ಕೊಟ್ಟೂರು: ನಾಗರ, ಭೀಮನ ಅಮಾವಾಸ್ಯೆ ಮತ್ತು ಶ್ರಾವಣ ಮಾಸ ಆರಂಭದ ಅಮಾವಾಸ್ಯೆ ನಿಮಿತ್ತ ಇಲ್ಲಿನ ಹೆಸರಾಂತ ಕೊಟ್ಟೂರು ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ಸಾವಿರಾರು ಭಕ್ತರು ಪಟ್ಟಣಕ್ಕೆ ಆಗಮಿಸಿದರು.
9 ಸಾವಿರ ಹೋಳಿಗೆ ವಿತರಣೆ
ಆಗಮಿಸಿದ ಭಕ್ತರಿಗಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶ್ರೀಗುರು ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿಯವರು 9 ಸಾವಿರ ಹೋಳಿಗೆಗಳನ್ನು ತಯಾರಿಸಿ ಉಣಬಡಿಸುವ ಸೇವೆ ಸಲ್ಲಿಸಿದರು. ಈ ಪರಿಯ ಹೋಳಿಗೆಗಳನ್ನು ಮಾಡಲೆಂದೇ ಶಿಗ್ಲಿ ಗ್ರಾಮದಿಂದ ಅಧಿಕ ಸಂಖ್ಯೆಯ ಮಹಿಳೆಯರು ಮತ್ತು ಅಡುಗೆ ಸಿಬ್ಬಂದಿ ಮಂಗಳವಾರ ಆಗಮಿಸಿ ಹಿರೇಮಠದ ದೇವಸ್ಥಾನದ ಮುಂಭಾಗದ ಆವರಣದಲ್ಲಿ ರಾತ್ರಿ ಇಡೀ ಹೊಳಿಗೆಗಳನ್ನು ಸಿದ್ಧಪಡಿಸಿದರು. ಭೀಮನ ಅಮಾವಾಸ್ಯೆಯಿಂದಾಗಿ ಪಟ್ಟಣದ ದೇವಸ್ಥಾನಗಳು, ರಸ್ತೆಗಳು ಮತ್ತಿತರ ಪ್ರದೇಶಗಳಲ್ಲಿ ಜನದಟ್ಟಣೆ ಕಂಡು ಬಂತು.