ಶಿವಾಜಿ ಸರ್ಕಲ್ ನಲ್ಲಿ ಕೆಲ ಕಾಲ ಬಾಡಿಗೆ ಟ್ಯಾಕ್ಸಿ ವಾಹನಗಳನ್ನು ತಡೆದು ಚಾಲಕರಿಗೆ ಕೆಲ ಹೊತ್ತು ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಲಾಯಿತು.
ಮುಂಡಗೋಡ: ಆಟೋ, ಟ್ಯಾಕ್ಸಿ ಮುಂತಾದ ಬಾಡಿಗೆ ವಾಹನ ಚಾಲಕ ಹಾಗೂ ಮಾಲೀಕರಿಗೆ ಶುಕ್ರವಾರ ಮುಂಡಗೋಡ ಪೊಲೀಸರಿಂದ ಕಾನೂನು ಪಾಠ ಮಾಡುವ ಮೂಲಕ ಜಾಗೃತಿ ಮೂಡಿಸಿ ಎಚ್ಚರಿಸಲಾಯಿತು.
ಶುಕ್ರವಾರ ಇಲ್ಲಿಯ ಶಿವಾಜಿ ಸರ್ಕಲ್ ನಲ್ಲಿ ಕೆಲ ಕಾಲ ಬಾಡಿಗೆ ಟ್ಯಾಕ್ಸಿ ವಾಹನಗಳನ್ನು ತಡೆದು ಚಾಲಕರಿಗೆ ಕೆಲ ಹೊತ್ತು ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಲಾಯಿತು. ನೋಂದಣಿ ದಾಖಲೆ, ಚಾಲನಾ ಪರವಾನಗಿ ಹಾಗೂ ವಿಮೆಯನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಒಂದಾನು ವೇಳೆ ಅಗತ್ಯ ದಾಖಲೆ ಇಲ್ಲದವರು ತಕ್ಷಣ ದಾಖಲೆಗಳನ್ನು ಕಾನೂನು ಬದ್ಧವಾಗಿಸಿಕೊಳ್ಳಬೇಕು. ಯಾರು ಕೂಡ ಅದ್ದಾದಿಡ್ಡಿ ಚಲಾಯಿಸುವಂತಿಲ್ಲ. ಕಾನೂನು ಮೀರಿ ವಾಹನ ಚಲಾಯಿಸಿದರೆ ಯಾವುದೇ ಮುಲಾಜಿಲ್ಲದೆ ಕೇಸ್ ಹಾಕಿ ದಂಡ ವಸೂಲಿ ಮಾಡಲಾಗುವುದೆಂದು ಮುಂಡಗೋಡ ಠಾಣೆ ಸಿಪಿಐ ರಂಗನಾಥ ನೀಲಮ್ಮನವರ ಟ್ಯಾಕ್ಸಿ ವಾಹನ ಚಾಲಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಎಸ್ಐ ಶಂಕರ ರಾಥೋಡ, ಸೋಮಶೇಖರ ಮೇತ್ರಿ, ಮಾಲತೇಶ ಮುದೋಳ ಮುಂತಾದ ಪೊಲೀಸ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಟೋ, ಟ್ಯಾಕ್ಸಿ ಮುಂತಾದ ಬಾಡಿಗೆ ವಾಹನ ಚಾಲಕ ಹಾಗೂ ಮಾಲೀಕರಿಗೆ ಪೊಲೀಸರು ಜಾಗೃತಿ ಮೂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.