋಟಿ ರು. ತೆರಿಗೆ ವಸೂಲಿ ಮಾಡಿದೆ.

ಪ್ರಸ್ತುತ ಆರ್ಥಿಕ ವರ್ಷ ಪ್ರಾರಂಭಗೊಂಡು ಎರಡು ತಿಂಗಳಾಗಿದೆ. ಕಳೆದ 2023-24ನೇ ಸಾಲಿಗೆ ಹೋಲಿಕೆ ಮಾಡಿದರೆ 2024-25ರಲ್ಲಿ 14.89 ಕೋಟಿ ರು. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಈ ಮೂಲಕ ಗ್ರಾಪಂಗಳು ತೆರಿಗೆ ವಸೂಲಿಯಲ್ಲಿ ಶೇ.92.35ರಷ್ಟು ಗುರಿ ಸಾಧಿಸಿವೆ.

ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ:

ಜಿಲ್ಲಾ ವ್ಯಾಪ್ತಿಯ 126 ಗ್ರಾಮ ಪಂಚಾಯಿತಿಗಳಿಂದ 2022-23ನೇ ಸಾಲಿನಲ್ಲಿ 41.57 ಕೋಟಿ ರು. ತೆರಿಗೆ ಸಂಗ್ರಹದ ಗುರಿಯಲ್ಲಿ 33.03 ಕೋಟಿ ರು ಸಂಗ್ರಹಿಸಲಾಗಿದ್ದರೆ, 2023-24ನೇ ಸಾಲಿನಲ್ಲಿ 50.62 ಕೋಟಿ ರು ಗುರಿಯಲ್ಲಿ 41.82 ಕೋಟಿ ರು. ವಸೂಲಿಯಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 61.40 ಕೋಟಿ ರು ಗುರಿ ಪೈಕಿ 56.71ಕೋಟಿ ರು ತೆರಿಗೆ ಸಂಗ್ರಹಿಸಲಾಗಿದೆ.

ಜಿಲ್ಲೆಯ 5 ತಾಲೂಕುಗಳ ಪೈಕಿ ಅತಿ ಹೆಚ್ಚು ಹಾರೋಹಳ್ಳಿ ತಾಲೂಕಿನ 11 ಗ್ರಾಮ ಪಂಚಾಯಿತಿಗಳು 8.16 ಕೋಟಿ ರು. ಗುರಿ ಪೈಕಿ 8.11 ಕೋಟಿ ರು. ತೆರಿಗೆ ಸಂಗ್ರಹಿಸಿ ಶೇ. 99.36ರಷ್ಟು ಪ್ರಗತಿ ಸಾಧಿಸಿದ್ದರೆ, ಅತಿ ಕಡಿಮೆ ಚನ್ನಪಟ್ಟಣ ತಾಲೂಕಿನ 32 ಗ್ರಾಪಂಗಳು 8.11 ಕೋಟಿ ರು. ಗುರಿ ಪೈಕಿ 6.34 ಕೋಟಿ 34 ಲಕ್ಷ ರು. ಮಾತ್ರ ತೆರಿಗೆ ವಸೂಲಿ ಮಾಡಿವೆ.

29 ಗ್ರಾಪಂಗಳಿಂದ ಶೇ.100ಕ್ಕಿಂತ ಹೆಚ್ಚಿನ ಗುರಿ ಸಾಧನೆ :

ಜಿಲ್ಲೆಯ 126 ಗ್ರಾಪಂಗಳ ಪೈಕಿ 29 ಗ್ರಾಪಂಗಳು ತೆರಿಗೆ ವಸೂಲಿಯಲ್ಲಿ ಶೇ.100ಕ್ಕಿಂತಲೂ ಹೆಚ್ಚಿನ ಗುರಿ ಸಾಧನೆ ಮಾಡಿವೆ.

ಚನ್ನಪಟ್ಟಣ ತಾಲೂಕಿನಲ್ಲಿ 1, ಹಾರೋಹಳ್ಳಿ ತಾಲೂಕಿನಲ್ಲಿ 2, ಕನಕಪುರ ತಾಲೂಕಿನಲ್ಲಿ 14, ಮಾಗಡಿ ತಾಲೂಕಿನಲ್ಲಿ 8 ಹಾಗೂ ರಾಮನಗರ ತಾಲೂಕಿನಲ್ಲಿ 4 ಗ್ರಾಮ ಪಂಚಾಯಿತಿಗಳು ಗುರಿ ಮೀರಿ ತೆರಿಗೆ ಸಂಗ್ರಹ ಮಾಡಿವೆ.

ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾಪಂಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ರಾಮನಗರ ಜಿಲ್ಲೆಯ ಗ್ರಾಪಂಗಳು ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ ಮಾಡಿರುವುದು ವಿಶೇಷ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ 1993 ಯ‌ನ್ವಯ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಪಂಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ. ಆದರೆ ಹೆಚ್ಚಿನ ಗ್ರಾಪಂಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯವಹಿಸಿದ್ದವು. ಆದರೀಗ ರಾಮನಗರ ಜಿಲ್ಲೆಯ 126 ಗ್ರಾಪಂಗಳು ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ತೆರಿಗೆ ವಸೂಲಿ ಮಾಡಿವೆ. ಇದು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು.

ಶೇ.100ಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾಪಂಗಳು:

ಚನ್ನಪಟ್ಟಣ ತಾಲೂಕಿನ ಮೂಡಗೆರೆ, ಹಾರೋಹಳ್ಳಿ ತಾಲೂಕಿನ ಕೊಳ್ಳಿಗನಹಳ್ಳಿ, ಚೀಲೂರು, ಕನಕಪುರ ತಾಲೂಕಿನ ಚಿಕ್ಕಮುದವಾಡಿ, ಐ.ಗೊಲ್ಲಹಳ್ಳಿ, ಮುಳ್ಳಹಳ್ಳಿ, ಹೂಕುಂದ, ಹುಣಸನಹಳ್ಳಿ, ಅರೆಕಟ್ಟೆ ದೊಡ್ಡಿ, ಮರಳುಬೇಕುಪ್ಪೆ, ನಲ್ಲಹಳ್ಳಿ, ದೊಡ್ಡಾಲಹಳ್ಳಿ, ಟಿ.ಬೇಕಪ್ಪೆ, ನಾರಾಯಣಪುರ, ಕೊಳಗೊಂಡನಹಳ್ಳಿ, ಉಯ್ಯಂಬಳ್ಳಿ, ಸೊಮಂದ್ಯನಹಳ್ಳಿ ಗ್ರಾಪಂಗಳು.

ಮಾಗಡಿ ತಾಲೂಕಿನ ಆಗಲಕೋಟೆ, ಹುಳ್ಳೇನಹಳ್ಳಿ , ಅದರಂಗಿ, ಸೋಲೂರು, ಕುದೂರು, ಸಾತನೂರು, ಮಾಡ್ ಬಾಳ್ , ಕಲ್ಯಾ, ರಾಮನಗರ ತಾಲೂಕಿನ ದೊಡ್ಡಗಂಗವಾಡಿ, ಲಕ್ಷ್ಮೀಪುರ, ಅಕ್ಕೂರು, ಬನ್ನಿಕುಪ್ಪೆ (ಕೆ) ಗ್ರಾಮ ಪಂಚಾಯಿತಿಗಳು

ಬಾಕ್ಸ್‌.............

ಗ್ರಾಪಂಗಳ ತೆರಿಗೆ ಸಂಗ್ರಹ ವಿವರ

ತಾಲೂಕುಗ್ರಾಪಂಗಳುಬೇಡಿಕೆ ಸಂಗ್ರಹಶೇ.ವಾರುಪ್ರಗತಿ

ಚನ್ನಪಟ್ಟಣ328,11,20,684.726,34,53,765.9078.22

ಕನಕಪುರ317,66,79,078.827,28,00,479.5894.92

ಮಾಗಡಿ327,99,13,211.347,08,41,463.7488.64

ರಾಮನಗರ2029,47,43,265.9627,89,20,777.4694.63

ಹಾರೋಹಳ್ಳಿ118,16,35,781.868,11,20,171.2099.36

---------------------------------------------------------------------------------------------------------

ಒಟ್ಟು12661,40,92,022.7056,71,36,657.8892.35

----------------------------------------------------------------------------------------------------------

ಕೋಟ್ ....................

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರ ವಸೂಲಿಗಾರರು ಮತ್ತು ಕಂಪ್ಯೂಟರ್ ಆಪರೇಟರ್ ಗಳು ಕರ ವಸೂಲಾತಿ ಬಗ್ಗೆ ಸಾರ್ವಜನಿಕರಲ್ಲಿ ತೆರಿಗೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಯಿತು. ವಿಶೇಷ ಶ್ರಮ ವಹಿಸಿದ ಕಾರಣ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

-ಅನ್ಮೋಲ್ ಜೈನ್ , ಸಿಇಒ, ಜಿಪಂ, ರಾಮನಗರ

24ಕೆಆರ್ ಎಂಎನ್ 2,3.ಜೆಪಿಜಿ

2.ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿ

3.ಜಿಪಂ ಸಿಇಒ ಅನ್ಮೋಲ್ ಜೈನ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ