ಕೊಪ್ಪಳ: ಸಂಗೀತದಿಂದ ಬದುಕು ಪರಿಪೂರ್ಣತೆ ಪಡೆಯುತ್ತದೆ ಎಂದು ಪ್ರಹ್ಲಾದ ಅಗಳಿ ಹೇಳಿದರು.
ಸಂಗೀತ ಎಲ್ಲರಿಗೂ ಒಲಿಯುವಂತದ್ದಲ್ಲ ಅದಕ್ಕೆ ವಿಶೇಷ ಸಿದ್ದಿ ಬೇಕು, ತಪಸ್ಸಿನಂತೆ ಆಳವಾಗಿ ಅಭ್ಯಾಸ ಕೈಗೊಂಡಾಗ ಮಾತ್ರ ಸಂಗೀತದ ಸಿದ್ಧಿ ಸಾಧ್ಯ, ಸಂಗೀತದಿಂದ ಮಾನಸಿಕ ಸದೃಢತೆ ಏಕಾಗ್ರತೆ ಹೆಚ್ಚುತ್ತದೆ. ಸಂಗೀತದಿಂದ ಮಾನಸಿಕ ನೆಮ್ಮದಿ ಬದುಕಿಗೊಂದು ಪರಿಪೂರ್ಣತೆ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿ ಪರಶುರಾಮ ನಾಯಕ ಮಾತನಾಡಿ, ಪ್ರಯತ್ನದಿಂದ ಮನುಷ್ಯ ಏನನ್ನಾದರೂ ಸಾಧನೆ ಮಾಡಬಹುದು. ಸಾಧಿಸುವ ಛಲ ಒಂದಿದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಕೂಡ ಜಯ ಸಾಧಿಸಬಹುದು.ಅದರಲ್ಲೂ ಕಲೆ, ಸಂಸ್ಕೃತಿ ಅಧ್ಯಯನದಲ್ಲಿ ವಿಶೇಷ ಮುತುವರ್ಜಿಯಿಂದ ಅಭ್ಯಾಸಸಿದರೆ ಯಶಸ್ಸು ಲಭಿಸುತ್ತದೆ ಎಂದರು.ಅಧ್ಯಕ್ಷತೆಯನ್ನು ಕೀರ್ತಿ ಮೇಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಎ.ವಂದಾಲ,ಮಂಜುಳಾ ಶ್ಯಾವಿ, ರೇವಣಸಿದ್ದೇಶ ಇತರರಿದ್ದರು.
ವಾದ್ಯವೃಂದದ ಕೀಬೋರ್ಡ್ ನಲ್ಲಿ ರಾಮಚಂದ್ರಪ್ಪ ಉಪ್ಪಾರ,ಕೊಳಲಿನಲ್ಲಿ ನಾಗರಾಜ ಶ್ಯಾವಿ, ಗಿಟಾರ್ ನಲ್ಲಿ ತಿಪ್ಪೇಶ ಜೆ.ಎಚ್.ಎಂ, ತಬಲಾದಲ್ಲಿ ರಾಘವೇಂದ್ರ ಗಂಗಾವತಿ ಹಾಗೂ ಮಾರುತಿ ದೊಡ್ಡಮನಿ, ಡೋಲಕ್ನಲ್ಲಿ ನಂದೀಶ ಹಿರೇಮಠ, ರಿದಮ ಪ್ಯಾಡನಲ್ಲಿ ಸಂಜನ ಬೆಲ್ಲದ ಸಾಥ್ ನೀಡಿದರು.